ಕುಡಿಯುವ ನೀರಿನ ಬವಣೆ: ಬಾವಿ ರೀಚಾರ್ಜಿಂಗ್‌ ಯೋಜನೆ ನನೆಗುದಿಗೆ


Team Udayavani, May 5, 2018, 7:25 AM IST

03ksde1.jpg

ಕಾಸರಗೋಡು: ಕಳೆದ ಕೆಲವು ವರ್ಷಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡು ಅನುಷ್ಠಾನಕ್ಕೆ ತಂದ ಬಾವಿ ರೀಚಾರ್ಜಿಂಗ್‌ ಯೋಜನೆಯು ಇದೀಗ ನನೆಗುದಿಗೆ ಬಿದ್ದಿದೆ.

ಫಲಾನುಭವಿಗಳ ಪಟ್ಟಿಯನ್ನು  ಕಾರ್ಯದಕ್ಷತೆಯಿಂದ ಸಲ್ಲಿಸುವು ದಾಗಲಿ,ಯೋಜನೆಯನ್ನು ಯಶಸ್ವಿಗೊಳಿಸಬೇಕೆಂಬ ಸಂಕಲ್ಪವಾಗಲಿ ಗ್ರಾಮ ಪಂಚಾಯತ್‌ಗಳಿಗೆ ಇದ್ದಂತೆ ತೋರುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ. ಜಿಲ್ಲಾ ಪಂಚಾಯತ್‌ನ ಕಳೆದ ಮುಂಗಡಪತ್ರದಲ್ಲಿ  ಯೋಜನೆಯ ಯಶಸ್ಸಿಗಾಗಿ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಇಷ್ಟೊಂದು ಮೊತ್ತ ಗ್ರಾಮ ಪಂಚಾಯತ್‌ಗಳಿಗೆ ಲಭಿಸಿದೆಯೋ ಎಂಬ ಪ್ರಶ್ನೆ ವಾರ್ಡ್‌ ಸಭೆಗಳಲ್ಲಿ  ಕೇಳಿಬಂದಿತ್ತು.

ಜಿಲ್ಲಾ ಪಂಚಾಯತ್‌ ಮೀಸಲಿಟ್ಟ ಅನುದಾನವನ್ನು ಮೊದಲ ಹಂತ ಎಂಬ ನೆಲೆಯಲ್ಲಿ ಹತ್ತು ಗ್ರಾಮ ಪಂಚಾಯತ್‌ಗಳಿಗೆ ಹಂಚಲಾಗಿತ್ತು. 5 ಲಕ್ಷ ರೂ.ನಿಂದ 20 ಲಕ್ಷ  ರೂ. ವರೆಗೆ ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗಿತ್ತು. ಆದರೆ ಹಣ ವಿನಿಯೋಗಿಸಿರುವುದರ ಕುರಿತು ನಿಖರವಾದ ಪಟ್ಟಿ  ಹೆಚ್ಚಿನ ಪಂಚಾಯತ್‌ಗಳಲಿಲ್ಲ.

ಗ್ರಾಮಸಭೆ ನಡೆಸಿ ತಯಾರಿಸಿದ ಫಲಾನುಭವಿಗಳ ಪಟ್ಟಿ ಮತ್ತು ಅದರ ಪ್ರಕಾರ ಲಭಿಸಿದ ಅರ್ಜಿಗಳನ್ನು ಪರಿಗಣಿಸಿ ಫಲಾನುಭವಿಗಳಿಗೆ 8 ಸಾವಿರ ರೂ. ತನಕ ನೀಡಲಾಗಿದೆ. ಮೊದಲ ಹಂತದ ಯೋಜನೆಯು ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿರುವುದರಿಂದ ಈ ಬಾರಿಯ ಮುಂಗಡಪತ್ರದಲ್ಲಿ  ಜಿಲ್ಲಾ  ಪಂಚಾಯತ್‌ ಬಾವಿ ರಿಚಾರ್ಜಿಂಗ್‌ ಯೋಜನೆಗೆ ಕಡಿಮೆ ಮೊತ್ತವನ್ನು ಮೀಸಲಿರಿಸಿದೆ.

