ಖ್ಯಾತ ಚಿತ್ರನಟ ವಿಷ್ಣುವರ್ಧನ್ ಅವರ ಯಾವ ಚಿತ್ರ ನಿಮಗೆ ಇಷ್ಟ ? ಯಾಕೆ ಇಷ್ಟ ?


Team Udayavani, Sep 20, 2019, 4:00 PM IST

vishnuvardhan

ಮಣಿಪಾಲ: ಸಾಹಸಸಿಂಹ ವಿಷ್ಣುವರ್ದನ್‌ ಅವರ ಕನ್ನಡದ ದಿಗ್ಗಜ ನಟ, ಅಭಿಮಾನಿಗಳ ಆಪ್ತಮಿತ್ರ. ಸಪ್ಟೆಂಬರ್‌ 19ರಂದು ಅವರ ಜನ್ಮದಿನ. ಈ ಸಂದರ್ಭದಲ್ಲಿ ʼಉದಯವಾಣಿʼ ಖ್ಯಾತ ಚಿತ್ರನಟ ವಿಷ್ಣುವರ್ಧನ್ ಅವರ ಯಾವ ಚಿತ್ರ ನಿಮಗೆ ಇಷ್ಟ ? ಯಾಕೆ ಇಷ್ಟ ? ಎಂಬ ಪ್ರಶ್ನೆಯನ್ನು ಓದುಗರ ಮುಂದಿರಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ.

ಕೆ. ಸುರೇಂದ್ರ ರಾವ್:‌ ಸಾಹಸ ಸಿಂಹ ತುಂಬಾ ಇಷ್ಟ ,ಕಾರಣ ಅದರಲ್ಲಿ ಹಾಡು ಒಂದು ತುಂಬಾ ಮನಸ್ಸಿಗೆ ಮುಟ್ಟುವಂತೆ ಇದೆ “ಮರೆಯದ ನೆನಪನು ” ಅದು ದುಷ್ಟರೆಲ್ಲಾ ಸೇರಿ ಮಾಡಿದ ಅನ್ಯಾಯಕ್ಕೆ ಆ ನೆನಪು ಎಷ್ಟು ಕಾಡಿ ಬಿಡದೆ ಅಲ್ಲಿಯವರೆಗು ಕರೆದು ಕೊಂಡು ಬಂದಿದೆ ಎಂದು ,ಕೊನೆಗೂ ಅದರಲ್ಲಿ ಆ ನೋವಿಗೆ ಬರುವಂತಹ ಕೋಪ ಎಲ್ಲಾ ಕಡೆಯಲ್ಲಿ ಸಿಂಹದಂತೆ ಗರ್ಜಿಸಿ ಎಲ್ಲರನ್ನು ಮುಗಿಸುವ ಅದ್ಬುತ ಅಭಿನಯ ತುಂಬಾ ಇಷ್ಟ.

ಪ್ರೇಮ ಸತೀಶ್:‌ ಬಂಧನ ಸಿನಿಮಾ ತುಂಬಾ ಇಷ್ಟ, ಆ ಸಿನಿಮಾದಲ್ಲಿ ವಿಷ್ಣುವರ್ಧನ್ ರ ವೈದ್ಯರ ಪಾತ್ರ, ಪ್ರೀತಿ, ಸಂಭಾಷಣೆ ಅದ್ಭುತವಾಗಿ ಮೂಡಿಬಂದಿದೆ.

ಪೂರ್ಣ ಪ್ರಜ್ಞ ಪಿ.ಎಸ್:‌ ಯಜಮಾನ- ಸಂಬಂಧಗಳ ಅರ್ಥ, ಮೌಲ್ಯ ಏನು ಎಂದು ತಿಳಿಸಿಕೊಟ್ಟ ಚಿತ್ರ. ಒಂದು ಜಗಳಕ್ಕೆ ಗಂಟು ಮೂಟೆ ಕಟ್ಟಿಕೊಂಡು ಮನೆ ಬಿಟ್ಟು ಕೋಪದ ಕೈಗೆ ಬುದ್ಧಿ ಕೊಡುವ ಪ್ರತಿಯೊಬ್ಬರಿಗೂ, ಕುಟುಂಬದಲ್ಲಿ ಸಂಬಂಧದ ಅಗತ್ಯತೆ, ತ್ಯಾಗದ ಅನಿವಾರ್ಯತೆಯನ್ನ ತಿಳಿಸಿಕೊಟ್ಟ ಚಿತ್ರ.

