ಭಾರಿ ಮಳೆ: ಕಾಸರಗೋಡು ಜಿಲ್ಲೆ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ
Team Udayavani, Jul 22, 2019, 9:25 AM IST
ಬದಿಯಡ್ಕ: ಕಳೆದ ಹಲವು ದಿನಗಳಿಂದ ಕಾಸರಗೋಡು ಜಿಲ್ಲೆಯಾಧ್ಯಂತ ಸುರಿಯುತ್ತಿದ್ದಭಾರಿ ಮಳೆ ಇಂದು ಕೂಡಾ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈ ಹಿಂದೆ ಘೋಷಣೆಯಾಗಿದ್ದ ರೆಡ್ ಅಲರ್ಟ್ ಹಿಂಪಡೆದು ಈಗ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ರವಿವಾರ ರಾತ್ರಿ ರವಿವಾರ ಮಳೆಯ ಪ್ರಮಾಣ ಜಾಸ್ತಿಯಾದ ಕಾರಣ ಇಂದು ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ತಿಳಿಸಿದ್ದಾರೆ.