ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿ ಡಿಜಿಟಲ್‌ ಗ‌ುರುತಿನ ಸಂಖ್ಯೆ


Team Udayavani, Feb 5, 2019, 12:30 AM IST

04-bdk-02a.jpg

ಬದಿಯಡ್ಕ: ಜಾನುವಾರು ಸಹಿತ ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿಯಲ್ಲಿ 12 ಅಂಕೆಗಳ ಗುರುತಿನ ನಂಬ್ರ ನೀಡಲಾಗುವುದು.ಇ-ಆಫೀಸ್‌ ಸಾಧ್ಯತೆಗಳನ್ನು ಅಳವಡಿಸುವ ಮೂಲಕ ಪಶುಸಂಗೋಪನ ಇಲಾಖೆಯ ಮಹತ್ವದ ಹೆಜ್ಜೆಯಾಗಿದೆ ಇದು.ಕ್ಷೀರ ಕೃಷಿಕರ ಮಾಹಿತಿಗಳನ್ನು ಗೂಗಲ್‌ ಮ್ಯಾಪ್‌ನ ಸಹಾಯದೊಂದಿಗೆ ಜಿಯೋಮ್ಯಾಪಿಂಗ್‌ ಮೂಲಕ ಸಂಗ್ರಹಿಸುವುದು.

ಹಾಲುತ್ಪಾದಕರಿಗಿರುವ ಸರಕಾರಿ ಸೇವೆಗಳು ಸುಲಭವಾಗಿ ಲಭಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮೊದಲ ಹಂತದಲ್ಲಿ ಸಂಪೂರ್ಣ ಮಾಹಿತಿಗಳನ್ನು ಹೊಂದಿರುವ 12 ಅಂಕೆಗಳ ಡಿಜಿಟಲ್‌ ಐಡಿ ನಂಬ್ರ ನೀಡುವುದು. ಮೃಗಗಳಿಗೆ ಮಾತ್ರವಲ್ಲ, ಕ್ಷೀರ ಕೃಷಿಕರಿಗೆ ಪ್ರತ್ಯೇಕ ನಂಬ್ರ ನೀಡಲಾಗುವುದು. ಇವುಗಳ ಏಕೀಕೃತ ಸ್ವಭಾವದಲ್ಲಿ ಡಿಜಿಟಲ್‌ ಡಾಟಾ ಬ್ಯಾಂಕ್‌ ತಯಾರಿಸುವುದು. ಈ ಮೂಲಕ ದನ ಕಾರು ಹಾಕಿದ ದಿನಾಂಕ, ಲಸಿಕೆ ನೀಡಿದ ಮಾಹಿತಿಗಳು, ಚಿಕಿತ್ಸೆ ಮಾಹಿತಿಗಳು, ರೋಗಗಳ ಕುರಿತು, ಹಾಲುತ್ಪಾದನೆ ಮುಂತಾದವುಗಳ ಮಾಹಿತಿಗಳು ಐಡಿ ನಂಬ್ರ ನೀಡಿದರೆ ಆನ್‌ಲೆ„ನ್‌ ಆಗಿ ಲಭಿಸುವುದು. ರಾಜ್ಯ ಸರಕಾರದ ಇನ್ಶೂರೆನ್ಸ್‌  ಯೋಜನೆಯಾದ ಗೋಸಮೃದ್ಧಿಯ ಮಾಹಿತಿಗಳನ್ನು ಸಂಗ್ರಹಿಸಿರು ವುದರಿಂದ ಈ ಕುರಿತಾದ ಮಾಹಿತಿಯೂ ಲಭಿಸುವುದು. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ರೋಗ ಹರಡದಂತೆ  ಪ್ರತಿರೋಧ ಕ್ರಮ ತ್ವರಿತಗತಿಯಲ್ಲಿ  ನಡೆಸಲು ಜಿಯೋಮ್ಯಾಪಿಂಗ್‌ ಸಹಾಯವಾಗುವುದು. ಲಸಿಕೆ ನೀಡುವುದನ್ನು ಈ ಆ್ಯಪ್‌ ಮೂಲಕ ಸಂಗ್ರಹಿಸುವುದರೊಂದಿಗೆ ಪ್ರತೀ ವಲಯದಲ್ಲಿ ಲಸಿಕೆ ಸ್ಥಿತಿಗತಿಗಳ ಬಗ್ಗೆ ಆನ್‌ಲೆ„ನ್‌ ಮೂಲಕ ತಿಳಿಯಬಹುದು.  ಅನಿಮಲ್‌ ಝೋನ್‌ ಆಧಾರವಾಗಿಸಿರುವ ಪಶುಸಂಗೋಪನ ಇಲಾಖೆಯ ವ್ಯವಹಾರಗಳಿಗೆ ಸಹಾಯಕವಾಗುವ ರೀತಿಯಲ್ಲಿ ಪ್ರಾರಂಭಿಸಲಾದ ಈ ಯೋಜನೆ ಪಶುಸಂಗೋಪನ ನಿರ್ದೇಶನಾಲಯ, ಜಿಲ್ಲಾ ಕಚೇರಿಗಳು, ತಾಲೂಕು ಕಚೇರಿಗಳು, ಪಂಚಾಯತ್‌ಗಳ ವೆಟರ್ನರಿ ಕೇಂದ್ರಗಳ ಸಹಿತ ರಾಜ್ಯದ 2,000ದಷ್ಟು  ಕಚೇರಿಗಳನ್ನು ಸಂಪೂರ್ಣವಾಗಿ ಡಿಜಿಟಲ್‌ ಶೃಂಖಲೆಯೊಂದಿಗೆ ಜೋಡಿಸಲಾಗಿದೆ. ಈ ಮೂಲಕ  ಪಶುಸಂಗೋಪನ ಇಲಾಖೆಯು ಇ-ಆಫೀಸ್‌ ವಲಯದಲ್ಲೂ ತನ್ನ ಛಾಪು ಮೂಡಿಸಿದೆ.

