ಕುಂಡಕೊಳಕೆ ಇಗರ್ಜಿಯಲ್ಲಿ ಕಿಡಿಗೇಡಿಗಳ‌ ದಾಂಧಲೆ: ಶೀಘ್ರ ಕ್ರಮ


Team Udayavani, Aug 22, 2019, 5:00 AM IST

g-12

ಕಾಸರಗೋಡು: ಡಿ.ಜಿ.ಪಿ. ಲೋಕ್‌ನಾಥ್‌ ಬೆಹ್ರಾ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೂರು ಅದಾಲತ್‌ ನಡೆಸಿದರು. ಒಟ್ಟು 81 ದೂರುಗಳನ್ನು ನೋಂದಣಿ ಮಾಡಲಾಗಿತ್ತು. 64 ದೂರುಗಳನ್ನು ಪರಿಶೀಲಿಸ ಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್, ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಬಿ. ಪ್ರಷೋಬ್‌, ಡಿ.ವೈ.ಎಸ್‌.ಪಿ. ಗಳಾದ ಪಿ.ಕೆ. ಸುಧಾಕರನ್‌, ಪಿ. ಬಾಲಕೃಷ್ಣನ್‌ ನಾಯರ್‌, ಎಂ. ಸುನಿಲ್‌ ಕುಮಾರ್‌, ಎಂ. ಅಸೀನಾರ್‌, ಜೈಸನ್‌ ಅಬ್ರಾಹಂ, ಎಂ. ಪ್ರದೀಪ್‌ ಕುಮಾರ್‌, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಅದಾಲತ್‌ನಲ್ಲಿ ಉಪಸ್ಥಿತರಿದ್ದರು.

ಇಗರ್ಜಿ ಪ್ರಕರಣ
ಮಂಜೇಶ್ವರದ ಕುಂಡಕೊಳಕೆಯಲ್ಲಿ ಇಗರ್ಜಿ ಯೊಂದಕ್ಕೆ ಕಿಡಿಗೇಡಿಗಳು ನಡೆಸಿದ ದಾಂಧಲೆ ಪ್ರಕರಣದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳು ವುದಾಗಿ ಡಿ.ಜಿ.ಪಿ. ಭರವಸೆ ನೀಡಿದರು. ಈ ಸಂಬಂಧ ಇಗರ್ಜಿಯ ಧರ್ಮಗುರು ರೆ|ಫಾ| ವಿನ್ಸಂಟ್‌ ಅವರ ನೇತೃತ್ವದ ತಂಡ ದೂರು ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ವೇಳೆ ಡಿ.ಜಿ.ಪಿ. ಈ ಆಶ್ವಾಸನೆ ನೀಡಿದರು.

ನಿಧಿ ಮಂಜೂರಾಗುತ್ತಿಲ್ಲ: ದೂರು
ವಿದ್ಯಾರ್ಥಿ ಪೊಲೀಸ್‌ ಕೆಡೆಟ್‌ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಅನುದಾನಿತ ಶಾಲೆಗಳಿಗೆ ಈ ಸಂಬಂಧ ನಿಧಿ ಮಂಜೂರು ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಪೆರಡಾಲ ನವಜೀವನ ಪ್ರೌಢಶಾಲೆಯ ಪದಾಧಿಕಾರಿಗಳು ದೂರು ಸಲ್ಲಿಸಿದರು.

ಠಾಣೆಗೆ ನೂತನ ಕಟ್ಟಡಕ್ಕೆ ಮನವಿ
ಬದಿಯಡ್ಕ ಪೊಲೀಸ್‌ ಠಾಣೆ 45 ವರ್ಷಗಳಷ್ಟು ಹಳತಾಗಿದ್ದು, ಇದನ್ನು ಕೆಡವಿ ನೂತನ ಜನಮೈತ್ರಿ, ವಿದ್ಯಾರ್ಥಿ ಪೊಲೀಸ್‌, ಜನಜಾಗೃತಿ ಇತ್ಯಾದಿ ಸೌಲಭ್ಯಗಳ ಸಹಿತದ ನೂತನ ಕಟ್ಟಡ ನಿರ್ಮಾಣ ನಡೆಸುವಂತೆ ನೀರ್ಚಾಲು ನಿವಾಸಿ, ಸಾರ್ವಜನಿಕ ಕಾರ್ಯಕರ್ತ ಎಂ.ಎಚ್‌. ಜನಾರ್ದನ ಮನವಿ ಸಲ್ಲಿಸಿದರು. ಈ ಸಂಬಂಧ ಕ್ರಮಕೈಗೊಳ್ಳುವಂತೆ ಎ.ಎಸ್‌.ಪಿ.ಗೆ ಡಿ.ಜಿ.ಪಿ. ಹೊಣೆ ನೀಡಿದರು.

