ತೋಡಿನಲ್ಲಿ ವರ್ಷವಿಡೀ ನೀರು ಹರಿಸುವ ವಿಶ್ವಾಸ


Team Udayavani, May 25, 2019, 6:10 AM IST

kere

ಬದಿಯಡ್ಕ:ವರ್ಷದಿಂದ ವರ್ಷಕ್ಕೆ ಬರ ಪರಿಸ್ಥಿತಿಯು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೋಡಿನ ಸಂರಕ್ಷಣೆ ಮತ್ತು ಪುನರುದ್ಧಾರದ ಮೂಲಕ ವರ್ಷಪೂರ್ತಿ ತೋಡಲ್ಲಿ ನೀರು ಹರಿಸುವ ಕನಸನ್ನು ಸಾಕಾರಗೊಳಿಸುವತ್ತ ಪ್ರಯತ್ನಗಳು ಪ್ರಾರಂಭವಾಗಿದ್ದು ಅದಕ್ಕಾಗಿ ತೋಡಿನ ಉಗಮಸ್ಥಾನ ಕಿಂಞ್ಞಣ್ಣಮೂಲೆಯಿಂದ ಪೊಯೆÂ ಅಜಕ್ಕಳ ಮೂಲೆ ತನಕ ಜಲತಜ್ಞರ ತಂಡ ಸುಮಾರು 7ಕಿ,ಮೀ. ನಡಿಗೆಯ ಮೂಲಕ ಸಾಗಿ ಅಧ್ಯಯನ ನಡೆಸಿದರು.

ಈ ಪ್ರದೇಶದ ಸ್ಥಳೀಯ ಕೃಷಿಕರು ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಕಟ್ಟಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು ತೋಡಲ್ಲಿ ನೀರು ಬƒಗನೆ ಬತ್ತಿ ಹೋಗಲು ಇದೂ ಒಂದು ಕಾರಣವಾಗಿದೆ. ಸ್ವರ್ಗ ಮೊಳಕ್ಕಾಲು, ಪಾಲೆಪ್ಪಾಡಿ, ಪೊಯೆÂಗಳಲ್ಲಿ ಕಟ್ಟ ನಿರ್ಮಿಸದೇ ಇರುವುದು ಈ ಬಾರಿಯ ಜಲಕ್ಷಾಮಕ್ಕೆ ಕಾರಣವಾಗಿದೆ ಎಂದು ಜಲತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚುತ್ತಿರುವ ಕೊಳವೆಬಾವಿಗಳ ಉಪಯೋಗ ಕೃಷಿಕರನ್ನು ಕಟ್ಟಗಳಿಂದ ವಿಮುಖರನ್ನಾಗಿಸುತ್ತಿರುವುದೇ ಈ ಪ್ರದೇಶದಲ್ಲಿ ಕಟ್ಟಗಳ ಸಂಖ್ಯೆ ಕಡಿಮೆಯಾಗಲು ಹಾಗೂ ಆ ಮೂಲಕ ಬೇಗನೆ ತೋಡು ಬತ್ತಿ ಹೋಗಲು ಪ್ರಮುಖ ಕಾರಣವಾಗಿದೆ.

ಅಧ್ಯಯನ ತಂಡವು ಕೃಷಿಕರೊಂದಿಗೆ ಈ ಕುರಿತಾಗಿ ಚರ್ಚಿಸಿ ಮುಂದಿನ ವರ್ಷ ಸರಕಾರ ಹಾಗೂ ಸ್ಥಳಿಯಾಡಳಿತ ವ್ಯವಸ್ಥೆಗಳ ಸಹಾಯಕ್ಕೆ ಕಾಯದೆ ಹಿಂಗಾರು ಮಳೆ ಬಳಿಕ 7 ಕಿ.ಮೀ. ತೋಡಿನಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ನೀರು ಸಂಗ್ರಹಿಸಿ ಕೃಷಿ ಅಗತ್ಯಗಳಿಗೆ ಬಳಸುವ ತೀರ್ಮಾನಕ್ಕೆ ಬರಲಾಯಿತು.

