ಬೇಕಲ-ನೀಲೇಶ್ವರ ಜಲ ಮಾರ್ಗ: ಭೂಸ್ವಾಧೀನ ಸರ್ವೆ


Team Udayavani, Aug 30, 2019, 5:31 AM IST

29KSDE17

ಸಾಂದರ್ಭಿಕ ಚಿತ್ರ.

ಕಾಸರಗೋಡು: ಮಹತ್ವಾಕಾಂಕ್ಷೆಯ ಕೋವಳಂ – ಕಾಸರಗೋಡು ಜಲ ಮಾರ್ಗ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧವಾದ ಬೇಕಲದಿಂದ ನೀಲೇಶ್ವರದ ವರೆಗಿನ ಜಲ ಮಾರ್ಗಕ್ಕೆ ಸಂಬಂಧಿಸಿ ಭೂಸ್ವಾಧೀನ ಸರ್ವೆ ಆರಂಭಗೊಂಡಿದೆ.

ಈ ಯೋಜನೆ ಸಾಕಾರಗೊಂಡಲ್ಲಿ ಸರಕು ಸಾಗಾಟ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ಜಲ ಮಾರ್ಗವನ್ನು ಬಳಸಿಕೊಳ್ಳಬಹುದು.
ಈ ಜಲ ಮಾರ್ಗದಿಂದ ಪರಿಸರಕ್ಕೆ ದುಷ್ಪರಿಣಾಮ ಬೀರುವುದನ್ನು ಸಾಕಷ್ಟು ತಡೆಗಟ್ಟಲು ಹಾಗು ರಸ್ತೆ ಸಾರಿಗೆ ಸುಗಮ ಗೊಳಿಸಲು ಸಹಾಯಕವಾಗಲಿದೆ. ಅತ್ಯಂತ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯತೆ ವರ್ಧಿಸಲಿದ್ದು, ಸರಕು ಸಾಗಾಟ ಸಾರಿಗೆ ಕೂಡ ಸುಲಭವಾಗಲಿದೆ.

ಜಲಮಾರ್ಗ ದಿಂದ ಸಾರಿಗೆ ರಂಗದಲ್ಲಿ ಹೊಸ ಸಂಚಲ ನವುಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತವುಳ್ಳ ಹೊಳೆ ಬದಿಯ ಪುರಂಬೋಕು ಸ್ಥಳದ ಬಗ್ಗೆ ಸರ್ವೆ ಆರಂಭ ಗೊಂಡಿದೆ. ಈ ಹಿಂದೆ ಡ್ರೋನ್‌ ಸರ್ವೆ ನಡೆದಿತ್ತು. ಕೋಟ್ಟಪುರಂ ಹೊಳೆ, ನೀಲೇಶ್ವರ ಹೊಳೆ, ನಂಬ್ಯಾರ್‌ಕಲ್‌ ಅಣೆಕಟ್ಟು, ಅರಯಿ ಹೊಳೆ, ಅರಯಿ ತಟಾಕ, ಚೆಮ್ಮಟಂವಯಲ್‌ ಚಿಲ್ಡನ್ಸ್‌ ಪಾರ್ಕ್‌ ಸಮೀಪದಿಂದ ಹಾದು ಹೋಗಿ ವೆಳ್ಳಿಕೋತ್‌ ಮಡಿಯನ್‌ಕುಲೋಂ, ಕೊಟ್ಟಾಟ್‌ ವಿ.ಸಿ.ಬಿ, ಚಿತ್ತಾರಿ ಹೊಳೆ, ಬೇಕಲದ ವರೆಗೆ ಜಲ ಮಾರ್ಗ ಪರಿಗಣನೆಯಲ್ಲಿದೆ. 10 ಕಿಲೋ ಮೀಟರ್‌ ವ್ಯಾಪ್ತಿಯ ಜಲ ಮಾರ್ಗಕ್ಕೆ 100 ಎಕರೆ ಭೂಸ್ವಾಧೀನ ಮಾಡಬೇಕಾಗಿ ಬರಲಿದೆ.

