ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

ಕೆಲ ವಷಗಳ ಹಿಂದೆ ಇಂಗ್ಲೆಂಡ್‌ ಗೆ ವಿಲನ್‌ ಆಗಿದ್ದ ಸ್ಟೋಕ್ಸ್‌ ಇಂದು ಹೀರೋ

Team Udayavani, Jul 15, 2019, 3:55 PM IST

ben

ಲಾರ್ಡ್ಸ್:‌ ವಿಶ್ವಕಪ್‌ ನ ಉದ್ಘಾಟನಾ ಪಂದ್ಯದಲ್ಲೇ ಶತಮಾನದ ಕ್ಯಾಚ್‌ ಪಡೆದ 27ರ ಯುವಕ ಅಂತಿಮ ಪಂದ್ಯದಲ್ಲಿ ಕ್ರಿಕೆಟ್‌ ಜನಕರ 44 ವರ್ಷದ ಕನಸು ನನಸು ಮಾಡಿದ  ಸಾಧಕ. ಟಿ- ಟ್ವೆಂಟಿ ವಿಶ್ವಕಪ್‌ ಫೈನಲ್‌ ನಲ್ಲಿ ಕೊನೆಯ ಓವರಿಗೆ 19 ರನ್‌ ಬಿಟ್ಟು ಕೊಟ್ಟ ಆಂಗ್ಲರ ಪಾಲಿನ ವಿಲನ್‌, ನೈಟ್‌ ಕ್ಲಬ್‌ ನಲ್ಲಿ ಗಲಾಟೆ ಮಾಡಿ ಜೈಲು ಸೇರಿದ್ದ ಪುಂಡ ಯುವಕ, ಇಂದು ಇಡೀ ಇಂಗ್ಲೆಂಡ್‌ ಎಂದೂ ಮರೆಯದ ಹೀರೋ.

ಇದೇ ನೋಡಿ, ಒಬ್ಬ ಆಟಗಾರ ತನ್ನ ಪ್ರಯತ್ನ, ಛಲ, ಸಾಧನೆಯಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಂಗ್ಲೆಂಡ್‌ ನ ಆಟಗಾರ ಬೆನ್‌ ಸ್ಟೋಕ್ಸ್‌ ಸಾಕ್ಷಿ. 2011ರಲ್ಲಿ ಆಂಗ್ಲರ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬೆನ್‌ ಸ್ಟೋಕ್ಸ್‌ ಹೆಚ್ಚು ಸುದ್ದಿಯಾಗಿದ್ದು ಮೈದಾನದ ಹೊರಗೆಯೇ ! ಕುಡಿತ, ಅತೀ ವೇಗದ ಕಾರು ಚಾಲನೆ, ಬಾರು, ನೈಟ್‌ ಕ್ಲಬ್‌ ಗಳಲ್ಲಿ ಹೊಡೆದಾಟ ಹೀಗೆ ತನ್ನ ಪುಂಡಾಟಗಳಿಂದಲೇ ಸುದ್ದಿಯಾಗುತ್ತಿದ್ದ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಬ್ಯಾಡ್‌ ಬಾಯ್.‌

2018ರಲ್ಲಿ ಬ್ರಿಸ್ಟೋಲ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯಕ್ಕೆ ಮುನ್ನಾದಿನ ಹತ್ತಿರದ ನೈಟ್‌ ಕ್ಲಬ್‌ ಒಂದಕ್ಕೆ ಸಹ ಆಟಗಾರ ಅಲೆಕ್ಸ್‌ ಹೇಲ್ಸ್‌ ಜೊತೆ ಹೋಗಿದ್ದ ಬೆನ್‌ ಅಲ್ಲಿ ಕುಡಿದ ಮತ್ತಿನಲ್ಲಿ ಓರ್ವನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು. ಆ ಗಲಾಟೆಯಲ್ಲಿ ಸ್ಟೋಕ್ಸ್‌ ಕೈಗೂ ಪೆಟ್ಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸ್ಟೋಕ್ಸ್‌ ಮತ್ತು ಹೇಲ್ಸ್‌ ರನ್ನು ಬಂಧಿಸಿದ್ದರು. ಆ ರಾತ್ರಿಯನ್ನು ಜೈಲಿನಲ್ಲೇ ಕಳೆದಿದ್ದ ಅವರಿಬ್ಬರು ಬಿಡುಗಡೆಯಾದರೂ ನಂತರದ ಆಶಸ್‌ ಸರಣಿಯನ್ನು ತಪ್ಪಿಸಿ ಕೊಂಡಿದ್ದರು.