ರಾಜ್ಯದ  ಎಲ್ಲ ವೆಟರ್ನರಿ ವೈದ್ಯರಿಗೆ, ಲೆ„ವ್‌ಸ್ಟಾಕ್‌ ಇನ್ಸ್‌ಪೆಕ್ಟರ್‌ಗಳಿಗೆ ಟ್ಯಾಬ್‌ಗಳನ್ನು ನೀಡ ಲಾಗಿದೆ. ಮಾಹಿತಿ ದಾಖಲಿಸುವುದಕ್ಕಾಗಿ 4,000 ಲ್ಯಾಪ್‌ಟಾಪ್‌ ಗಳನ್ನು ಸಹ ನೀಡಲಾಗಿದೆ.  ಐಐಐ ಟಿಎಂಕೆ ತಯಾರಿಸಿದ ಭೂಮಿಕಾ ಎಂಬ ಅಪ್ಲಿಕೇಶನ್‌ ಉಪಯೋಗಿಸಿ ಕೊಂಡು ಮಾಹಿತಿ ದಾಖಲಿಸುವುದು. ಪಶು ವೈದ್ಯರು ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿನ ಜಾನುವಾರುಗಳ ಮತ್ತು ಹೈನುಗಾರಿಕಾ ಕೃಷಿಕರ ಮಾಹಿತಿಗಳನ್ನು ಚಿತ್ರ ಸಹಿತ ದಾಖಲಿಸುವುದು.  ಸಂಗ್ರಹಿಸಿದ ಮಾಹಿತಿಗಳನ್ನು ಜಿಯೋಗ್ರಾಫಿಕ್‌ ಇನ್‌ಫರ್ಮೇಶನ್‌ ಸಿಸ್ಟಂನಲ್ಲಿ ದಾಖಲಿಸುವುದು. ದನಗಳ ಬಣ್ಣ, ಗಾತ್ರ, ತಳಿ ಮುಂತಾದ ವಿಷಯಗಳಲ್ಲದೆ ಹಸುಸಾಕಣೆಗಾರರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿದಲ್ಲಿ ಹಸು ಅಥವಾ ಇನ್ನಿತರ ಸಾಕುಪ್ರಾಣಿಗಳಿಗೆ ನೀಡಲಾಗುವ ಲಸಿಕೆಗಳು, ಪಶು ಆಹಾರಗಳು, ಇನ್ಶೂರೆನ್ಸ್‌ ಮಾಹಿತಿಗಳು   ಮಾತ್ರವಲ್ಲದೆ ಜಾನುವಾರುಗಳಿಗೆ ಸರಕಾರದಿಂದ, ಮೃಗ ಸಂರಕ್ಷಣಾಲಯ, ಪಂಚಾಯತ್‌ ಮಟ್ಟದಲ್ಲಿ ದೊರೆಯುವ ಎಲ್ಲ ಸೌಲಭ್ಯಗಳ ಪ್ರಯೋಜನವನ್ನೂ ಸುಲಭದಲ್ಲಿ ಪಡೆಯಬಹುದಾಗಿದೆ. ರಾಜ್ಯದಲ್ಲಿ ಸುಮಾರು 10ಲಕ್ಷದಷ್ಟು  ಜಾನುವಾರುಗಳಿರುವುದಾಗಿ ಪ್ರಾಥಮಿಕ ಲೆಕ್ಕಾಚಾರವಾಗಿದೆ. 