ಪ್ರಸ್ತುತ ಇರುವ ಕಾಲು ದಾರಿ ಸಹಿತ ಎತ್ತರಕ್ಕೇರಿಸಬೇಕು. ಸಮುದ್ರದಿಂದ ಉಪ್ಪು ನೀರು ನುಗ್ಗದಂತೆ ನಂಬ್ಯಾರ್‌ಕಾಲ್‌ನಲ್ಲಿ ಹಾಗು ಚಿತ್ತಾರಿ ಹೊಳೆಯಲ್ಲಿ ಅಗತ್ಯದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಜಿಲ್ಲೆಯಲ್ಲಿ ಜಲಮಾರ್ಗ
ಕಾಸರಗೋಡು ಜಿಲ್ಲೆಯಲ್ಲಿ ಕೋಟ್ಟಪ್ಪುರಂ ನಿಂದ ಆರಂಭ ಗೊಂಡು ನೀಲೇಶ್ವರ, ನಂಬ್ಯಾರ್‌ಕಾಲ್‌ ಅಣೆಕಟ್ಟು, ಅರಯಿ ಹೊಳೆ, ಅರಯಿ ತಟಾಕ ದಾರಿಯಾಗಿ ಚೆಮ್ಮಟಂವಯಲ್‌ ಚಿಲ್ಡ್ರನ್ಸ್‌ ಪಾರ್ಕ್‌ ಸಮೀಪದಿಂದ ಹಾದು ಹೋಗುವುದು. ಜಲ ಮಾರ್ಗ ಅಲ್ಲಿಂದ ವೆಳ್ಳಿಕೋತ್‌ ಮಡಿಯನ್‌ ಕುಲೋಂ ಕೊಟ್ಟಾಟ್‌ ವಿ.ಸಿ.ಬಿ, ಚಿತ್ತಾರಿ ಹೊಳೆಯಿಂದ ಬೇಕಲಕ್ಕೆ ಸೇರಲಿದೆ.

3 ಮೀ. ಆಳ, 40 ಮೀ. ಅಗಲ
ಜಲ ಮಾರ್ಗವು 3 ಮೀ. ಆಳದಲ್ಲಿದ್ದು, 40 ಮೀ. ಅಗಲದಲ್ಲಿರಬೇಕು. ಜಲ ಮಾರ್ಗ ವನ್ನು ಸಂಪರ್ಕಿಸಲು ಇಕ್ಕೆಲಗಳಲ್ಲಿ ರಸ್ತೆ ಇರಬೇಕು. 20 ಕಂಟೈನರ್‌ಗಳಲ್ಲಿ 500 ಟನ್‌ ಸರಕು ಸಾಗಿಸಲು ಸಾಧ್ಯವಾಗುವಂತೆ ಜಲ ಮಾರ್ಗ ಉದ್ದೇಶಿಸ ಲಾಗಿದೆ. ಈ ಯೋಜನೆಯಿಂದ ಸರಕಾರಕ್ಕೂ, ಸಾರ್ವಜನಿಕರಿಗೂ ಎಷ್ಟು ಪ್ರಯೋಜನ ವಾಗಲಿದೆ ಎಂಬ ಬಗ್ಗೆ ಅವಲೋಕನ ನಡೆಸಿದ ಬಳಿಕ ಜಲಮಾರ್ಗದ ರೂಪುರೇಷೆ ತಯಾರಿಸಲಾಗುವುದು. ಪ್ರಸ್ತುತ ಜಲ ಮಾರ್ಗ ಇರುವೆಡೆ ಜಲ ಮಾರ್ಗವನ್ನು 60 ಮೀಟರ್‌ ಅಗಲಗೊಳಿಸಲಾಗುವುದು. ಜಲ ಮಾರ್ಗ ಇಲ್ಲದೆಡೆ ಹೊಸದಾಗಿ ಜಲ ಮಾರ್ಗ ಸ್ಥಾಪಿಸುವಾಗ 60 ಮೀಟರ್‌ ಅಗಲದಲ್ಲಿ ಕೆ‌ನಾಲುಗಳು ನಿರ್ಮಾಣವಾಗಲಿವೆ.
ಕೇರಳ ವಾಟರ್‌ ವೇಸ್‌ ಇನ್‌ಫ್ರಾಸ್ಟ್ರಕ್ಚರ್ ಕೇರಳದಲ್ಲಿ ಜಲ ಮಾರ್ಗವನ್ನು ರಾಷ್ಟ್ರೀಯ ಜಲ ಮಾರ್ಗವಾಗಿ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ವಹಿಸಿದೆ.

ಪ್ರಥಮ ಹಂತದ ವೆಚ್ಚ 2,300 ಕೋಟಿ ರೂ.
ಕಾಸರಗೋಡಿನಿಂದ ತಿರುವನಂತಪುರದ ವರೆಗಿನ ಜಲಮಾರ್ಗ ನಿರ್ಮಾಣದ ಪ್ರಥಮ ಹಂತದಲ್ಲಿ 2,300 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕೇರಳದಲ್ಲಿ 11 ಜಿಲ್ಲೆಗಳಲ್ಲಿ 633 ಕಿಲೋ ಮೀಟರ್‌ ನೀಳಕ್ಕೆ ಜಲ ಮಾರ್ಗ ಹಾದು ಹೋಗಲಿದೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.