ಗೋವಾ ಇಫಿ ಚಿತ್ರೋತ್ಸವ; ಎನ್‌ಎಫ್‌ಡಿಸಿ ಯ ಫಿಲ್ಮ್‌ ಬಜಾರ್‌ಗೆ ಚಾಲನೆ


Team Udayavani, Nov 21, 2019, 2:00 PM IST

film-bazaar-blog-1

ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಸಂಭ್ರಮದ ಜತೆಗೇ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ [ಎನ್‌ಎಫ್‌ಡಿಸಿ] ಹಮ್ಮಿಕೊಂಡಿರುವ 13 ನೇ ವರ್ಷದ ಚಲನಚಿತ್ರಸಂತೆ [ಫಿಲ್ಮ್‌ ಬಜಾರ್‌] ಬುಧವಾರ ಉದ್ಘಾಟನೆಗೊಂಡಿತು.

ಏಷ್ಯಾದ ಅತಿದೊಡ್ಡ ಚಲನಚಿತ್ರ ಸಂತೆಯಾದ ಫಿಲ್ಮ್‌ ಬಜಾರ್‌ ಪ್ರತಿ ವರ್ಷ ಇಫಿ ಚಿತ್ರೋತ್ಸವದೊಂದಿಗೆ ನಡೆಯುತ್ತದೆ. ಇದನ್ನು ಎನ್‌ಎಫ್‌ಡಿಸಿ ಸಂಘಟಿಸುತ್ತಿದೆ. ಈ ಬಾರಿ ಉತ್ಸವಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವುದೆಂದರೆ ಕೌಶಲ ಕಾರ್ಯಾಗಾರ, ಚಿತ್ರ ನಿರ್ಮಾಪಕರ ಕಾರ್ಯಾಗಾರ.

ನ. 24 ವೆರೆಗೂ ನಡೆಯುವ ಚಲನಚಿತ್ರ ಸಂತೆಯಲ್ಲಿ ವಿಶಾಲ್‌ ಭಾರದ್ವಾಜ್‌, ಅದಿಲ್‌ ಹುಸೇನ್‌, ಸೌಂದರ್ಯ ರಜನೀಕಾಂತ್‌, ಪ್ರಸೂನ್‌ ಜೋಷಿ, ಸಿದ್ಧಾರ್ಥ ರಾಯ್‌ ಕಪೂರ್‌, ಮೇಘನಾ ಗುಲ್ಜಾರ್‌, ವಾಣಿ ತ್ರಿಪಾಠಿ ಟಿಕೂ ಮತ್ತಿತರರು ವಿವಿಧ ಕಾರ್ಯಾಗಾರ, ಉಪನ್ಯಾಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಹ ನಿರ್ಮಾಣ ಯೋಜನೆಯಲ್ಲಿ 14 ಸಿನಿಮಾಗಳು, ಪ್ರಗತಿಯಲ್ಲಿರುವ 5 ಸಿನಿಮಾಗಳು ಹಾಗೂ ಫಿಲ್ಮ್‌ ಬಜಾರ್‌ನ ಶಿಫಾರಸಿನ 26 ಸಿನಿಮಾಗಳ ಬಗೆಗೂ ಚರ್ಚೆ ನಡೆಯಲಿದೆ. 30 ಕ್ಕೂ ಹೆಚ್ಚು ಭಾಷೆಗಳ 213 ಚಲನಚಿತ್ರಗಳು ವ್ಯೂವಿಂಗ್‌ ರೂಮ್‌ನಲ್ಲಿ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡದ ಆರು ಚಿತ್ರಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಗೋಂಡಿ, ಬೋಡೊ, ಗೋಜ್ರಿ ಹಾಗೂ ಗಾಲೋ ಭಾಷೆಯ ಚಿತ್ರಗಳು ಸೇರಿರುವುದು ವಿಶೇಷ.

ಈ ಪೈಕಿ 154 ಕಥಾ ಚಿತ್ರಗಳಾಗಿದ್ದು, 59 ಕಿರುಚಿತ್ರಗಳು. 89 ಮಂದಿಯ ಚೊಚ್ಚಲ ಚಿತ್ರಗಳು ಈ ಪಟ್ಟಿಯಲ್ಲಿವೆ.

ಕೌಶಲ ಕಾರ್ಯಾಗಾರದ ಮೂಲಕ ಯುವ ಸಿನಿಮಾ ನಿರ್ದೇಶಕರ ಸಬಲೀಕರಣದ ಬಗ್ಗೆ ಪ್ರಸೂನ್‌ ಜೋಷಿ, ಸಿದ್ಧಾರ್ಥ ರಾಯ್‌ ಕಪೂರ್‌ ಮಾತನಾಡಿದರೆ, ವಾಣಿ ತ್ರಿಪಾಠಿ ಟಿಕೂ ಬಾಹುಬಲಿ ಚಿತ್ರದ ನಿರ್ಮಾಪಕಿ ಶೋಬು ಯರ್ಲಗಡ್ಡ ಅವರೊಂದಿಗೆ ಸಂವಾದ ನಡೆಸುವರು. ಸೌಂದರ್ಯ ರಜನೀಕಾಂತ್‌ ಮತ್ತು ನಂದಿತಾ ರಾಯ್‌ ಭಾರತೀಯ ಸಿನಿಮಾದಲ್ಲಿ ಬದಲಾಗುತ್ತಿರುವ ಮಹಿಳೆಯ ಪಾತ್ರ ಕುರಿತು ಮಾತನಾಡುವರು.