2022ರೊಳಗೆ ಹಾಲುತ್ಪಾದನಾ ಕ್ಷೇತ್ರದ ಆದಾಯ ದುಪ್ಪಟ್ಟುಗೊಳಿಸುವ ಉದ್ಧೇಶವನ್ನೂ ಇದು ಒಳಗೊಂಡಿದೆ. ಈ ಪದ್ಧತಿಯ ಅನುಷ್ಠಾನಕ್ಕಾಗಿ ಮೊದಲ ಹಂತದಲ್ಲಿ ಸುಮಾರು 500 ಮಿಲಿಯನ್‌ ರೂ.ಗಳನ್ನು 40 ಮಿಲಿಯನ್‌ ಗೋವುಗಳ ಸಂರಕ್ಷಣೆಗೆ ಮೀಸಲಿಡುವ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ.  ಯೋಜನೆಯ ಅನುಷ್ಠಾನ ಸರಿಯಾದ ಉಪಯುಕ್ತವಾದ ರೀತಿಯಲ್ಲಿ ನಡೆದಲ್ಲಿ ಮುಂದೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಗೊಳಿಸುವ ಸಾಧ್ಯತೆಯಿದೆ. ಹೆ„ನುಗಾರಿಕೆಯನ್ನು ಜೀವನೋಪಾಯವಾಗಿ ಕಂಡುಕೊಂಡ ಮಿಲಿಯ ಗಟ್ಟಲೆ ಜನರಿಗೆ ಇದು ಸಹಾಯಕವಾಗಲಿದೆ. ಹಸುಗಳ ಕಳ್ಳತನದ ಸಮಸ್ಯೆಯೂ ಗಮನೀಯವಾಗಿ ಕಡಿಮೆಯಾಗಲು ಇದು ಪೂರಕವಾಗಿದೆ. 

