ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!
Team Udayavani, Jan 25, 2021, 1:40 AM IST
ಕಾಸರಗೋಡು: ಅಶ್ವಿನಿ ನಗರದಲ್ಲಿ ತಂಡವೊಂದು ಥಳಿಸಿದ ಅಲ್ಪಹೊತ್ತಿನಲ್ಲೆ ಮೃತಪಟ್ಟ ಚೆಮ್ನಾಡ್ ಚಳಿಯಂಗೋಡಿನ ಪ್ರಸ್ತುತ ದೇಳಿ ನಿವಾಸಿ ರಫೀಕ್ (49) ಅವರ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಅವಮಾನಕರ ರೀತಿಯಲ್ಲಿ ನಡೆದು ಕೊಂಡಿರುವ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನಂತೆ ಮೃತ ರಫೀಕ್ ವಿರುದ್ಧ ಮತ್ತು ರಫೀಕ್ ಅವರ ಅಸಹಜ ಸಾವಿನ ಬಗ್ಗೆ ಪ್ರತ್ಯೇಕ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.
ಸಾವಿಗೆ ಥಳಿತ ಕಾರಣವಲ್ಲ; ಹೃದಯಾಘಾತ :
ರಫೀಕ್ ಸಾವಿಗೆ ಥಳಿತ ಕಾರಣವಲ್ಲ, ಬದಲಾಗಿ ಹೃದಯಾಘಾತ ಕಾರಣವೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಕುತ್ತಿಗೆಯಲ್ಲಿ ಸಣ್ಣಪುಟ್ಟ ಗಾಯಗಳಿದ್ದವು. ಆದರೆ ಅದು ಅವರ ಸಾವಿಗೆ ಕಾರಣವಲ್ಲ. ಅವರ ಹೃದಯ ಧಮನಿಯಲ್ಲಿ ಐದು ಬ್ಲಾಕ್ಗಳು ಇತ್ತು ಎಂದು ವೈದ್ಯಕೀಯ ಪರೀಕ್ಷಾ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