ಕಾಂಗ್ರೆಸ್ ನೆಲ ಕಚ್ಚುವುದು ಖಚಿತ : ಬಿನೋಯ್ ವಿಶ್ವಂ
ಎ.ಕೆ.ಆ್ಯಂಟಣಿಯಂತ ಹಿರಿಯ ಮುಖಂಡರು ಎಡರಂಗವನ್ನು ವಿರೋಧಿಸುತ್ತಲೇ ಬಂದಿದ್ದಾರೆ
Team Udayavani, Mar 31, 2021, 9:50 AM IST
ಕಾಸರಗೋಡು: ಮಾಜಿ ಕೇಂದ್ರ ಸಚಿವ, ಹಿರಿಯ ಮುಖಂಡರಾದ ಎ.ಕೆ.ಆ್ಯಂಟನಿ ಸಹಿತ ಕಾಂಗ್ರೆಸ್ ಮುಖಂಡರು ಬಿಜೆಪಿ ಬಗ್ಗೆ ಮೃದು ಧೋರಣೆಯಿಂದಾಗಿ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವುದು ಖಚಿತ ಎಂದು ಸಿ.ಪಿ.ಐ. ಕೇಂದ್ರ ಸೆಕ್ರೆಟರಿಯೇಟ್ ಸದಸ್ಯ ಬಿನೋಯ್ ವಿಶ್ವಂ ಹೇಳಿದರು.
ಅವರು ಕಾಸರಗೋಡು ಪ್ರಸ್ ಕ್ಲಬ್ನಲ್ಲಿ ಆಯೋಜಿಸಿದ ಪಂಚಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ನೆಹರೂ ಹಾದಿಯನ್ನು ತೊರೆದು ಬಿಜೆಪಿ ಹಾದಿಯಲ್ಲಿ ಸಾಗಲು ಕಾಂಗ್ರೆಸ್ನ ಕೆಲವು ನೇತಾರರು ಪ್ರಯತ್ನಿಸುತ್ತಿದ್ದಾರೆ.
ಎ.ಕೆ.ಆ್ಯಂಟನಿಯಂತ ಹಿರಿಯ ಮುಖಂಡರು ಎಡರಂಗವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇವರೆಲ್ಲ ಗಾಂಧಿ, ನೆಹರೂ ಮೊದಲಾದವರನ್ನು ಮರೆತು ಕಾರ್ಯಾಚರಿಸುತ್ತಿದ್ದಾರೆ. ಇದು ನಿಸ್ವಾರ್ಥ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸು ಮುರಿಸನ್ನುಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಲ್ ಉಪಸ್ಥಿತರಿದ್ದರು. ಪ್ರಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶೀಂ ಅಧ್ಯಕ್ಷತೆ ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