ಪ್ರವಾಹದಲ್ಲಿ ಬಂದ ಹುಲಿ ಮನೆಯ ಕೋಣೆಯೊಳಗೆ ಮಲಗಿತ್ತು!
ಅಸ್ಸಾಂ ನೆರೆ ಪರಿಸ್ಥಿತಿ ತಂದ ಪಜೀತಿ!!
Team Udayavani, Jul 18, 2019, 9:23 PM IST
ಮಣಿಪಾಲ: ಈಶಾನ್ಯ ಭಾರತ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಕಾರಣದಿಂದ ಅಸ್ಸಾಂ
ನ ಹಲವು ಪ್ರದೇಶಗಳಲ್ಲಿ ಬ್ರಹ್ಮಪುತ್ರಾ ನದಿಯ ಅಬ್ಬರ ಜೋರಾಗಿದೆ. ಈ ಪ್ರವಾಹದ ಪರಿಣಾಮ ಸುಮಾರು 8 ಲಕ್ಷ ಜನ ಮನೆ ಮಠ ಕಳೆದುಕೊಂಡು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಇನ್ನು ಈ ರಾಜ್ಯದಲ್ಲಿರುವ ವಿಶ್ವಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರಾಣಿಗಳಿಗೂ ಪ್ರವಾಹದಿಂದ ಸಂಕಷ್ಟ ಎದುರಾಗಿದೆ. ವಿಶಾಲವಾದ ಈ ರಾಷ್ಟ್ರೀಯ ಉದ್ಯಾನವನದ ಬಹುಭಾಗ ಇದೀಗ ಜಲಾವೃತವಾಗಿದ್ದು ಇದರಿಂದಾಗಿ ಇಲ್ಲಿರುವ ಪ್ರಾಣಿಗಳು ದಿಕ್ಕು ಪಾಲಾಗಿ ಓಡುತ್ತಿವೆ. ಮತ್ತು ನೀರಿಲ್ಲದ ಎತ್ತರದ ಪ್ರದೇಶಗಳಿಗೆ ಗುಳೇ ಹೋಗುತ್ತಿವೆ.
ರಾಷ್ಟ್ರೀಯ ಉದ್ಯಾನವನದ ಒಳಗೇ ಸುತ್ತಾಡುತ್ತಿದ್ದ ವಿವಿಧ ಜಾತಿಯ ಪ್ರಾಣಿಗಳು ಈ ಪ್ರವಾಹ ಪರಿಸ್ಥಿತಿಯಿಂದಾಗಿ ಇದೀಗ ಸಿಕ್ಕಸಿಕ್ಕಲ್ಲಿ ನುಗ್ಗುವಂತಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವ ಗ್ರಾಮಕ್ಕೆ ಹುಲಿಯೊಂದು ನುಗ್ಗಿರುವ ಘಟನೆ ವರದಿಯಾಗಿದೆ. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಈ ಹುಳಿ ಗ್ರಾಮದೊಳಗೆ ನುಸುಳಿ ಬಂದಿದೆ.
A Billion Choices says the bag but this #tiger chooses bed n breakfast to escape #AssamFloods. Our team @wti_org_india @action4ifaw with @kaziranga_ working to ensure safe passage to the #forest #Kaziranga @vivek4wild @AzzedineTDownes + pic.twitter.com/5hfxtK2djo
— Wildlife Trust India (@wti_org_india) July 18, 2019
ಇಷ್ಟು ಮಾತ್ರವಲ್ಲದೇ ಈ ಹುಲಿ ಮನೆಯೊಂದಕ್ಕೆ ಪ್ರವೇಶಿಸಿದ್ದು, ಅಲ್ಲಿನ ಕೊಠಡಿಯೊಂದರಲ್ಲಿ ಆರಾಮವಾಗಿ ಮಲಗಿಕೊಂಡಿದೆ. ಇದು ಉದ್ಯಾನವನದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಮನೆಯಾಗಿದೆ.
ಈ ಚಿತ್ರವನ್ನು ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯಾ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಒಟ್ಟಾರೆಯಾಗಿ ಅಸ್ಸಾಂನಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿ ಆ ಭಾಗದ ಜನರಿಗೆ ಹಾಗೂ ಪ್ರಾಣಿಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್