ಸಾಲಿಗ್ರಾಮ ಮೇಳದವರಿಂದ “ಚಂದ್ರಮುಖಿ ಸೂರ್ಯಸಖಿ ‘ ಪ್ರದರ್ಶನ

ಫೆ. 20: ಕಾಟುಕುಕ್ಕೆಯಲ್ಲಿ ಶ್ರಾವಣಿಯಿಂದ ಗುರುವಂದನೆ

Team Udayavani, Feb 17, 2020, 5:39 AM IST

16KSDE13

ಪೆರ್ಲ: ಗಡಿನಾಡಿನ ಗಡಿ ಕಾಟುಕುಕ್ಕೆ ಪರಿಸರ ಕಲಾ, ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳ ಊರಾಗಿದ್ದು, ಇಲ್ಲಿಂದುದಿಸಿದ ಬಹುಮುಖ ಪ್ರತಿಭೆ ಶ್ರಾವಣಿ ಕಾಟುಕುಕ್ಕೆ ಅವರಿಂದ ಫೆ. 20ರಂದು ಕಾಟುಕುಕ್ಕೆಯಲ್ಲಿ ನಡೆಯುವ ಸಾಲಿಗ್ರಮ ಮೇಳದ ಯಕ್ಷಗಾನದ ರಂಗಸ್ಥಳದಲ್ಲಿ ಗುರುವಂದನೆ ನಡೆಯಲಿದೆ. ಯಕ್ಷಗಾನ, ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ತನ್ನ ಏಳಿಗೆಗೆ ಆಶೀರ್ವದಿಸಿದ ಗುರುಗಳನ್ನು ಸಾರ್ವಜನಿಕವಾಗಿ ಗುರುವಂದನೆಯೊಂದಿಗೆ ಗೌರವಿಸುವುದು ಕಾರ್ಯಕ್ರಮದ ಧ್ಯೇಯ.

ಬಡಗುತಿಟ್ಟಿನ ಜನಪ್ರಿಯ ಮೇಳವಾದ ಸಾಲಿಗ್ರಾಮ ಮೇಳವು ಇದೇ ಮೊದಲಬಾರಿಗೆ ಕಾಟುಕುಕ್ಕೆಯಲ್ಲಿ ಪ್ರದರ್ಶನ ನೀಡುತ್ತಿದ್ದು, ಈ ವರ್ಷದ ಅತ್ಯಂತ ಜನಪ್ರಿಯ ಪ್ರಸಂಗವಾದ “ಚಂದ್ರಮುಖಿ -ಸೂರ್ಯಸಖಿ ‘ ಪ್ರಸಂಗವು ಫೆ. 20ರಂದು ರಾತ್ರಿ 9ರಿಂದ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರಾವಣಿಯ ಯಕ್ಷಗಾನ ಗುರುಗಳಾದ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್‌, ಭರತನಾಟ್ಯ ಶಿಕ್ಷಕಿ, ನಾಟ್ಯವಿದುಷಿ ಕಾವ್ಯಾಭಟ್‌, ಶಾಸ್ತ್ರೀಯ ಸಂಗೀತ ಶಿಕ್ಷಕಿ ಅನುರಾಧಾ ಭಟ್‌ ಅಡ್ಕಸ್ಥಳ ಅವರಿಗೆ ಗಣ್ಯ ಅತಿಥಿಗಳ ಸಮಕ್ಷಮ ಅಭಿವಂದನೆಗಳೊಂದಿಗೆ ಗುರುವಂದನೆ ಜರಗಲಿದೆ.

ಯಕ್ಷಗಾನ, ಭರತನಾಟ್ಯ, ಸಂಗೀತ ಕ್ಷೇತ್ರದ ಹೊರತಾಗಿ ಚಿತ್ರಕಲೆ, ಬರವಣಿಗೆ, ಭಜನಾ ಕ್ಷೇತ್ರದಲ್ಲೂ ಆಸಕ್ತಳಾಗಿ ಸೃಜನಶೀಲ ಚಟುವಟಿಕೆಗಳೊಂದಿಗೆ ಶೈಕ್ಷಣಿಕ ವಾಗಿಯೂ ಮುಂಚೂಣಿ ಯಲ್ಲಿರುವ ಶ್ರಾವಣಿ ಪ್ರಸ್ತುತ ವಿಟ್ಲದ ಜೇಸೀಸ್‌ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಕಾಟುಕುಕ್ಕೆ ಕ್ಷೇತ್ರ ಸಿಬಂದಿ ಶಿವಪ್ರಸಾದ್‌ ರಾವ್‌ ಮತ್ತು ವೀಣಾ ದಂಪತಿಯ ಪುತ್ರಿಯಾದ ಈಕೆ ಎಳವೆಯಲ್ಲೇ ಬಹುಮುಖೀ ಅಭಿರುಚಿಗಳ ಆಸಕ್ತಳು. ವಿದುಷಿ ಕಾವ್ಯಾಭಟ್‌ ಪೆರ್ಲ ಅವರ ಬಳಿ 8ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಭರತನಾಟ್ಯದ ಜೂನಿಯರ್‌ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಂದ ತೇರ್ಗಡೆಯಾಗಿ ಪ್ರಸ್ತುತ ಸೀನಿಯರ್‌ ಹಂತದ ಸಿದ್ಧತೆಯಲ್ಲಿದ್ದು, ಅನೇಕ ಕಡೆ ಪ್ರದರ್ಶನವಿತ್ತು ಪ್ರಶಂಸೆ ಪಡೆದಿದ್ದಾಳೆ.

