“ಈಶಾನ್ಯ’ ರಾಜ್ಯಗಳ ಅಭಿವೃದ್ಧಿ ಅವಗಣಿಸಿದ್ದೇ ಕಾಂಗ್ರೆಸ್: ಯೋಗಿ ಆರೋಪ
Team Udayavani, Mar 18, 2021, 7:00 AM IST
ಈಶಾನ್ಯ ರಾಜ್ಯಗಳಲ್ಲಿನ ಅಭಿವೃದ್ಧಿ ಕೊರತೆಗೆ ಕಾಂಗ್ರೆಸ್ ನೇರ ಕಾರಣ. ಅಲ್ಲದೆ ಈ ಭಾಗದಲ್ಲಿನ ಅಕ್ರಮ ಒಳ ನುಸುಳುವಿಕೆ, ಉಗ್ರರ ಹಾವಳಿಯೂ ಕಾಂಗ್ರೆಸ್ ಆಡಳಿತದ್ದೇ ಕೊಡುಗೆ ಎಂದು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಗಂಭೀರವಾಗಿ ಆರೋಪಿಸಿದ್ದಾರೆ.
ಅಸ್ಸಾಂ ಹೊಜೈ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಜನರ ಕಲ್ಯಾಣಕ್ಕಾಗಿ, ದೇಶದ ಐಕ್ಯತೆಗಾಗಿ ಕಾಂಗ್ರೆಸ್ ಯಾವತ್ತೂ ಕೆಲಸ ಮಾಡಿಲ್ಲ. ಅದರಲ್ಲೂ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಅವಗಣಿಸಿದ್ದೇ ಕಾಂಗ್ರೆಸ್. ಸುದೀರ್ಘ ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿ, ಹಲವು ಸಮಸ್ಯೆಗಳನ್ನು ಕಾಂಗ್ರೆಸ್ ಜೀವಂತವಾಗಿರಿಸಿತ್ತು. ಎನ್ಡಿಎ ಅಧಿಕಾರಕ್ಕೆ ಬಂದ ಮೇಲೆ ಅವೆಲ್ಲವನ್ನೂ ನಿವಾರಿಸಲು ಶ್ರಮಿಸಿದ್ದೇವೆ’ ಎಂದು ಹೇಳಿದರು.
“ಕಾಂಗ್ರೆಸ್ ಯಾವತ್ತೋ ಜಾರಿಗೆ ತಂದಿದ್ದ ಲುಕ್ ಈಸ್ಟ್ ಪಾಲಿಸಿಯನ್ನು ಕಿತ್ತೂಗೆದು, ಪ್ರಧಾನಿ ಮೋದಿ ಇಲ್ಲಿ ಆ್ಯಕ್ಟ್ ಈಸ್ಟ್ ಪಾಲಿಸಿ ಜಾರಿಮಾಡಿ ಪ್ರಗತಿಗೆ ಕಾರಣರಾಗಿದ್ದಾರೆ. ಪ್ರತೀ ಕ್ಯಾಬಿನೆಟ್ ಸಚಿವರೂ ಈಶಾನ್ಯ ರಾಜ್ಯಗಳಲ್ಲಿ ಒಂದು ದಿನ ಕಳೆಯುವಂತೆ ನೀತಿ ಹೊರಡಿಸಿದ್ದಾರೆ’ ಎಂದು ವಿವರಿಸಿದರು.