ಕುಂಬಳೆ: ಪ್ರಯಾಣಿಕರ ಸರ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ
Team Udayavani, May 19, 2022, 9:33 PM IST
ಕುಂಬಳೆ: ಬಸ್ ಪ್ರಯಾಣಿಕರ ಸರ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪಾನೂರು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈ ನಿವಾಸಿಗಳಾದ ಈಶ್ವರಿ (38) ಮತ್ತು ಮುರುಗೇಶ್ವರಿ (42) ಬಂಧಿತರು.
ಅವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಾಧು (73)ಅವರ ಬಳಿ ಕುಳಿತು ಸರ ಕಟ್ಟರ್ ಬಳಸಿ ಕುತ್ತಿಗೆಯಿಂದ ಚಿನ್ನದ ಸರ ತುಂಡರಿಸಿದಾಗ ಮಹಿಳೆ ಬೊಬ್ಬೆ ಹೊಡೆದಿದ್ದಾರೆ. ಕಳ್ಳರು ಬಸ್ ಇಳಿದು ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರು ವಿವಿಧೆಡೆಗಳಲ್ಲಿ ಸರ ಅಪಹರಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು ಇವರ ತಂಡದಲ್ಲಿ ಇನ್ನೂ ಹಲವರು ಒಳಪಟ್ಟಿರುವುದಾಗಿ ಶಂಕೆಯಲ್ಲಿ ತನಿಖೆ ನಡೆಯುತ್ತಿದೆ.