ಉಷ್ಣ ಸ್ಥಾವರಗಳಲ್ಲಿ 14 ಲಕ್ಷ ಟನ್‌ ಕಲ್ಲಿದಲು ದಾಸ್ತಾನು

ಕಲ್ಲಿದ್ದಲು ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ

Team Udayavani, Dec 12, 2019, 7:39 PM IST

coal

ಬೆಂಗಳೂರು: ಸದಾ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿದ್ದ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಈಗ 14 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಇದ್ದು, ಅತಿ ಹೆಚ್ಚು ಕಲ್ಲಿದ್ದಲು ಸಂಗ್ರಹದ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ!

ರಾಜ್ಯದ ಅಲ್ಲಲ್ಲಿ ಮುಂದುವರಿದ ಮಳೆ, ಜಲಾಶಯಗಳಲ್ಲಿ ಉತ್ತಮ ನೀರು ಸಂಗ್ರಹದಿಂದ ಜಲವಿದ್ಯುತ್‌ ಬಳಕೆ ಹೆಚ್ಚಳ, ಉಷ್ಣ ವಿದ್ಯುತ್‌ ಉತ್ಪಾದನೆ ಪ್ರಮಾಣ ಇಳಿಕೆ, ಗಣನೀಯ ಪ್ರಮಾಣದಲ್ಲಿ ಸೌರ ವಿದ್ಯುತ್‌ ಪೂರೈಕೆ, ನಿಯಮಿತವಾಗಿ ಕಲ್ಲಿದ್ದಲು ಪೂರೈಕೆಯಿಂದಾಗಿ ದಾಸ್ತಾನು ದಾಖಲೆ ಸಂಗ್ರಹಕ್ಕೇರಿದೆ. ಡಿ.15ರಿಂದ ಯರಮರಸ್‌ ಸ್ಥಾವರ ಕಾರ್ಯಾರಂಭವಾಗಲಿದ್ದು, ಕಲ್ಲಿದ್ದಲು ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ.

ರಾಯಚೂರಿನಲ್ಲಿ ಆರ್‌ಟಿಪಿಎಸ್‌, ಬಳ್ಳಾರಿಯಲ್ಲಿ ಬಿಟಿಪಿಎಸ್‌, ಯರಮರಸ್‌ನಲ್ಲಿ ವೈಟಿಪಿಎಸ್‌ ಉಷ್ಣ ಸ್ಥಾವರಗಳಿದ್ದು, ಗರಿಷ್ಠ 5000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥಯವಿದೆ. ಈ ಪೈಕಿ ಆರ್‌ಟಿಪಿಎಸ್‌, ಬಿಟಿಪಿಎಸ್‌ ಸ್ಥಾವರಗಳಲ್ಲಷ್ಟೇ ಸದ್ಯ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಬೃಹತ್‌ ಉಷ್ಣ ಸ್ಥಾವರಗಳಿದ್ದರೂ ಕಲ್ಲಿದ್ದಲಿಗೆ ಅನ್ಯ ರಾಜ್ಯಗಳನ್ನೇ ಅವಲಂಬಿಸಬೇಕಿದೆ. ಹೀಗಾಗಿ ವರ್ಷದಲ್ಲಿ ಬಹುತೇಕ ಸಂದರ್ಭದಲ್ಲಿ ಕಲ್ಲಿದ್ದಲು ಕೊರತೆ ಉಷ್ಣ ಸ್ಥಾವರಗಳನ್ನು ಕಾಣುತ್ತಿತ್ತು. ಕಳೆದ ವರ್ಷ ಆಯಾ ದಿನ ಪೂರೈಕೆಯಾದ ಕಲ್ಲಿದ್ದಲನ್ನೇ ಬಳಸಿ ವಿದ್ಯುತ್‌ ಉತ್ಪಾದಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