ಜಿಯೋಮ್ಯಾಪಿಂಗ್‌ ಆರಂಭ ಕಾಸರಗೋಡು ಜಿಲ್ಲೆಯಲ್ಲಿ ಜ. 14ರಿಂದ ಜಿಯೋಮ್ಯಾಪಿಂಗ್‌ ಪ್ರಾರಂಭ ಮಾಡಿದ್ದು ಈಗಾಗಲೇ ಸುಮಾರು ಶೇ.27ರಷ್ಟು ಜಾನುವಾರುಗಳಿಗೆ 12 ಅಂಕೆಗಳ ಡಿಜಿಟಲ್‌ ಟ್ಯಾಗ್‌ ಅಳವಡಿಸಲಾಗಿದೆ. ಅತ್ಯಂತ ವೇಗವಾಗಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಜ್ಯಾರಿಗೊಳಿಸುವ ಕಾರ್ಯವು ನಡೆಯುತ್ತಿದೆ. ಪ್ರಸ್ತುತ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕುವ ಕಾರ್ಯವೂ ಪ್ರಾರಂಭವಾಗಿದೆ. ಇದೊಂದು ಅತ್ಯಂತ ಉಪಯುಕ್ತ ಹಾಗೂ ಪರಿಣಾಮಕಾರಿ ಯೋಜನೆಯಾಗಿದ್ದು ಕೃಷಿಕರ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ.
– ಡಾ| ನಾಗರಾಜ್‌ 
ಜಿಲ್ಲಾ  ಕೋ-ಆರ್ಡಿನೇಟರ್‌.

ಮೌಲ್ಯ ನಿರ್ಣಯಕ್ಕೆ ಉಪಯುಕ್ತ
ಬದಿಯಡ್ಕ ಪಂಚಾಯತ್‌ನಲ್ಲಿ  ಸುಮಾರು 1,200 ಜಾನುವಾರುಗಳಿಗೆ ಟ್ಯಾಗ್‌ ಹಾಕಲಾಗಿದ್ದು  ಫೆಬ್ರವರಿಯೊಳಗಾಗಿ 3,000ರಷ್ಟು  ಜಾನುವಾರುಗಳನ್ನು  ಈ ಯೋಜನೆಯಡಿ ಯಲ್ಲಿ  ದಾಖಲಿಸಿ ಸೌಲಭ್ಯಗಳು ಸುಲಭವಾಗಿ ಲಭಿಸುವಂತೆ ಮಾಡಲಾಗುತ್ತದೆ. ಹಸುಗಳ ಪ್ರಾಯ, ಹಾಕಿದ ಕರುಗಳ ಸಂಖ್ಯೆ, ಮಾರಾಟ ಮಾಡುವುದಾದರೆ ಮೌಲ್ಯ ನಿರ್ಣಯ ಮುಂತಾದ ವಿಚಾರಗಳ ಬಗ್ಗೆ  ಸ್ಪಷ್ಟ  ಹಾಗೂ ನಿಖರ ಮಾಹಿತಿ ಪಡೆಯುವಲ್ಲಿ  ಈ ಯೋಜನೆಯು ಬಹಳ ಉಪಯುಕ್ತವಾಗಿದೆ. 
– ಡಾ| ಚಂದ್ರ ಬಾಬು
ಬದಿಯಡ್ಕ  ಮೃಗಾಸ್ಪತ್ರೆಯ ವೈದ್ಯರು

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿ

ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿ

ಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವುಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವು

ಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವು

ಅತ್ತಿಮಂಗಲ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ದಾಳಿ : ಸಹೋದರರು ಪ್ರಾಣಾಪಾಯದಿಂದ ಪಾರು

ಅತ್ತಿಮಂಗಲ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ದಾಳಿ : ಸಹೋದರರು ಪ್ರಾಣಾಪಾಯದಿಂದ ಪಾರು

Madikeri ಕಾಡುಕೋಣ ಹತ್ಯೆ: ಇಬ್ಬರ ಸೆರೆ; 6 ಮಂದಿಗೆ ಶೋಧ

Madikeri ಕಾಡುಕೋಣ ಹತ್ಯೆ: ಇಬ್ಬರ ಸೆರೆ; 6 ಮಂದಿಗೆ ಶೋಧ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.