ಚಾಂಡಿಮೂಲೆ ವನ ಪ್ರದೇಶಕ್ಕೆ ಪುಟಾಣಿಗಳ ಚಾರಣ


Team Udayavani, Aug 2, 2017, 6:45 AM IST

charana.jpg

ಬದಿಯಡ್ಕ: ಮಾನವ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುವುದೇ ಮೈಮನಗಳಲ್ಲಿ ನವ ಚೈತನ್ಯ ತುಂಬುವ ಚಾರಣಗಳು. ಪ್ರಕೃತಿಯ ಸೊಬಗನ್ನು ರಮಣೀಯತೆಯನ್ನು ಅನುಭವಿಸುವುದರ ಜತೆಯಲ್ಲಿ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು, ಮೈಮರೆತು ಸೌಂದರ್ಯವನ್ನು ತಿಳಿದುಕೊಳ್ಳಲು ಹಾಗೂ ಸೌಂದರ್ಯವನ್ನು ಸವಿಯಲು ಹಿರಿಯ-ಕಿರಿಯ ಮನಸುಗಳಿಗೆ ಅದೇನೋ ಉತ್ಸಾಹ. ಆದುದರಿಂದಲೇ ಶಾಲಾಮಕ್ಕಳು ನಡೆಸುವ ಸಣ್ಣಸಣ್ಣ ಚಾರಣಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ.

ಶಾಲೆಗಳಲ್ಲಿ ಕೈದೋಟಗಳನ್ನು ನಿರ್ಮಿಸಿ ಹಸಿರಾದ ಶಾಲಾ ಪರಿಸರ ಹಾಗೂ ಆರೋಗ್ಯವಂತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸೀಡ್‌ ಮಹತ್ವದ ಹೆಜ್ಜೆಯಾಗಿದೆ. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಸೀಡ್‌ ಕ್ಲಬ್‌ನ ಸದಸ್ಯರು ಅಧ್ಯಾಪಕರೊಂದಿಗೆ ಚಾಂಡಿಮೂಲೆ ವನ ಪ್ರದೇಶಕ್ಕೆ ಚಾರಣ ನಡೆಸಿದರು.

ಧಾರಾಕಾರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಹೆಚ್ಚಿದ ಬಳ್ಳಿಗಳನ್ನು ಕಡಿದು ದಾರಿಮಾಡುತ್ತಾ ವನಪ್ರದೇಶವನ್ನು ತಲುಪಿದರು. ಈ ಪ್ರದೇಶವು ಇಳಿಜಾರಿನಿಂದ ಕೂಡಿದ್ದು ಕಾಡು, ಬಳ್ಳಿಗಳನ್ನೇ ಆಧರಿಸಿ ಕೆಳಗಿಳಿಯುವ ಪ್ರಯತ್ನ ಮಾಡಿದರು. ಚಾರಣಿಗರಲ್ಲಿ ಪುಟಿಯುತ್ತಿದ್ದ ಉತ್ಸಾಹ ಅವರನ್ನು ಮುನ್ನಡೆಸಿತು. ಕಾಡಿನ ನಡುವೆ ಪಾರೆ ಕಲ್ಲುಗಳ ನಡುವೆ ಕಂಡುಬಂದ ಗುಹಾ ಕವಾಟವು ಮಕ್ಕಳಿಗೊಂದು ಕೌತುಕವಾಗಿತ್ತು. ಅಂತೆಯೇ ಗುಹೆಯ ಎದುರು ಭಾಗದಲ್ಲಿರುವ ವಿಶಾಲವಾದ ಕೊಳವೂ ಚಾರಣಿಗರನ್ನು ತನ್ನತ್ತ ಸೆಳೆಯಿತು.

ವನಪ್ರದೇಶದಲ್ಲಿರುವ ಮರ-ಬಳ್ಳಿಗಳು, ಔಷಧೀಯ ಸಸ್ಯಗಳು ಹಾಗೂ ಬಣ್ಣಬಣ್ಣದ ಚಿಟ್ಟೆಗಳ ಕುರಿತಾದ ಮಾಹಿತಿಯನ್ನು ಸೀಡ್‌ ಕೋರ್ಡಿನೇಟರ್‌ ಪಿ.ವಿ. ಪ್ರದೀಪ್‌ಕುಮಾರ್‌ ನೀಡಿದರು. ಮುಖ್ಯೋಪಾಧ್ಯಾಯರಾದ ಟಿ. ಗೋವಿಂದನ್‌ ನಂಬೂದಿರಿ, ಸ್ಟಾಫ್‌ ಸೆಕ್ರಟರಿ ಎಸ್‌.ಎಸ್‌. ರಾಜ್‌, ಅಧ್ಯಾಪಕರುಗಳಾದ ಆಶಾ ಕಿರಣ್‌, ಸಾವಿತ್ರಿ, ಚಿತ್ರಕಲಾ, ಟಿ.ವಿ. ರಮ್ಯಾ, ಸೀಡ್‌ ಕ್ಯಾಪ್ಟನ್‌ ಅನಸ್‌ ಮುಂತಾದವರು ಚಾರಣದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.