ಯಕ್ಷಗಾನದಲ್ಲಿ ವಿಶೇಷ ಒಲವಿನ ಆಸಕ್ತಿಯನ್ನು ಹೊಂದಿ ಗುರು ಸಬ್ಬಣಕೋಡಿ ಅವರ ಶಿಷ್ಯೆಯಾಗಿ ಈಗಾಗಲೇ ಎಲ್ಲಾ ಬಗೆಯ ಪಾತ್ರ ನಿರ್ವಹಣೆಯಲ್ಲಿ ನೂರಾರು ಕಡೆ ಪ್ರತಿಭಾ ಪ್ರದರ್ಶನವಿತ್ತು ಗಮನ ಸೆಳೆದಿದ್ದಾಳೆ. ಖ್ಯಾತ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಈಕೆಗೆ ಚಿಕ್ಕಪ್ಪ. ಈ ಹಿನ್ನೆಲೆಯಿಂದ ಎಳವೆಯಲ್ಲೇ ಈಕೆಗೆ ಭಜನಾಸಕ್ತಿ. ಇದನ್ನರಿತು ಮನೆಯವರು ವಿದುಷಿ ಅನುರಾಧಾ ಭಟ್‌ ಅಡ್ಕಸ್ಥಳ ಅವರಲ್ಲಿ ಸಂಗೀತ ಶಿಕ್ಷಣ ಕೊಡಿಸುತ್ತಿದ್ದು ಅನೇಕ ಕಡೆ ಹಾಡುವ ಮೂಲಕ ಭರವಸೆ ಮೂಡಿಸಿದ್ದಾಳೆ. ಅಲ್ಲದೆ ಕಾಟುಕುಕ್ಕೆ ಬಾಲಭಜನಾ ಸಂಗದ ಸದಸ್ಯೆಯಾಗಿಯೂ ಮುಂಚೂಣಿಯಲ್ಲಿದ್ದಾಳೆ. ಜತೆಗೆ ಚಿತ್ರಕಲೆ, ಪ್ರಬಂಧ ರಚನೆಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಈಕೆ ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಅಗ್ರಸಾಲಿನ ವಿದ್ಯಾರ್ಥಿನಿ.
ಬಹುಮುಖೀ ಪ್ರತಿಭೆಯ ಶ್ರಾವಣಿಗೆ ಯಕ್ಷಗಾನದಲ್ಲಿ ಸ್ವತ ಸಿದ್ಧಿಯ ಪ್ರತಿಭೆ ಇದೆ. ಪುಂಡುವೇಷ, ಕಿರೀಟ ವೇಷ, ಸ್ತ್ರೀ ವೇಷ ಸಹಿತ ಎಲ್ಲಾ ವೇಷಗಳನ್ನು ಮಾಡುತ್ತಿರುವ ಈಕೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾರ್ಥಿನಿ, ಕಲಾವಿದೆ. ಈಗಾಗಲೇ ಭರವಸೆ ಮೂಡಿಸಿರುವ ಉಜ್ವಲ ಭವಿಷ್ಯದ ಈ ಬಾಲ ಕಲಾವಿದೆ ತನ್ನ ಗುರುಗಳಿಗೆ ಸಲ್ಲಿಸುವ ಗುರುವಂದನೆಯ ಬಳಿಕ, ಗಡಿನಾಡಿನ ಗಡಿಯಲ್ಲಿರುವ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ಮೊದಲ ಬಾರಿಗೆ ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಈ ವರ್ಷದ ಜನಪ್ರಿಯ ಆಖ್ಯಾನ “ಚಂದ್ರಮುಖಿ -ಸೂರ್ಯಸಖಿ ‘ ಪ್ರದರ್ಶನಗೊಳ್ಳಲಿದೆ.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.