ಆಲತಜ್ಞರ ಅಂದಾಜು ಪ್ರಕಾರ ಈ ತೋಡಿನಲ್ಲಿ ಸುಮಾರು 30ರಿಂದ 40ರಷ್ಟು ಕಟ್ಟಗಳನ್ನು ಕಟ್ಟಬಹುದಾಗಿದೆ.

ಪ್ರಥಮವಾಗಿ ನಿರ್ಮಿಸುವ ಕಟ್ಟದ ಉದ್ಘಾಟನೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಮೂಲಕ ಇತರರಿಗೂ ಕಟ್ಟ ನಿರ್ಮಾಣಕ್ಕೆ ಪ್ರೇರಣೆ ನೀಡುವುದರೊಂದಿಗೆ ಸರಣಿ ಕಟ್ಟಗಳ ನಿರ್ಮಾಣಕ್ಕೆ ಚಾಲನೆ ನೀಡಿ ಆಂದೋಲನವನ್ನು ಸƒಷ್ಟಿಸುವ ಉತ್ಸಾಹದಲ್ಲಿದ್ದಾರೆ ಈ ಪ್ರದೇಶದ ಕೃಷಿಕರು.ಮಾತ್ರವಲ್ಲದೆ ಕಟ್ಟಗಳ ನಿರ್ಮಾಣದ ಔಚಿತ್ಯ ಹಾಗೂ ಮಹತ್ವವನ್ನು ಕೃಷಿಕರಿಕೆ ತಿಳಿಯಪಡಿಸುವ ಮೂಲಕ ಜಾಗƒತಿ ಮೂಡಿಸುವ ನಿಟ್ಟಿನಲ್ಲಿ ಕಟ್ಟಗಳು ಎಂಬ ಮಾಹಿತಿಪೂರ್ಣ ಪುಸ್ತಕವನ್ನು ವಿತರಿಸುವ ಯೋಜನೆಯನ್ನೂ ಕೈಗೊಳ್ಳಲಾಯಿತು. ಹಾಗೆಯೇ ಬಾವಿ, ಕೊಳವೆಬಾವಿಗಳಿಗೆ ನೀರಿನ ಮರುಪೂರಣೆಯ ಬಗ್ಗೆ ಮಾರ್ಗದರ್ಶನ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ.

ಮನೆಯಂಗಳದ ಹರಿಯುವ ನೀರನ್ನು ತಡೆಹಿಡಿದು ಸುತ್ತುಬಳಸಿ ಸಾಗುವಂತೆ ಮಾಡುವ ಕ್ರಿಯಾ ಯೋಜನೆಯನ್ನೂ ಹಮ್ಮಿಕೊಂಡಿದ್ದು ಅದರಿಂದ ನೀರಿಂಗಿಸುವ ಹಾಗೂ ಎದುರಾಗುವ ûಾಮವನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುವ ಸರಳ ಸೂತ್ರವನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಪ್ರಾರಂಭವಾಗಲಿದೆ. ಈ ರೀತಿ ಒಗ್ಗಟ್ಟಿನಿಂದ ಊರ ಜನರು ಒಂದಾಗಿ ಶ್ರಮವಹಿಸಿದರೆ ಮುಂದಿನ ವರ್ಷಗಳಲ್ಲಿ ಸ್ವರ್ಗ ಹಾಗೂ ಸುತ್ತುಮುತ್ತಲ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗದು ಎಂಬುದು ಜಲತಜ್ಞರ ಬಲವಾದ ವಿಶ್ವಾಸ.ವರ್ಷಗಳ ಹಿಂದೆ ಉದ್ಯೋಗಿ ಖಾತರಿ ಯೋಜನೆಯಡಿಯಲ್ಲಿ ಖಾಸಗಿ ಜಾಮೀನು ಹಾಗೂ ಗುಡ್ಡೆಗಳಲ್ಲಿ ಬಹಳಷ್ಟು ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತಾದರೂ ಅವೈಜ್ಞಾನಿಕ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸಿರುವುದರಿಂದ ನೀರಿಂಗಿಸುವ ಪ್ರಯತ್ನ ಸಫಲವಾಗಿಲ್ಲ. ಮಣ್ಣಿನ ನೀರಿಂಗಿಸುವ ಗುಣದ ಅಧ್ಯಯನ ಹಾಗೂ ನೀರಿನ ಹರಿವನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಇಂಗುಗುಂಡಿಗಳನ್ನು ನಿರ್ಮಿಸುವ ಪ್ರಾಯೋಗಿಕ ಮತ್ತು ಉತ್ತಮ ರೀತಿಯ ಮರು ಪೂರಣದ ಸಾಧ್ಯೆತೆಗನುಸರಿಸಿ ಯೋಜನೆಗಳನ್ನು ರೂಪೀಕರಿಸಲಾಗುವುದು ಮತ್ತು ನೈಸರ್ಗಿಕ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದು ಜಲತಜ್ಞ ಶ್ರೀಪಡ್ರೆ ಅಭಿಪ್ರಾಯ ಪಟ್ಟರು.

