ರಕ್ತದ ಕ್ಯಾನ್ಸರ್: ಪುಟ್ಟ ಹಾರ್ದಿಕ್ಗೆ ನೆರವಿನ ಹಸ್ತ ಚಾಚುವಿರಾ?
Team Udayavani, Feb 11, 2020, 6:58 AM IST
ಕುಂಬಳೆ: ಪೈವಳಿಕೆ ಪಂಚಾಯತ್ನ ಬಾಯಾರು ಗ್ರಾಮದ ಕನಿಯಾಲ ನಿವಾಸಿ ಹರೀಶ್ ಕುಲಾಲ್-ರಂಜಿತಾ ದಂಪತಿ ಪುತ್ರ 4 ವರ್ಷದ ಬಾಲಕ ಹಾರ್ದಿಕ್ ಕುಲಾಲ್ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವನು. ಅಂಗನವಾಡಿಯಲ್ಲಿ ಕಲಿಯುವ ಈ ಪುಟ್ಟ ಪೋರನಿಗೆ ಆರಂಭದಲ್ಲಿ ಸಾಮಾನ್ಯ ಜ್ವರ ಕಾಣಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೇ ಈ ಮಗುವಿನ ಕಾಯಿಲೆಯು ದಿನದಿಂದ ದಿನಕ್ಕೆ ಉಲ್ಬಣಗೊಂಡು ಬಳಿಕ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದ ಕ್ಯಾನ್ಸರ್ ಈ ಮಗುವಿಗೆ ಬಾಧಿಸಿದ್ದು ಕಂಡು ಬಂದಿದೆ,ಈ ಈತನ ಚಿಕಿತ್ಸೆಗಾಗಿ ಸುಮಾರು 6ರಿಂದ 8 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಬೇಕೆಂಬುದಾಗಿ ವೈದ್ಯರು ತಿಳಿಸಿರುವರು.
ಕೂಲಿ ನಾಲಿ ಮಾಡುವ ಪುಟ್ಟ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹರೀಶ್ ಅವರಿಗೆ ದಿಕ್ಕು ತೋಚದಾಗಿದೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವಷ್ಟು ಸಾಮರ್ಥಯ ಅವರಿಂದ ಅಸಾಧ್ಯ. ಸಮಾಜವನ್ನು ಅವಲಂಬಿಸಿರುವ ಈ ಬಡ ಕುಟುಂಬಕ್ಕೆ ಉದಾರಿಗಳ ನೆರವು ಬೇಕಿದೆ.
ಸಮಾಜದ ಸಂಘ ಸಂಸ್ಥೆಗಳು, ದಾನಿಗಳು ಈ ಪುಟ್ಟ ಬಾಲಕನ ಮುಂದಿನ ಸುಂರ್ದ ಬದಕಿಗೆ ನೆರವಾಗಬೇಕಾಗಿದೆ. ಮುಂದಿನ 20 ದಿನಗಳಲ್ಲಿ 4 ಲ. ರೂ. ಅಗತ್ಯವಿದೆ. ನೆರವಾಗುವವರು ಬಾಲಕನ ತಾಯಿ ರಂಜಿತಾ ಅವರ ಈ ಖಾತೆ ನಂಬರಿಗೆ ಕಳುಹಿಸಬಹುದಾಗಿದೆ.ಎಸ್ಬಿ : 2002011011004324-ಐಎಫ್ಸಿ-ವಿಐಜೆಬಿ-0002002-ವಿಜಯ ಬ್ಯಾಂಕ್ ಬಾಯಾರು ಮುಳಿಗದ್ದೆ ಶಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