130 ಇಂಗುಗುಂಡಿ ನಿರ್ಮಿಸಿದ ವಿದ್ಯಾರ್ಥಿನಿಯರು
ಕಾರ್ಮೆಲ್ ಪ್ರೌಢಶಾಲೆ: ಜಲಕ್ರಾಂತಿಗೆ ಮುನ್ನುಡಿ
Team Udayavani, Aug 5, 2019, 1:41 PM IST
ಇಂದುಗುಂಡಿ ನಿರ್ಮಿಸಿದ ಬಿ.ಸಿ. ರೋಡ್ನ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲಾ ವಿದ್ಯಾರ್ಥಿನಿಯರು.
ಬಂಟ್ವಾಳ: ಬೇಸಗೆಯಲ್ಲಿ ತಮ್ಮ ಮನೆಗಳಲ್ಲಿ ನೀರಿನ ಬವಣೆ ಬರಬಾರದು ಎಂಬ ನಿಟ್ಟಿನಲ್ಲಿ ಬಿ.ಸಿ. ರೋಡ್ನ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಶಿಕ್ಷಕರ ಮಾರ್ಗದರ್ಶನದಿಂದ 130 ಇಂಗುಗುಂಡಿ ಮಾಡಿ ಜಲಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
ಶಿಕ್ಷಕ ರೋಶನ್ ಪಿಂಟೋ ಮಾರ್ಗದರ್ಶನ
ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕ ರೋಶನ್ ಪಿಂಟೋ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿನಿಯರು ತಮ್ಮ ಮನೆ ಪರಿಸರದಲ್ಲಿ ಇಂಗುಗುಂಡಿಗಳನ್ನು ಮಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳು ತಾವು ಮನೆಯಲ್ಲಿ ನಿರ್ಮಿಸಿರುವ ಇಂಗುಗುಂಡಿಗಳ ವರದಿ ನೀಡಿದ್ದು, ಈ ಮೂಲಕ ಒಟ್ಟು ಇಂಗುಗುಂಡಿಗಳ ಸಂಖ್ಯೆ ಲೆಕ್ಕ ಹಾಕಲಾಗಿದೆ. ಬೇಸಗೆಯಲ್ಲಿ ಹಲವು ವಿದ್ಯಾರ್ಥಿಗಳ ಮನೆಯವರು ನೀರಿನ ಬವಣೆ ಅನುಭವಿಸುತ್ತಿದ್ದು, ಭೂಮಿಗೆ ನೀರು ಕೊಟ್ಟಾಗಲೇ ನಾವು ಬದುಕಲು ಸಾಧ್ಯ ಎಂಬ ನಿಟ್ಟಿ ನಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ್ದರು.
ಮನೆಯ ಸುತ್ತಮುತ್ತ ಇಂಗುಗುಂಡಿ
ಶಾಲಾ ವಠಾರದಲ್ಲಿ ಸಾಕಷ್ಟು ಸ್ಥಳಾವಕಾಶ ಲಭ್ಯತೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಅವರ ಮನೆಯ ಸುತ್ತಮುತ್ತ ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ.
ಕೆಲವು ವಿದ್ಯಾರ್ಥಿನಿಯರು ಹೆತ್ತವರ ಸಹಾಯ ಪಡೆದರೆ, ಇನ್ನು ಕೆಲವು ವಿದ್ಯಾರ್ಥಿನಿಯರು ಸ್ವತಃ ಪ್ರತೀ ದಿವಸ ಸ್ವಲ್ಪ ಸ್ವಲ್ಪ ಕೆಲಸ ಮಾಡಿ ಗುಂಡಿ ಪೂರ್ಣಗೊಳಿಸಿದ್ದಾರೆ. 3 ಅಡಿ ಉದ್ದ, 2 ಅಡಿ ಅಗಲ, 2 ಅಡಿ ಆಳದ ಗುಂಡಿ ನಿರ್ಮಿಸಿದ್ದಾರೆ.
ತಮ್ಮ ಮನೆ ಅಂಗಳ, ನೆರೆಮನೆ ಯವರ ಜಾಗ, ಮಾರ್ಗದ ಬದಿ, ಕಾಡಿನಲ್ಲಿ ಇಂಗುಗುಂಡಿ ನಿರ್ಮಿಸಿ ದ್ದಾರೆ. ವಿದ್ಯಾರ್ಥಿನಿ ರಚನಾ 9 ಇಂಗುಗುಂಡಿಗಳನ್ನು ಸ್ವತಃ ನಿರ್ಮಿ ಸಿದ್ದು, ಹರ್ಷಿತಾ ಹಾಗೂ ಆಯಿಷತ್ ಆನ್ಸೀಫಾ 7 ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ. ಇತರ ವಿದ್ಯಾರ್ಥಿನಿಯರು ಮೂರು, ನಾಲ್ಕು ಇಂಗುಗುಂಡಿಗಳನ್ನು ನಿರ್ಮಿ ಸಿದ್ದಾರೆ. ಹೆತ್ತವರೂ ಅವರನ್ನು ಬೆಂಬಲಿಸಿದ್ದು, ಶಿಕ್ಷಕ ರೋಶನ್ ಪಿಂಟೋ ತಮ್ಮ ಮನೆಯಲ್ಲಿ ಕೊಳವೆ ಬಾವಿಗೆ ಜಲ ಮರುಪೂರಣ ಮಾಡಿ ಅದರ ಪ್ರಯೋಜನ ಪಡೆದಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