ಟಿ ಟ್ವೆಂಟಿ ಫೈನಲ್‌ ನಲ್ಲಿ ವಿಲನ್‌
2016ರ ಟಿ-ಟ್ವೆಂಟಿ ವಿಶ್ವಕಪ್‌ ಫೈನಲ್‌ ಪಂದ್ಯ. ಕೊಲ್ಕತ್ತಾದ ಈಡನ್‌ ಗಾರ್ಡನ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಎದುರಾಗಿದ್ದವು. ಎರಡನೇ ಬಾರಿ ಚುಟುಕು ಮಾದರಿಯ ಪ್ರಶಸ್ತಿ ಎತ್ತುವ ಅಭಿಲಾಷೆಯೊಂದಿಗೆ ಕಣಕ್ಕಿಳಿದಿದ್ದ ಆಂಗ್ಲರು ಗಳಿಸಿದ್ದು 155 ರನ್.‌ ಉತ್ತಮ ಬೌಲಿಂಗ್‌ ಕೂಡಾ ನಡೆಸಿದ್ದ ಇಂಗ್ಲೆಂಡ್‌, ಕೊನೆಯ ಓವರ್‌ ನಲ್ಲಿ ವಿಂಡಿಸ್‌ ಗೆ 19 ರನ್‌ ತೆಗೆಯುವ ಕಠಿಣ ಗುರಿ ನೀಡಿತ್ತು. ನಾಯಕ ಮಾರ್ಗನ್‌  ನಿರ್ಣಾಯಕ ಕೊನೆಯ ಓವರ್‌ ಎಸೆಯಲು ಚೆಂಡು ನೀಡಿದ್ದು ಬೆನ್‌ ಸ್ಟೋಕ್ಸ್‌ ಕೈಗೆ. ಆದರೆ ಸ್ಟ್ರೈಕ್‌ ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವಿಂಡೀಸ್‌ ನ ಬ್ರಾತ್‌ ವೇಟ್‌ ಸ್ಟೋಕ್ಸ್‌ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್‌ ಗೆ ಅಟ್ಟಿ ವಿಂಡೀಸ್‌ ಗೆ ಜಯ ತಂದಿತ್ತಿದ್ದರು. ಅಸಾಧ್ಯ ಗೆಲುವನ್ನು ತಂದಿತ್ತ ಬ್ರಾತ್‌ ವೇಟ್‌ ವಿಂಡೀಸ್‌ ಗೆ ಹೀರೋ ಆಗಿದ್ದರೆ, ನಾಲ್ಕೇ ಬಾಲ್‌ ನಲ್ಲಿ ಸೋಲು ಎಳೆದುಕೊಂಡ ಸ್ಟೋಕ್ಸ್‌ ಇಂಗ್ಲೆಂಡ್‌ ಪಾಲಿಗೆ ವಿಲನ್‌ ಆಗಿದ್ದ.

ಆದರೆ ರವಿವಾರ ಲಾರ್ಡ್ಸ್‌ ನಲ್ಲಿ ಮಾತ್ರ ನಿಜಕ್ಕೂ ಆತ ರಾಜನಾಗಿದ್ದ. 19.3 ಓವರ್‌ ನಲ್ಲಿ ಕೇವಲ 71ರನ್‌ ಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಗಟ್ಟಿಗ ಸ್ಟೋಕ್ಸ್.‌ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಬಂಡೆಯಾಗಿ ನಿಂತ ಸ್ಟೋಕ್ಸ್‌ ಕೊನೆಗೂ ಕ್ರಿಕೆಟ್‌ ಜನಕರ ಮಹದಾಸೆಯನ್ನು ನೆರವೇರಿಸಿದರು.

ಪಂದ್ಯ ಇನ್ನೇನು ಕಿವೀಸ್‌ ನತ್ತ ಜಾರಿತು ಎನ್ನುವಾಗ ಸ್ಟೋಕ್ಸ್‌ ತೋರಿದ ಧೈರ್ಯ, ಆತ್ಮ ವಿಶ್ವಾಸ, ಕೊನೆಯ ಎರಡು ಓವರ್‌ ನಲ್ಲಿ ಪಂದ್ಯದ ಚಿತ್ರಣವನ್ನು ಬದಲಿಸಿದ ರೀತಿ, ಸೂಪರ್‌ ಓವರ್‌ ನಲ್ಲಿ ಆಡಿದ ಅದ್ಭುತ ಆಟದಿಂದಲೇ ಬೆನ್‌ ಸ್ಟೋಕ್ಸ್‌ ಇಂದು ಆಂಗ್ಲರ ನಾಡಿನ ಕಣ್ಮಣಿ.

ಕೇನ್‌ ಬಳಿ ಕ್ಷಮೆ ಕೇಳಿದ ಸ್ಟೋಕ್ಸ್‌
ಫೈನಲ್‌ ಪಂದ್ಯದ ಕೊನೆಯ ನಿರ್ಣಾಯಕ ಕ್ಷಣದಲ್ಲಿಎರಡು ರನ್‌ ಕದಿಯುವ ವೇಳೆ, ಮಾರ್ಟಿನ್‌ ಗಪ್ಟಿಲ್‌ ಎಸೆದ ಥ್ರೋ, ಸ್ಟೋಕ್ಸ್‌ ಬ್ಯಾಟಿಗೆ ತಾಗಿ ಬೌಂಡರಿಗೆ ಹೋಗಿತ್ತು. ಇದರಿಂದಾಗಿ ಇಂಗ್ಲೆಂಡ್‌ ಗೆ ನಾಲ್ಕು ಹೆಚ್ಚುವರಿ ರನ್‌ ದೊರಕಿತ್ತು. ವಿಪರ್ಯಾಸವೆಂದರೆ ಇದೇ ಕೊನೆಗೆ ಸೋಲು ಗೆಲುವನ್ನು ನಿರ್ಧರಿಸುವಂತೆ ಮಾಡಿತ್ತು. ಈ ಘಟನೆಯ ಬಗ್ಗೆ ಪಂದ್ಯದ ನಂತರ ಮಾತನಾಡಿದ ಸ್ಟೋಕ್ಸ್‌, ” ಬೇಕಂತಲೇ ನಡೆದ ತಪ್ಪಲ್ಲ, ಆದರೆ ನಾನು ನನ್ನ ಜೀವನ ಪರ್ಯಂತ ಆ ಕ್ಷಣಕ್ಕಾಗಿ ವಿಲಿಯಮ್ಸನ್‌ ಬಳಿ ಕ್ಷಮೆ ಕೇಳುತ್ತೇನೆ” ಎಂದರು. ವಿಶ್ವಕಪ್‌ ಗೆದ್ದ ಸಾಧಕ ಈ ವೇಳೆ ಕೋಟ್ಯಾಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದರು.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.