ಬಿಜೆಪಿ ಕಾರ್ಯಕರ್ತರ ಸಂಭ್ರಮದ ವಿಜಯೋತ್ಸವ

ಲೋಕಸಭೆ ಚುನಾವಣೆಯಲ್ಲಿ ಬಹುಮತ: ಮೋದಿ ಟೀಂ ಪದಗ್ರಹಣ

Team Udayavani, Jun 1, 2019, 6:00 AM IST

31-KBL-1

ಉಪ್ಪಳದಲ್ಲಿ ವಿಜಯೋತ್ಸವ ಮೆರವಣಿಗೆ, ಪೆರ್ಮುದೆಯಲ್ಲಿ ಹರ್ಷಾಚರಣೆ

ಕುಂಬಳೆ: 17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ದೇಶದಾದ್ಯಂತ ಬಿ.ಜೆ.ಪಿ. 303 ಲೋಕಸಭಾ ಸದಸ್ಯರ ಸ್ಪಷ್ಟ ಬಹುಮತದೊಂದಿಗೆ ಗೆದ್ದು ದ್ವಿತೀಯ ಬಾರಿಗೆ ಗದ್ದುಗೆ ಏರಿದ ನರೇಂದ್ರಮೋದಿಯವರ ಸಚಿವರ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುವ ವಿಜಯೋತ್ಸವವು ಮೇ 30ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಬಿ.ಜೆ.ಪಿ. ವತಿಯಿಂದ ಅದ್ದೂರಿಯಾಗಿ ನಡೆಯಿತು.

ಕುಂಬಳೆಯಲ್ಲಿ ಬದಿಯಡ್ಕ ರಸ್ತೆ ಪಕ್ಕದಲ್ಲಿ ಎಲ್.ಸಿ.ಡಿ.ಪರದೆ ಅಳವಡಿಸಿ ನರೇಂದ್ರ ಮೋದಿ ತಂಡದ ಪಟ್ಟಾಭಿಷೇಕದ ದೃಶ್ಯವನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಲಾಯಿತು.ಅಲ್ಲದೆ ನೆರೆದ ಎಲ್ಲರಿಗೂ ಸಿಹಿತಿಂಡಿ ಮತ್ತು ಚಹಾ ವಿತರಿಸಲಾಯಿತು.

ಪೆರ್ಲ, ಮಂಜೇಶ್ವರ, ಉಪ್ಪಳ, ಬಾಡೂರುಪದವು, ಸೀತಾಂಗೋಳಿ, ಮಜಿರ್‌ಪ್ಪಳ್ಳ, ವರ್ಕಾಡಿ, ಮೀಂಜ ಮುಂತಾದೆಡೆಗಳಲ್ಲಿ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪೈವಳಿಕೆ ಪಂಚಾಯತ್‌ನ ಪೆರ್ಮುದೆ, ಕುರುಡಪದವು, ಚಿಪ್ಪಾರುಪದವು, ಪೈವಳಿಕೆ ನಗರ, ಕನಿಯಾಲ, ಚಿಪ್ಪಾರು, ಸಜಂಕಿಲ ಮೊದಲಾದೆಡೆಗಳಲ್ಲಿ ವಿಜಯೋ ತ್ಸವವನ್ನು ಆಚರಿಸಲಾಯಿತು.ಕಾರ್ಯ ಕ್ರಮದ ಅಂಗವಾಗಿ ಪಕ್ಷದ ನೂರಾರು ಕಾರ್ಯಕರ್ತರು ಬೈಕ್‌, ಕಾರು ಮೊದಲಾದ ವಾಹನಗಳ ಮೂಲಕ ಮತ್ತು ಪಾದಯಾತ್ರೆಯ ಮೂಲಕ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿದರು. ಅಲ್ಲಲ್ಲಿ ಸಿಡಿಮದ್ದು ಪ್ರದರ್ಶಿಸಲಾಯಿತು. ಹೆಚ್ಚಿನೆಡೆಗಳಲ್ಲಿ ಪಾಯಸ, ಸಿಹಿತಿಂಡಿ, ಪಾನೀಯ ವಿತರಿಸಲಾಯಿತು.

ಬ್ಯಾಂಡ್‌ಮೇಳಕ್ಕೆ ಬಿಜೆಪಿ ಧ್ವಜ ಹಿಡಿದು ಪಕ್ಷದ ಕಾರ್ಯಕರ್ತರು ಮೋದಿ ಮೋದಿ ಬಿಜೆಪಿ ಬಿಜೆಪಿ ಎಂಬುದಾಗಿ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು. ಕೆಲವು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನು ಸಲ್ಲಿಸುವ ಬೃಹತ್‌ ಫಲಕ ಸ್ಥಾಪಿಸಲಾಯಿತು.

ಪೊಲೀಸರ ಪಕ್ಷಪಾತ ನಿಲುವು
ಪ್ರಧಾನಿ ಪದಗ್ರಹಣದಂದು ಬಿ.ಜೆ.ಪಿ. ವಿಜಯೋತ್ಸವಕ್ಕೆ ಉನ್ನತ ಪೊಲೀಸರ ಆದೇಶದಂತೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದೆ ವಿಜಯೋತ್ಸವ ಸಾಂಗವಾಗಿ ನಡೆಯಿತು. ಆಯಾ ಪೊಲೀಸ್‌ ಠಾಣೆಗೆ ಸ್ಥಳೀಯ ಬಿ.ಜೆ..ಪಿ. ನಾಯಕರನ್ನು ಆಮಂತ್ರಿಸಿ ಸಭೆ ನಡೆಸಿ ವಾಹನ ಮೆರವಣಿಗೆ ನಡೆಸಬಾರದು, ಸಿಡಿಮದ್ದು ಸಿಡಿಸಬಾರದು, ಘೋಷ‌ಣೆ ಕೂಗಬಾರದು ಇದರಿಂದ ಗಲಭೆಗೆ ಸಾಧ್ಯತೆ ಇದೆ ಎಂಬುದಾಗಿ ಭಯದ ಭವಿಷ್ಯ ನುಡಿದರು. ಆದರೆ ಪೊಲೀಸರ ನಿಲುವನ್ನು ಒಪ್ಪದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಇದನ್ನು ನಿರ್ಲಕ್ಷಿಸಿ ಸಮಾಧಾನದಿಂದ ವಿಜಯೋತ್ಸವ ಆಚರಿಸಿದರು. ಇತರ ಪಕ್ಷದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರದ ಪೊಲೀಸರು ಬಿಜೆಪಿ ಕಾರ್ಯಕ್ರಮಕ್ಕೆ ಹೇರಿ ವಿಜಯೋತ್ಸವವನ್ನು ತಡೆಯಲು ಶ್ರಮಿಸಿದ ರಾಜ್ಯ ಆಡಳಿತ ಪಕ್ಷದ ಏಜಂಟರಾಗಿ ವರ್ತಿಸಿದ ಪೊಲೀಸರ ನಿಲುವನ್ನು ಬಿಜೆಪಿ ಖಂಡಿಸಿದೆ.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.