ಕೌಶಲ ಕಾರ್ಯಾಗಾರದಲ್ಲಿ ಅದಿಲ್‌ ಹುಸೇನ್‌. ಮೇಘನಾ ಗುಲ್ಜಾರ್‌, ಪುನೀತ್‌ ಕೃಷ್ಣ, ರಾಜೀ ವ್‌ ಕೃಷ್ಣ ಮೆನನ್‌, ಸುಭಾಷ್‌ ಘಾಯ್‌ ಮತ್ತಿತರರು ಪಾಲ್ಗೊಳ್ಳುವರು.

ಪ್ರಗತಿಯಲ್ಲಿರುವ ಚಿತ್ರಗಳ ವಿಭಾಗದಲ್ಲಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳನ್ನು ನಿರ್ದೇಶಕರು ಆಸಕ್ತ ನಿರ್ಮಾಪಕರಿಗೆ ಪ್ರದರ್ಶಿಸಲೂ ಅವಕಾಶವಿದೆ. ಈ ಬಾರಿಯ ಚಿತ್ರ ನಿರ್ಮಾಪಕರ ಕಾರ್ಯಾಗಾರಕ್ಕೆ ಅಮೆರಿಕ, ಶ್ರೀಲಂಕಾ, ಬಾಂಗ್ಲಾದೇಶ್‌, ತೈವಾನ್‌ ಮತ್ತು ಭಾರತದ ೨೦ ಯೋಜನೆಗಳು ಆಯ್ಕೆಯಾಗಿವೆ. ಇದರೊಂದಿಗೆ ಸಹ ನಿರ್ಮಾಣ ಯೋಜನೆಯಡಿಯೂ ಭಾರತ, ಭೂತಾನ್‌. ಬಾಂಗ್ಲಾದೇಶ, ಫ್ರಾನ್ಸ್‌, ನೇಪಾಳ್‌ ಸಿಂಗಾಪುರ ಸೇರಿದಂತೆ ೧೪ ಯೋಜನೆಗಳು ಆಯ್ಕೆಯಾಗಿದ್ದು, ಹಿಂದಿ, ಇಂಗ್ಲಿಷ್‌, ಮಲಯಾಲಂ, ಬಂಗಾಳಿ, ಅಸ್ಸಾಮಿ, ನೇಪಾಳಿ, ಗುಜರಾತಿ, ಭೂತಾನೀಸ್‌ ಭಾಷೆಯ ಪ್ರತಿಭಾವಂತ ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಈ ವರ್ಷದ ಉತ್ಸವಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಕೇಂದ್ರ ಪರಿಸರ ರಾಜ್ಯ ಸಚಿವ ಬಬುಲ್‌ ಸುಪ್ರಿಯೊ, ಎನ್‌ಎಫ್ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.

ಕರ್ನಾಟಕ, ಲಕ್ಷದ್ವೀಪ್‌, ಮಧ್ಯಪ್ರದೇಶ, ಒರಿಸ್ಸಾ, ಉತ್ತರಾಖಂಡ್‌, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ ಮತ್ತಿತರ 12 ರಾಜ್ಯಗಳ ಇಲಾಖೆಗಳು ಈ ಸಂತೆಯಲ್ಲಿ ಭಾಗವಹಿಸಿವೆ. ಫಿಲ್ಮ್‌ ಬಜಾರ್‌ ಎನ್‌ಎಫ್‌ಡಿಸಿ ಸಂಘಟಿಸುತ್ತಿರುವ ವೇದಿಕೆ. ಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರ ಏಜೆಂಟರು, ವಿತರಕರು, ಚಿತ್ರೋತ್ಸವ ಸಂಘಟಕರ ವಿಚಾರ ವಿನಿಮಯಕ್ಕೆ ಕಲ್ಪಿಸಿರುವಂಥದ್ದು. ದಕ್ಷಿಣ ಏಷ್ಯಾ ಹಾಗೂ ವಿವಿಧ ದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳುವರು. ಕಳೆದ ವರ್ಷ 850 ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ

Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ

Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್‌ʼ

Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್‌ʼ

13

“ದೊಡ್ಡ ಸೌತ್‌ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್‌ ಜೊತೆ ಬೇಬೋ ನಟಿಸೋದು ಪಕ್ಕಾ?

ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ

ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ

ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಆಸ್ಪತ್ರೆ ವರದಿ ಹೇಳಿದ್ದನು

ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.