ರಾಜೇಶ್‌ ಅಂಚನ್‌ ಎಂ ಬಿ; ಬಂಧನ ನನಗೆ ಬಹಳವಾಗಿ ಹೃದಯಕ್ಕೆ ನಾಟಿದ ಚಿತ್ರ. ಅಂತಹ ಪ್ರೇಮ ಕಾವ್ಯ ಕನ್ನಡದಲ್ಲಿ ಮತ್ತೆ ಬರಲೇ ಇಲ್ಲ. ಡಾ. ಹರೀಶ್ ಮತ್ತು ನಂದಿನಿ ಕನಸಲ್ಲೂ ನನ್ನನ್ನೂ ಕಾಡೊ ಪಾತ್ರಗಳು. ವಿಷ್ಣುವರ್ಧನ್ ಮತ್ತು ಸುಹಾಸಿನಿಗಾಗಿಯೇ ಆ ಪಾತ್ರವನ್ನು ಉಷಾ ನವರತ್ನರಾಮ್ ಸೃಷ್ಟಿಸಿದ ಹಾಗೆ ಮೂಡಿ ಬಂದ ಚಿತ್ರ ಅದು. ಆ ಹಾಡುಗಳು, ಸಂಭಾಷಣೆ ಯಾವತ್ತೂ ಮರೆಯುವ ಹಾಗೆ ಇಲ್ಲಾ. ಇವತ್ತು ಸಹ ದೂರದರ್ಶನದಲ್ಲಿ ಪ್ರಸಾರವಾದರೆ ತಪ್ಪದೆ ವೀಕ್ಷಿಸುತ್ತೇನೆ.

ಸ್ವಾಮಿ ಸಿದ್ದು: ವಿಷ್ಣು ಸರ್‌ ಎಲ್ಲಾ ಚಿತ್ರಗಳು ಇಷ್ಟ. ಯಜಮಾನ ತುಂಬಾ ಇಷ್ಟ. ಯಾಕಂದ್ರೆ ನಾನು ಟಾಕೀಸಿನಲ್ಲಿ ನೋಡಿದ ಮೊದಲ ಚಿತ್ರ. ಅಣ್ಣ ತಮ್ಮಂದಿರ ಬಾಂಧವ್ಯದ ಕಥೆ ಚೆನ್ನಾಗಿದೆ.

ಸುಜಾತ ಹೊರಂತೂರು: ಇಷ್ಟದ ಪಟ್ಟಿಯಲ್ಲಿ ತುಂಬಾ ಚಿತ್ರಗಳಿವೆ. ನಾಗರಹಾವು, ಹೊಂಬಿಸಿಲು, ನಾನಿರುವುದೇ ನಿನಗಾಗಿ, ಮದುವೆ ಮಾಡು ತಮಾಷೆ ನೋಡು ಇತ್ಯಾದಿ.

ಹೇಮಂತ್‌ ಸನಿಲ್:‌ ವಿಷ್ಣುಜಿಯ ಎಲ್ಲಾ ಚಿತ್ರಗಳು ಇಷ್ಟ. ಎಲ್ಲವೂ ಅದ್ಬುತ ನಟನೆಗೆ ಹಿಡಿದ ಕನ್ನಡಿ. ಇಂದು ಎಲ್ಲವನ್ನು ಕಳೆದು ಕೊಂಡಿದ್ದೇವೆ ಅವರೊಂದಿಗೆ.

