ಗುಂಪಿನಿಂದ ಥಳಿತ: ಯುವಕ ಸಾವು
Team Udayavani, Jan 24, 2021, 2:17 AM IST
ಕಾಸರಗೋಡು: ನಗರದ ಕರಂದಕ್ಕಾಡಿನಲ್ಲಿ ಶನಿವಾರ ಮಧ್ಯಾಹ್ನ ಗುಂಪೊಂದರಿಂದ ಥಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಯುವಕ ದೇಳಿ ನಿವಾಸಿ, ಮೂಲತಃ ಚೆಮ್ನಾಡ್ ಚಳಿಯಂಗೋಡುವಿನ ರಫೀಕ್ (49) ಅವರು ಮೃತಪಟ್ಟಿದ್ದಾರೆ.
ಕರಂದಕ್ಕಾಡು ಅಶ್ವಿನಿ ನಗರದ ಖಾಸಗಿ ಆಸ್ಪತ್ರೆಯೊಂದರ ಸಮೀಪ ಈ ಘಟನೆ ನಡೆದಿದೆ. ಥಳಿತದಿಂದ ಗಂಭೀರ ಗಾಯಗೊಂಡಿದ್ದ ರಫೀಕ್ ಅವರನ್ನು ತತ್ಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೆ ಅವರು ಮೃತಪಟ್ಟಿದ್ದರು. ಮಹಿಳೆಯೊಬ್ಬರು ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು.
ಈ ಸಮಯದಲ್ಲಿ ರಫೀಕ್ ಆ ಮಹಿಳೆಗೆ ಚುಡಾಯಿಸಿ ಕಿರುಕುಳ ನೀಡಲು ಯತ್ನಿಸಿದ್ದ. ಈ ವಿಷಯವನ್ನು ಅವರು ಅಶ್ವಿನಿ ನಗರದಲ್ಲಿದ್ದ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರು. ಅವರು ತಂಡವಾಗಿ ಬಂದು ರಫೀಕ್ ಅವರಿಗೆ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿಳೆಯಿಂದ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ.
ಥಳಿತದಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಸಾಧ್ಯವಾಗದು ಎಂದು ಪೊಲೀಸರು ತಿಳಿಸಿದ್ದಾರೆ.