ನೀರಕಟ್ಟೆ ಪವರ್ ಪ್ರಾಜೆಕ್ಟ್ ಒಳಗೆ ನುಗ್ಗಿದ ನೇತ್ರಾವತಿ ನದಿ ನೀರು
ಹಿಂದಿನ ಬಾಗಿಲ ಮೂಲಕ ಒಳಗಡೆಗೆ ಬಂದ ಪ್ರವಾಹ | ಯಂತ್ರ, ಪರಿಕರಗಳಿಗೆ ಹಾನಿ
Team Udayavani, Aug 10, 2019, 12:58 PM IST
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಜಲ ವಿದ್ಯುತ್ ಉತ್ಪಾದನಾ ಘಟಕವಾದ ನೀರಕಟ್ಟೆ ಸಾಗರ್ ಪವರ್ ಪ್ರಾಜೆಕ್ಟ್ ಒಳಗಡೆಗೆ ನುಗ್ಗಿದ್ದು, ಭಾಗಶಃ ಮುಳುಗಡೆ ಆಗಿದೆ.
ನೇತ್ರಾವತಿಯಲ್ಲಿ ಭಾರೀ ಪ್ರಮಾಣದಲ್ಲಿ, ಪ್ರವಾಹದ ರೀತಿಯಲ್ಲಿ ನೀರು ಹರಿದು ಬರುತ್ತಿದ್ದು, ಸಂಜೆ 4 ಗಂಟೆಯ ಹೊತ್ತಿಗೆ ಬಂದ ನೀರಿನ ಪ್ರವಾಹ ಒಮ್ಮೆಗೆ ನಿರೀಕ್ಷೆ ಮೀರಿ ಹರಿದು ಬಂದು ಘಟಕದ ಹಿಂದಿನ ಬಾಗಿಲ ಮೂಲಕ ಒಳಗಡೆಗೆ ನುಗ್ಗಿದ್ದು, ಹೀಗಾಗಿ ಘಟಕದ ಒಳಗಡೆ ನೀರು ಸೇರಿಕೊಂಡಿದೆ.
ನೆರೆ ನೀರು ಘಟಕದ ಒಳಗಡೆ ಇರುವ ವಿದ್ಯುತ್ ಉತ್ಪಾದನೆಯ ಯಂತ್ರವನ್ನು ಆವರಿಸಿದ್ದು, ಇತರೇ ಯಂತ್ರ, ಪರಿಕರಗಳು ಹಾನಿಗೊಂಡಿದೆ. ಘಟಕದ ಒಳಗಡೆ ನೀರು ತುಂಬಿ ಹೋಗಿ ಡ್ಯಾಂ ಭಾಗಶಃ ಮುಳುಗಡೆಯಾದಂತಾಗಿದೆ.
ಸಿಬಂದಿ ಪಾರು
ಘಟಕದ ಒಳಗಡೆ ಹಗಲು ಪಾಲಿಯ 6 ಮಂದಿ ಎಂಜಿನಿಯರ್ ಮತ್ತು 4 ಇತರ ಸಿಬಂದಿ ಸೇರಿದಂತೆ ಒಟ್ಟು 10 ಮಂದಿ ಕೆಲಸದಲ್ಲಿ ನಿರತರಾಗಿದ್ದರು. ಒಳಗಡೆ ನೀರು ಬರುವುದನ್ನು ಗಮನಿಸಿ ಮೇಲಕ್ಕೆ ಏರಿ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ಘಟಕದ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ಸಗೀರ್ ಅಹಮದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