ಇಂಗುವ ಸಾಧ್ಯತೆ
ಮಳೆನೀರು ಗುಡ್ಡದ ಭಾಗದಿಂದ ಸುಲಭವಾಗಿ ಕೆಳಗಿಳಿದು ಬರುತ್ತದೆ. ಅದರಿಂದ ನೀರಿಂಗುವ ಸಾಧ್ಯೆತೆಯೂ ಕಡಿಮೆಯಾಗುತ್ತದೆ. ಆದುದರಿಂದ ಗುಡ್ಡ ಹಾಗೂ ಇನ್ನಿತರ ಎತ್ತರದ ಪ್ರದೇಶಗಳಿಂದ ನೀರು ಇಳಿದು ಬರುವ ವೇಗವನುj ನಿಯಂತ್ರಿಸುವುದಕ್ಕಾಗಿ ಇಂಗು ಗುಂಡಿಗಳನ್ನು ನಿರ್ಮಿಸಿದಲ್ಲಿ ಭೂಮಿಯಲ್ಲಿ ನೀರು ಇಂಗುವ ಸಾಧ್ಯತೆ ಬಹಳಷ್ಟು ಹೆಚ್ಚಾಗುತ್ತದೆ.

ಮಾತ್ರವಲ್ಲದೆ ಈ ನೀರು ಒರತೆಯಾಗಿ ತಿಂಗಳುಗಳ ಕಾಲ ತೋಡು, ಬಾವಿಗಳಿಗೆ ಬಂದು ಸೇರುವ ಕಾರಣ ಅವುಗಳೂ ಸುಲಭದಲ್ಲಿ ಬತ್ತುವುದಿಲ್ಲ. ಹಾಗಾಗಿ ಸ್ವರ್ಗ ತೋಡಿಗೆ ನೀರುಣಿಸುವ ಮುಖ್ಯ ಕೇಂದ್ರಗಳನ್ನು ಗುರುತಿಸಿ ಎತ್ತರದ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿಂಗಲು ಅನುವು ಮಾಡಿಕೊಡಲಾಗುವುದು. ತೋಡಿನ ಎರಡೂ ಬದಿಗಳಲ್ಲಿ ಮಳೆಗಾಲದಲ್ಲಿ ನೀರು ಹರಿಯುಗವ ಕಣಿವೆಗಳನ್ನು ಗುರುತಿಸಿ ನೀರಿಂಗಿಸುವ ಸಾಧ್ಯೆತಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು.  ಶ್ರೀಪಡ್ರೆ ಜಲತಜ್ಞ

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.