14 ಲಕ್ಷ ಟನ್‌ ಸಂಗ್ರಹ
ಹಲವು ವರ್ಷಗಳಿಂದ ರಾಜ್ಯದ ಉಷ್ಣ ಸ್ಥಾವರಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿರಲಿಲ್ಲ .ಇದರಿಂದ ಪದೇ ಪದೇ ಗಣಿ ಕಂಪೆನಿಗಳಿಗೆ ಪತ್ರ ಬರೆಯುವುದು, ಕಂಪೆನಿ ಪ್ರತಿನಿಧಿಗಳನ್ನು ಭೇಟಿಯಾಗಿ ಕಲ್ಲಿದ್ದಲು ಪೂರೈಕೆಗೆ ಮನವಿ ಮಾಡುವುದು ನಡೆಯುತ್ತಿತ್ತು. ಆದರೆ ಕೆಲ ತಿಂಗಳಿನಿಂದ ರಾಜ್ಯಕ್ಕೆ ಕಲ್ಲಿದ್ದಲು ನಿಯಮಿತವಾಗಿ ಪೂರೈಕೆಯಾಗುತ್ತಿದೆ. ಪರಿಣಾಮವಾಗಿ ಆರ್‌ಟಿಪಿಎಸ್‌ನಲ್ಲಿ 10.6 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಶೇಖರಣೆಯಾಗಿದೆ. ಬಿಟಿಪಿಎಸ್‌ನಲ್ಲಿ 3.5 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು ಇದ್ದು, ಒಟ್ಟು 14 ಲಕ್ಷ ಟನ್‌ಗೆ ಏರಿಕೆಯಾಗಿದೆ.ಸದಾ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿದ್ದ ಉಷ್ಣ ಸ್ಥಾವರಗಳಲ್ಲಿ ಕೆಲ ತಿಂಗಳಿನಿಂದೀಚೆಗೆ ದಾಸ್ತಾನು ಪ್ರಮಾಣ ಏರುತ್ತಿದೆ. 7.5 ಲಕ್ಷ ಟನ್‌ ದಾಸ್ತಾನು ಇದ್ದುದೇ ಈವರೆಗಿನ ದಾಖಲೆ ಎನಿಸಿತ್ತು. ಇದೀಗ ದಾಸ್ತಾನು 14 ಲಕ್ಷ ಟನ್‌ಗೆ ಏರಿದ್ದು, ಸಾರ್ವಕಾಲಿಕ ದಾಖಲೆ ಎನಿಸಿದೆ.

ದಾಖಲೆ ಸಂಗ್ರಹಕ್ಕೆ ಕಾರಣ
ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚು ಮಳೆ ಸುರಿದಿದ್ದರಿಂದ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳು ಬಹುತೇಕ ಭರ್ತಿಯಾದವು. ಜಲಾಶಯಗಳಲ್ಲಿನ ನೀರು ಸಂಗ್ರಹವನ್ನು ನಿಯಮಿತವಾಗಿ ಬಳಸಿದರೂ ಜೂನ್‌ವರೆಗೆ ಪರಿಸ್ಥಿತಿ ನಿಭಾಯಿಸಬಹುದಾಗಿದೆ. ಹಾಗಾಗಿ ಕೆಲ ತಿಂಗಳಿನಿಂದ ಜಲವಿದ್ಯುತ್‌ ಉತ್ಪಾದನೆಗೆ ಒತ್ತು ನೀಡಲಾಗಿದೆ. ನೆರೆ, ರಾಜ್ಯದ ಹಲವೆಡೆ ಮಳೆ ಆಗಾಗ್ಗೆ ಸುರಿಯುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ ಬಳಕೆಯೂ ಕಡಿಮೆ ಇದ್ದು, ಬೇಡಿಕೆಯೂ ತಗ್ಗಿದೆ. ಹೀಗಾಗಿ ಉಷ್ಣ ಸ್ಥಾವರಗಳ ಮೇಲಿನ ಒತ್ತಡ ಕಡಿಮೆಯಾಗಿದ್ದು, ಬೆರಳೆಣಿಕೆ ಘಟಕಗಳಲ್ಲಷ್ಟೇ ಅಲ್ಪ ಪ್ರಮಾಣದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಕಲ್ಲಿದ್ದಲು ಸಂಗ್ರಹ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

