ಬಿಜೆಪಿ ನಾಯಕರ ಪಾಳಯದಲ್ಲಿ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್ ಗೆ ಸನ್ಮಾನ
Team Udayavani, May 25, 2019, 12:35 PM IST
ಕಲಬುರಗಿ: ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ ಹಾಗೂ ನಮ್ಮ ಶಾಸಕರು ಯಾರೂ ಪಕ್ಷ ಬಿಡಲ್ಲ ಎಂಬ ಹೇಳಿಕೆಯ ನಡುವೆಯೇ ಶನಿವಾರ ನೂತನ ಬಿಜೆಪಿ ಸಂಸದರನ್ನು ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಸನ್ಮಾನಿಸಿದ್ದಾರೆ.
ತಮ್ಮ ನಿವಾಸದಲ್ಲಿ ಭೇಟಿಯಾದ ಕಲಬುರಗಿ ಶಾಸಕ ಡಾ.ಉಮೇಶ್ ಜಾಧವ್ ಮತ್ತು ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿ ಹೊಳಿ ಮಾತುಕತೆ ನಡೆಸಿದರು.
ಬಳಿಕ ನೂತನ ಸಂಸದರಾಗಿ ಆಯ್ಕೆಯಾದ ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಇತರರು ಹಾಜರಿದ್ದರು.