ವಿನುತಾ ಕುಲಕರ್ಣಿ: ಭೂತಯ್ಯನ ಮಗ ಅಯ್ಯು. ಜಗತ್ತಿನಲ್ಲಿ ಮಾನವೀಯತೆಯೇ ಶ್ರೇಷ್ಠ ಎಂದು ತೋರಿಸುವ ಚಿತ್ರವದು.

ನಾಗರಾಜ ಕಾಮತಿ: ತ್ಯಾಗಮಯಿ ಅಣ್ಣನ ಪಾತ್ರ.ಯಜಮಾನ.

ಕಲ್ಪಿ ಪ್ರಸನ್ನ: ರಿಮೇಕ್ ಆದರೂ ಕೂಡ ರಾಯರು ಬಂದರು ಮಾವನ ಮನೆಗೆ ಚಿತ್ರ ಎಲ್ಲಕ್ಕಿಂತ ತುಂಬಾ ಆಪ್ತವಾದದ್ದು.

ದಿನೇಶ್ ಗೌಡ ಕೆ: ವಿಷ್ಣು ಸರ್ ನಮ್ಮ ಮೊದಲ ಆಯ್ಕೆ ಕಾರಣ ನಾನು ಕೇವಲ 5 ವರ್ಷ ಪ್ರಾಯದಲ್ಲೇ ನೋಡಿದ ಮೊದಲ ಸಿನಿಮಾ ಖೈದಿ ಇಷ್ಟ ಪಡಲು ಅದೊಂದೇ ಮಾನದಂಡವಲ್ಲ.

ರಾಜೇಶ್‌ ಹೆಬ್ಬಾರ್;‌ ಭೂತಯ್ಯನ ಮಗ ಅಯ್ಯು ಚಲನಚಿತ್ರ ದ ಗುಳ್ಳನ ಪಾತ್ರ ಹಾಗು ನಾಗರಹಾವು ಚಿತ್ರದ ರಾಮಾಚಾರಿ ಪಾತ್ರ ಅಧ್ಬುತವಾದ ನಟನೆ.

ಸುಮ ವಿ ಹುನಗುಂದಿ: ನಾಗರಹಾವು, ಸೊಸೆ ತಂದ ಸೌಭಾಗ್ಯ , ಕಿಟ್ಟು ಪುಟ್ಟು, ಸಿಂಗಾಪುರಿನಲ್ಲಿ ರಾಜಾ ಕುಳ್ಳ, ಅವಳ ಹೆಜ್ಜೆ , ಗಂಧರ್ವ ಗಿರಿ , ಹೊಂಬಿಸಿಲು, ವಂಶ ಜ್ಯೋತಿ , ಸಾಹಸ ಸಿಂಹ, ಸಹೋದರರ ಸವಾಲ್, ಸ್ನೇಹಿತರ ಸವಾಲ್, ಸೂರ್ಯವಂಶ , ಯಜಮಾನ , ಕರ್ಣ etc ವಿಷ್ಣುವರ್ಧನ್ ರವರ ಸಿನಿಮಾಗಳು ಒಂದಾ ಎರಡಾ. ಎಲ್ಲವೂ ಚೆನ್ನಾಗಿ ಬಂದಿವೆ.

ಮೈಸೂರು ಶಂಕರಾನಂದ: ಜೀವನ ಚಕ್ರ ಸೂಪರ್.‌ ಅದರಲ್ಲಿ ಅವರ ಮಗಳ ಬಗ್ಗೆ ಇರುವ ಹಾಡನ್ನು ಮರೆಯಲು ಸಾಧ್ಯವಿಲ್ಲ. ಈಗಲೂ ಹಾಡು ಕೇಳುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ.

ಸೂರಜ್‌ ಬಿ ನಾರಾಯಣ: ಈ ಬಂಧನ. ಅವರ ಕಲೆಯನ್ನು ಸಂಪೂರ್ಣ ಬಳಸಿಕೊಂಡ ಚಿತ್ರ ಅನ್ನಿಸಿತು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.