ಮಸೀದಿಗೆ ಬೆಂಕಿಯಿಕ್ಕಿದ ಪ್ರಕರಣ
ನೀಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಏರಿಕುಳಂ ಮಸೀದಿಗೆ ಜ.23ರಂದು ಬೆಂಕಿಯಿಕ್ಕಿದ ಪ್ರಕರಣದಲ್ಲಿ ಆರೋಪಿಗಳನ್ನು ಇನ್ನೂ ಪತ್ತೆ ಮಾಡದಿರುವ ಪ್ರಕರಣದಲ್ಲಿ ಕಾಂಞಂಗಾಡ್‌ ಸಂಯುಕ್ತ ಜಮಾ ಅತ್‌ ಜನರಲ್‌ ಸೆಕ್ರೆಟರಿ ಬಶೀರ್‌ ವೆಳ್ಳಿಕೋತ್‌ ಅವರ ನೇತೃತ್ವದ ತಂಡ ದೂರು ಸಲ್ಲಿಸಿದೆ. ಜಿಲ್ಲಾ ಅಪರಾಧ ಪತ್ತೆದಳದ ಡಿ.ವೈ.ಎಸ್‌.ಪಿ. ಪರಿಶೀಲನೆ ನಡೆಸುವಂತೆ ಡಿ.ಜಿ.ಪಿ. ಆದೇಶಿಸಿದರು.

ಪೈವಳಿಕೆ ಅಟ್ಟೆಗೋಳಿಯಲ್ಲಿ ಪಂಚಾಯತ್‌ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ನಡೆಸಿದ ಪ್ರಕರಣದಲ್ಲಿ ಸಂಬಂಧಪಟ್ಟವರು ಕ್ರಮಕೈಗೊಂಡಿಲ್ಲ ಎಂಬ ಆರೋಪದಲ್ಲಿ ಸ್ಥಳೀಯ ನಿವಾಸಿ ಸುಲೈಖಾ ಮತ್ತು ಪುತ್ರ ಪಿ.ಜಿ. ಮುಸ್ತಫಾ ದೂರು ಸಲ್ಲಿಸಿದರು. ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾದ ಬೇಲಿ ತೆರವುಗೊಳಿಸುವ ಕ್ರಮ ಕೈಗೊಳ್ಳುವಂತೆ ಡಿ.ಜಿ.ಪಿ. ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.

ಸೂರ್ಲಿನಲ್ಲಿ ಪೊಲೀಸ್‌ ಭದ್ರತೆ ಬೇಕು
ರಿಯಾಜ್‌ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಸೂರ್ಲು ವಲಯದಲ್ಲಿ ತಲೆದೋರಿರುವ ಸೂಕ್ಷ್ಮ ವಾತಾವರಣದ ಹಿನ್ನೆಲೆಯಲ್ಲಿ ಪೊಲೀಸರು ಸಕ್ರಿಯವಾಗಿ ರಂಗಕ್ಕಿಳಿಯಬೇಕು. ಇಲ್ಲವಾದಲ್ಲಿ ನಿಜವಾದ ಆರೋಪಿಗಳು ತಲೆಮರೆಸಿ ಕೊಳ್ಳುವ ಭೀತಿಯಿದೆ ಎಂದು ಚೂರಿ ಓಲ್ಡ್‌ ಜುಮಾ ಮಸ್ಜಿದ್‌ ಸಮಿತಿ ಪದಾಧಿಕಾರಿಗಳು ದೂರು ಸಲ್ಲಿಸಿದರು. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಎ.ಎಸ್‌.ಪಿ. ಮತ್ತು ಸಿ.ಐ.ಅವರಿಗೆ ಡಿ.ಜಿ.ಪಿ. ಹೊಣೆ ವಹಿಸಿದರು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.