ಬೇಡಿಕೆಯ ಅರ್ಧದಷ್ಟು ಸೌರಶಕ್ತಿ
ರಾಜ್ಯಾದ್ಯಂತ ಸದ್ಯ ಸರಾಸರಿ 11,000 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿದೆ. ಕೆಲ ದಿನಗಳಿಂದ 6000 ಮೆಗಾವ್ಯಾಟ್‌ನಷ್ಟು ಸೌರ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಬೇಡಿಕೆಯ ಅರ್ಧದಷ್ಟಿದೆ. ಜತೆಗೆ ಜಲವಿದ್ಯುತ್‌, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಂಚಿಕೆಯಾದಷ್ಟು ವಿದ್ಯುತ್‌ ಪೂರೈಕೆಯಿಂದ ಕೊರತೆಯೇ ಇಲ್ಲದಂತಾಗಿದೆ. ಪರಿಸ್ಥಿತಿಗೆ ತಕ್ಕಂತೆ ಉಷ್ಣ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಭಾರೀ ದಾಸ್ತಾನು ಅಪಾಯ
ಲಕ್ಷಾಂತರ ಟನ್‌ ಕಲ್ಲಿದ್ದಲನ್ನು ಸುದೀರ್ಘ‌ ಕಾಲ ದಾಸ್ತಾನು ಮಾಡುವುದು ಅಪಾಯವೆನಿಸಿದೆ. ಏಕೆಂದರೆ ಕಲ್ಲಿದ್ದಲು ದಾಸ್ತಾನಿನಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಹೆಚ್ಚು ದಿನ ದಾಸ್ತಾನು ಮಾಡಿದಂತೆ ಕಲ್ಲಿದ್ದಲಿನ ದಹನ ಸಾಮರ್ಥಯವೂ ಕ್ಷೀಣಿಸುತ್ತದೆ. ಹಾಗಾಗಿ ದಾಸ್ತಾನು ವಿಲೇವಾರಿಗೂ ಕೆಪಿಸಿಎಲ್‌ ಗಮನ ಹರಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಂಗಳವಾರದಿಂದ ಆರ್‌ಟಿಪಿಎಸ್‌ನ ಎಂಟೂ ಘಟಕಗಳು ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು, ವರ್ಷದ ಬಳಿಕ ಎಲ್ಲ ಘಟಕಗಳು ಕಾರ್ಯಾರಂಭವಾದಂತಾಗಿದೆ. ಜತೆಗೆ ಬಿಟಿಪಿಎಸ್‌ನ ಒಂದು ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ ಎರಡೂ ಕಡೆ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುತ್ತಿಲ್ಲ. ಆದರೆ ಎಲ್ಲ ಘಟಕಗಳ ಕಾರ್ಯಾರಂಭದಿಂದ ಕಲ್ಲಿದ್ದಲು ಬಳಕೆ ಹೆಚ್ಚಾಗಲಿದೆ.

ಭಾನುವಾರ ಯರಮರಸ್‌ ಘಟಕ ಆರಂಭ
ಯರಮರಸ್‌ನ ವೈಟಿಪಿಎಸ್‌ ಸ್ಥಾವರ ಈ ಹಿಂದೆ ಕಾರ್ಯಾರಂಭವಾಗಿದ್ದರೂ ಮೂರು ತಿಂಗಳ ಬಳಿಕ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ಬಳಿಕ ಭಾನುವಾರದಿಂದ (ಡಿ.15) ಘಟಕ ಕಾರ್ಯಾರಂಭವಾಗುತ್ತಿದೆ. ಸದ್ಯ ಈ ಸ್ಥಾವರಕ್ಕೆ ಸಿಂಗರೇಣಿ ಕೊಲಿರೀಸ್‌ ಕೋಲ್‌ ಲಿಮಿಟೆಡ್‌ನಿಂದ ಕಲ್ಲಿದ್ದಲು ಪೂರೈಕೆಯಾಗಲಿದೆ. ಕೇವಲ ಎರಡು ಘಟಕಗಳಿಂದ ಗರಿಷ್ಠ 1600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥಯ ಹೊಂದಿರುವ ಸುಧಾರಿತ ಸ್ಥಾವರ ಇದಾಗಿದೆ. ಇದು ಕಾರ್ಯಾರಂಭವಾದಂತೆ ಕಲ್ಲಿದ್ದಲು ಬಳಕೆ ಹೆಚ್ಚಾಗಲಿದೆ.

ರಾಜ್ಯದ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟಿದೆ. ಸ್ಥಾವರಗಳ ಸಾಮರ್ಥಯದ ಶೇ.35ರಷ್ಟು ವಿದ್ಯುತ್‌ ಉತ್ಪಾದಿಸುತ್ತಿದ್ದರೆ, ಕಲ್ಲಿದ್ದಲು ಪೂರೈಕೆ ಶೇ.80ರಷ್ಟಿದೆ. ವಿದ್ಯುತ್‌ ಬೇಡಿಕೆಯೂ ಸಾಕಷ್ಟು ಇಳಿಕೆಯಾಗಿರುವುದರಿಂದ ಶೇ. 70ರಷ್ಟು ಉತ್ಪಾದನೆ ತಗ್ಗಿಸಲಾಗಿದ್ದು, ಕಲ್ಲಿದ್ದಲು ದಾಸ್ತಾನು ಹೆಚ್ಚಾಗಿದೆ.
-ವಿ. ಪೊನ್ನುರಾಜ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.