ತಾನೇ ಬೆಳೆದ ತರಕಾರಿಯನ್ನು ಸ್ವಯಂ ಮಾರಲು ಮುಂದಾದ ಜಿ.ಪಂ. ಸದಸ್ಯೆ!


Team Udayavani, Apr 12, 2021, 5:10 AM IST

ತಾನೇ ಬೆಳೆದ ತರಕಾರಿಯನ್ನು ಸ್ವಯಂ ಮಾರಲು ಮುಂದಾದ ಜಿ.ಪಂ. ಸದಸ್ಯೆ!

ಬಜಪೆ: ತರಕಾರಿ ಬೆಳೆದ ಕೃಷಿಕನಿಗೆ ಸಿಗುವ ಲಾಭದ ಪ್ರಮಾಣ ಒಂದಷ್ಟು ಆದರೆ ಅದರಲ್ಲಿ ಮಧ್ಯವರ್ತಿಗಳಿಗೆ ಸಿಗುವ ಪಾಲೇ ಹೆಚ್ಚು. ಇನ್ನು ತರಕಾರಿ ಬೆಳೆಗೆ ಒಳ್ಳೆಯ ದರ ಸಿಗದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ತಾವು ಬೆಳೆದ ತರಕಾರಿಯನ್ನು ಯಾವ ಮಧ್ಯವರ್ತಿಗಳನ್ನು ಆಶ್ರಯಿಸದೆ ತಾವೇ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿರುವ ಬಜಪೆ ಕೃಷಿಕರೋರ್ವರ ನಡೆ ಮಾದರಿಯಾಗಿದೆ.

ಬಜಪೆ ಜಿ.ಪಂ. ಸದಸ್ಯೆ, ಸ್ವತಃ ಕೃಷಿಕರಾಗಿರುವ ವಸಂತಿ ಕಿಶೋರ್‌ ಅವರು ಒಮ್ಮೆ ಬೆಳೆದ ತರಕಾರಿಯನ್ನು ಮಾರಲು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ಮಧ್ಯವರ್ತಿಗಳ ಹಾವಳಿ, ಬೆಂಬಲ ಬೆಲೆ ಸಿಗದಿದ್ದಾಗ ಬೇಸತ್ತು ಇದಕ್ಕೆ ತಾವೇ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮುಂದಾದರು. ಆ ದಾರಿಯೇ ಸ್ವತಃ ಬೆಳೆದ ತರಕಾರಿಯನ್ನು ತಾವೇ ಮಾರಾಟ ಮಾಡುವುದಾಗಿತ್ತು. ಇದರಿಂದ ಯಾವುದೇ ದಲ್ಲಾಳಿಗಳ ಕಾಟ ಇರುವುದಿಲ್ಲ ಎಂದು ಯೋಚಿಸಿದರು. ಅದರಂತೆ ಪೆರ್ಮುದೆಯ ತಮ್ಮ ಮನೆ ಎದುರೇ ತರಕಾರಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ರಾಜ್ಯ ಹೆದ್ದಾರಿ 67 ಮನೆಯ ಸಮೀಪ ಇರುವುದರಿಂದ ಇದು ಅವರಿಗೆ ಸುಲಭವಾಗಿದೆ.

ವಸಂತಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಈ ಬಾರಿ ಸೌತೆ, ಕಲ್ಲಂಗಡಿ, ಬೆಂಡೆ, ಬಸಳೆ, ಮುಳ್ಳುಸೌತೆ, ಅಲಸಂಡೆ, ಸೋರೆಕಾಯಿ, ಹಾಗಲಕಾಯಿ, ಕುಂಬಳಕಾಯಿ ಹೀಗೆ ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ.

ಸೌತೆಗೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ. ಇದ್ದರೆ ಕೃಷಿಕರಿಗೆ ಸಿಗುವುದು ಕೇವಲ 15 ರೂ., ಊರಿನ ಬೆಂಡೆಗೆ ಕೆ.ಜಿ.ಗೆ 80 ರೂ. ಸಿಗುವುದು ಕೇವಲ 50 ರೂ., ಊರಿನ ಮುಳ್ಳು ಸೌತೆ ಕೆ.ಜಿ.ಗೆ 70 ರೂ. ಇದ್ದರೆ ಸಿಗುವುದು ಕೇವಲ 40ರೂ., ಅಲಸಂಡೆಗೆ ಕೆ.ಜಿ. ಗೆ 60 ರೂ. ಇದ್ದರೆ ಸಿಗುವುದು 30 ರೂ. ಇದನ್ನು ಮನಗಂಡು ವಸಂತಿಯವರು ಬೆಳೆಸಿದ ತರಕಾರಿ ತಾವೇ ಮಾರಾಟ ಮಾಡಿದರೆ ನಿರೀಕ್ಷಿತ ಲಾಭ ಹಾಗೂ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಊರಿನ ತರಕಾರಿ ಸಿಗಬಹುದು ಎನ್ನುವುದು ಅವರ ಅಭಿಪ್ರಾಯ.

ಮಕ್ಕಳಿಗೆ ರಜೆಯಾದ ಕಾರಣ ವಸಂತಿ ಕಿಶೋರ್‌ ಅವರ ಮಕ್ಕಳು ಕೂಡ ಅವರಿಗೆ ತರಕಾರಿ ಮಾರಾಟದಲ್ಲಿ ಸಹಕರಿಸುತ್ತಿದ್ದಾರೆ.ವಸಂತಿ ಅವರು ಸುಮಾರು 16 ದನಗಳನ್ನು ಸಾಕುತ್ತಿದ್ದು ಹೈನುಗಾರಿಕೆಯಲ್ಲೂ ತೊಡಗಿಸಿ ಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಪತಿ ಕಿಶೋರ್‌ ಸಹಕಾರ ನೀಡುತ್ತಿದ್ದಾರೆ.

ಕಲ್ಲಂಗಡಿ, ಬೆಂಡೆಗೆ ಭಾರೀ ಬೇಡಿಕೆ
ಊರಿನ ಕಲ್ಲಂಗಡಿಗೆ ಭಾರೀ ಬೇಡಿಕೆ ಇದೆ. ಕಲ್ಲಂಗಡಿಯನ್ನು ನೋಡಿ ವಾಹನಗಳನ್ನು ನಿಲ್ಲಿಸಿ ಜನ ಕೊಂಡೊÂ ಯುತ್ತಿದ್ದಾರೆ. ಕೆ.ಜಿ. 30ರಂತೆ ಮಾರಾಟ ಮಾಡಲಾಗುತ್ತದೆ. ಇತರ ಕಲ್ಲಂಗಡಿಗೂ ದರ ಕಡಿಮೆ ಇಲ್ಲವಾದ ಕಾರಣ ಇದನ್ನೇ ಜನರು ಹೆಚ್ಚು ಕೊಂಡೊಯ್ಯುತ್ತಿದ್ದಾರೆ.
-ವಸಂತಿ ಕಿಶೋರ್‌, ಜಿ.ಪಂ. ಸದಸ್ಯೆ, ಕೃಷಿಕರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.