ಮಲೆನಾಡು ರಸ್ತೆ ಚಳವಳಿ: ಬೆಳ್ಳೂರು ಪಂಚಾಯತ್ ಸಮಿತಿ ರಚನೆ
Team Udayavani, Feb 26, 2017, 3:46 PM IST
ಬದಿಯಡ್ಕ: ಮಲೆನಾಡ ಮಾರ್ಗಗಳ ಶೋಚನಿಯಾವಸ್ಥೆ ಯನ್ನು ಕೊನೆಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಬದಿಯಡ್ಕ
ಪಿ. ಡಬುಡಿ ಕಾರ್ಯಾಲಯದ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 14ನೇ ದಿನ ತಲುಪಿರುತ್ತದೆ ಈ ಮುಷ್ಕರವನ್ನು ಬೆಂಬಲಿಸಲು ಬೆಳ್ಳೂರು ಪಂಚಾಯತ್ ಸಮಿತಿಯನ್ನು ರೂಪಿಕರಿಸಲು ತಿರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ, ಧಾರ್ಮಿಕ ಮುಂದಾಳು ಕಲ್ಲಗ ಚಂದ್ರಶೇಖರ ರಾವ್ ಅಧ್ಯಕ್ಷತೆ
ವಹಿಸಿ ಮಾತನಾಡಿ, ಮಲೆನಾಡು ಪ್ರದೇಶವನ್ನು ಅವಗಣಿ ಸುವ ಸರಕಾರಗಳ ಕ್ರಮ ಇನ್ನು ಮುಂದುವರಿದು ಜನರ ತಾಳ್ಮೆಯನ್ನು ಇನ್ನು ಪರಿಕ್ಷಿಸಲು ಆಧಿಕಾರಿಗಳು ತೀರ್ಮಾನಿಸಿದಲ್ಲಿ ಈಗ ಸಮಾಧನವಾಗಿ ನಡೆಯುವ ಮುಷ್ಕರವು ಒಂದು ಕಲಾಪವಾಗಿ ಬದಲಾಗುವ ಸಾಧ್ಯತೆ ಇದೆ. ಹಾಗೇನಾದರು ಸಂಭವಿಸಿದ ಅದರ ಪೂರ್ಣ ಜವಾಬ್ದಾರರು ಆಧಿಕಾರಿಗಳೆ ಆಗಿರುತ್ತಾರೆ ಎಂದು ಹೇಳಿದರು. ಸಭೆಯಲ್ಲಿ ದಾಮೋದರ ಬಲ್ಲಾಳ್, ಚಳವಳಿ ಸಮಿತಿಯ ಅಧ್ಯಕ್ಷ ಮಾಹಿನ್ ಕೇಳ್ಳೋಟ್, ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಎಸ್.ಎನ್.ಮಯ್ಯ, ಆಶ್ರಫ್ ಮುನಿಯೂರು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಮಟ್ಟದಲ್ಲಿ ನೂತನ ಸಮಿತಿಯನ್ನು ರೂಪಿಸಲು ತೀರ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