ತಾಳ ತಪ್ಪುತ್ತಿರುವ ಹರತಾಳ ಬಿಜೆಪಿ ಕರೆಗೆ ಕುಂಬಳೆ, ಉಪ್ಪಳ ಬಂದ್‌!


Team Udayavani, Jul 31, 2017, 6:55 AM IST

30-kbl-9.jpg

ಕುಂಬಳೆ: ಕೇರಳ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಿರಂತರವಾಗಿ ಮುಂದುವರಿಯುತ್ತಿದ್ದು ಇದರ ಪ್ರತಿ
ಭಟನೆಗಾಗಿ ರಾಜಕೀಯ ಪಕ್ಷಗಳು ಹರತಾಳದ ಅಸ್ತ್ರ  ಪ್ರಯೋಗಿಸುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ರಾತ್ರಿ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಹರತಾಳ ಘೋಷಣೆಯಾಗಿರುತ್ತದೆ. ಇದರಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಹಳ್ಳಿಯಲ್ಲಿ ಕೇವಲ ಖಾಸಗಿ ಬಸ್‌ ಸಂಚಾರವಿರುವ ಪ್ರದೇಶದ ಜನತೆ ಹರತಾಳದ ಕಹಿ ಅನುಭವವಕ್ಕೆ ಸಿಲುಕಬೇಕಾಗಿದೆ.

ಯಾವುದಾದರೊಂದು ಪ್ರದೇಶದಲ್ಲಿ ಕೊಲೆ ಇನ್ನಿತರ ಅಹಿತಕರ ಘಟನೆ ನಡೆದಾಗ ಇಡೀ ರಾಜ್ಯದಲ್ಲಿ ಹರತಾಳ ಘೋಷಿಸಿ ರಾಷ್ಟ್ರೀಯ ನಷ್ಟ ಅನುಭವಿಸಬೇಕಾಗಿದೆ.ಇದರಿಂದ ಜನ ತತ್ತರಿಸುವಂತಾಗುವುದು. ಪೂರ್ವ ನಿಶ್ಚಿತ ಕಾರ್ಯಕ್ರಮಗಳು ಮೊಟಕುಗೊಂಡು ನಷ್ಟ ಅನುಭವಿಸ ಬೇಕಾಗುವುದು. 

ಹರತಾಳದ ಬಳಿಕ ಸರ್ವಪಕ್ಷ ಸಭೆ ಸೇರಿದಾಗ ಹರತಾಳಕ್ಕೆ ವಿರೋಧ ವ್ಯಕ್ತಪಡಿಸುವ ರಾಜ ಕೀಯ ನಾಯಕರೇ ಮುಂದೆ ತನ್ನ ರಾಜಕೀಯ ಪಕ್ಷದ ಹರತಾಳವನ್ನು ಬೆಂಬಲಿಸುವುದು ದುರಂತವಾಗಿದೆ. ಬಂದ್‌ ಮಾಡಬಾರದೆಂಬುದಾಗಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಬಂದ್‌ ಹರತಾಳವಾಗಿ ಮಾರ್ಪಟ್ಟಿದೆ.

ಪೂರ್ಣ ಬಂದ್‌
ರಾಜಧಾನಿ ತಿರುವನಂತಪುರದಲ್ಲಿ ಆರ್‌.ಎಸ್‌.ಎಸ್‌.ಕಾರ್ಯವಾಹ ರಾಜೇಶ್‌ ಕೊಲೆಯನ್ನು ಖಂಡಿಸಿ ರವಿವಾರದಂದಿನ ಬಿಜೆಪಿ ಕರೆ ನೀಡಿದ ಹರತಾಳದಲ್ಲಿ ಕುಂಬಳೆ ಉಪ್ಪಳ ಮೊದಲಾದೆಡೆಗಳಲ್ಲಿ ಪೇಟೆ ಪೂರ್ಣ ಬಂದ್‌ ಆಗಿದ್ದು ಜನಸಂಚಾರ ವಿರಳವಾಗಿತ್ತು. ರಜಾ ದಿನವಾದ ಕಾರಣ ಸರಕಾರಿ ಅರೆ ಸರಕಾರಿ ಮತ್ತು ಬ್ಯಾಂಕ್‌, ಶಾಲೆಗಳಿಗೆ ತೆರಳುವವರಿಗೆ ಒಂದು ಬೋನಸ್‌ ರಜೆ ನಷ್ಟವಾಯಿತು. ಸರಕಾರಿ, ಖಾಸಗಿ ಬಸ್‌ ಸಂಚರಿಸದಿದ್ದರೂ ಕೆಲವು ಖಾಸಗಿ ವಾಹನಗಳು ಭಯದಿಂದ ವಿರಳವಾಗಿ ಸಂಚರಿಸಿದವು. ತಾಳ ತಪ್ಪುತ್ತಿರುವ ಹರತಾಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗುತ್ತಿದೆ. ವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಬಲವಾಗಿದೆ.ಆದರೆ ಯಾವ ಪಕ್ಷಗಳೂ ಹರತಾಳದಿಂದ ಹಿಂಜರಿಯಲು ಸಿದ್ಧವಿಲ್ಲ.

ಕೊಲೆಯನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ನಾಯಕರಾದ ಸುರೇಶ್‌ ಕುಮಾರ್‌ ಶೆಟ್ಟಿ, ಕೆ. ವಿನೋದನ್‌, ಎಚ್‌.ಸತ್ಯಶಂಕರ ಭಟ್‌, ಎಂ .ಶಂಕರ ಆಳ್ವ , ಬಾಬು ಗಟ್ಟಿ, ಶಂಕರ ಕುಂಟಂಗರಡ್ಕ, ಕೆ. ರಮೇಶ್‌ ಭಟ್‌, ಕೆ. ಸುಧಾಕರ ಕಾಮತ್‌, ದಿನೇಶ್‌ ಆರಿಕ್ಕಾಡಿ, ಹರೀಶ್‌ ಗಟ್ಟಿ, ಸುಜಿತ್‌ ರೈ, ಅನಿಲ್‌ ಶೆಟ್ಟಿ ಮುಂತಾದವರು ನೇತೃತ್ವ ನೀಡಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.