ಏನಿದು ಬಾವಿ ರೀಚಾರ್ಜಿಂಗ್‌ 
ಮನೆಯ ಟೆರೆಸ್‌ ಮೇಲೆ ಬೀಳುವ ಮಳೆನೀರನ್ನು ಪೋಲು ಮಾಡದೆ ಬಾವಿಗೆ ತಲುಪಿಸುವ ಯೋಜನೆ ಇದಾಗಿದೆ. ಟೆರೆಸ್‌ನಲ್ಲಿ ಅಳವಡಿಸಿದ ಪೈಪ್‌ಗ್ಳೊಂದಿಗೆ ಇತರ ಪೈಪ್‌ಗ್‌ಳನ್ನು ಜೋಡಿಸಲಾಗುವುದು. ಬಾವಿಯ ಹತ್ತಿರ ಬ್ಯಾರಲ್‌ ಇಟ್ಟು ಪೈಪ್‌ನಿಂದ ಬರುವ ನೀರನ್ನು  ಬ್ಯಾರಲ್‌ನಲ್ಲಿ  ಸಂಗ್ರಹಿಸಲಾಗುವುದು. ಸಾವಿರ ಚದರಡಿ ಮನೆಗಳಲ್ಲಿ  200 ಲೀಟರ್‌ನ ಬ್ಯಾರಲ್‌ ಸ್ಥಾಪಿಸಬೇಕು. ಬ್ಯಾರಲ್‌ನ ಕೆಳಭಾಗದಲ್ಲಿ ನೀರು ಬಾವಿಗೆ ತಲುಪಿಸಲಿರುವ ದ್ವಾರ ಇರಬೇಕು. ಬ್ಯಾರಲ್‌ ಅಡಿಯಲ್ಲಿ  20 ಸೆಂಟಿ ಮೀಟರ್‌ ಎತ್ತರದಲ್ಲಿ ಸಣ್ಣ  ಉರುಳುಕಲ್ಲುಗಳನ್ನು ಕ್ರಮಬದ್ಧವಾಗಿ ಇಡಬೇಕು. ಬಳಿಕ 20 ಸೆಂಟಿ ಮೀಟರ್‌ನಷ್ಟು  ಹೊಯ್ಗೆ  ಸೋಸಿ ಸಿಗುವ ಕಲ್ಲುಗಳನ್ನು ಇಡಬೇಕು. 20 ಸೆಂಟಿ ಮೀಟರ್‌ನಲ್ಲಿ  ಗೆರಟೆಯ ಮಸಿ (ಇದ್ದಲು) ಹಾಕಬೇಕು. ಕೊನೆಗೆ 10 ಸೆಂಟಿ ಮೀಟರ್‌ ಹೊಯ್ಗೆ, ಜಲ್ಲಿಕಲ್ಲುಗಳನ್ನು ಹಾಕಬೇಕು. 

ಈ ರೀತಿ ಪ್ರತ್ಯೇಕ ಸಜ್ಜೀಕರಣ ಗಳೊಂದಿಗೆ ತಯಾರಿಸಿದ ಬ್ಯಾರಲ್‌ನ ಕೆಳಗಿಳಿಯುವ ನೀರು ಶುದ್ಧೀಕರಣಗೊಳ್ಳುತ್ತದೆ. ಸಾವಿರ ಚದರ ಅಡಿ ವಿಸ್ತೀರ್ಣದ ಮನೆಯಿಂದ ಈ ರೀತಿ ಮಳೆನೀರು ಸಂಗ್ರಹಿಸಿದರೆ ಒಂದು ಮಳೆಗಾಲದಲ್ಲಿ  2 ಲಕ್ಷ  ಲೀಟರ್‌ ನೀರು ಬಾವಿಗೆ ತಲುಪಲಿದೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ಪಂಚಾಯತ್‌ಗಳಿಗೆ  ಬೇಕು ಇಚ್ಛಾಶಕ್ತಿ 
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 38 ಗ್ರಾಮ ಪಂಚಾಯತ್‌ಗಳಲ್ಲೂ ಯೋಜನೆಯನ್ನು ಜಾರಿಗೊಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಪಂಚಾಯತ್‌ಗಳಿಗೆ ಈ ಕುರಿತು ಅಸಡ್ಡೆ ಎದ್ದುಕಾಣುತ್ತಿದೆ ಎಂಬ ಆರೋಪವೂ ಇದೆ. ಈ ಮಧ್ಯೆ ಮಂಜೇಶ್ವರ, ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್‌ ಪಂಚಾಯತ್‌ಗಳ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ  ಮಳೆನೀರು ಸಂಗ್ರಹಿಸಿ ಬಾವಿಗೆ ರಿಚಾರ್ಜಿಂಗ್‌ ಮಾಡುವ ಯೋಜನೆಯನ್ನು  ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಯಾವೆಲ್ಲಾ ಪಂಚಾಯತ್‌ಗಳು ಯೋಜನೆಯನ್ನು  ಅನುಷ್ಠಾನಕ್ಕೆ ತರುತ್ತಿವೆ ಎಂಬುದು ಮುಂದಿನ ದಿನಗಳಲ್ಲಿ  ಗೊತ್ತಾಗಲಿದೆ.

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.