Kasaragod: ಜೂನ್ 9 ರಿಂದ ಜುಲೈ 31ರ ತನಕ ಮೀನುಗಾರಿಕೆ ನಿಷೇಧ
Team Udayavani, May 27, 2023, 6:30 AM IST
ಕಾಸರಗೋಡು: ಮಳೆಗಾಲ ಸನಿಹವಾಗುತ್ತಿರುವಂತೆಯೇ ಕೇರಳ ವ್ಯಾಪ್ತಿಗೆ ಸೇರಿದ ಆಳ ಸಮುದ್ರದಲ್ಲಿ ಮೀನುಗಾರಿಕೆ ಟ್ರೋಲಿಂಗ್ ನಿಷೇಧ ಏರ್ಪಡಿಸುವ ದಿನಾಂಕವನ್ನು ಫಿಶರೀಸ್ ಕೋ-ಆರ್ಡಿನೇಶನ್ ಸಮಿತಿ ಪ್ರಕಟಿಸಿದೆ.
ಜೂನ್ 9ರಂದು ಮಧ್ಯರಾತ್ರಿ 12 ಗಂಟೆಯಿಂದ ಜುಲೈ 31ರ ಮಧ್ಯರಾತ್ರಿ 12 ಗಂಟೆಯ ತನಕ ಟ್ರೋಲಿಂಗ್ ನಿಷೇಧ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಮಳೆಗಾಲದಲ್ಲಿ ಮೀನುಗಳ ಸಂತಾನೋತ್ಪತ್ತಿ ಋತುವಾಗಿದ್ದು, ಅದರಿಂದಾಗಿ ಸಮುದ್ರದಲ್ಲಿ ಮತ್ಸ್ಯ ಸಂಪತ್ತನ್ನು ಹೆಚ್ಚಿಸಿ ಅದನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತೀ ವರ್ಷ ಈ ಋತುವಿನಲ್ಲಿ ನಿಗದಿತ ಅವಧಿ ತನಕ ಟ್ರೋಲಿಂಗ್ ನಿಷೇಧ ಜಾರಿಗೊಳಿಸಲಾಗುತಿದೆ.
ಈ ಅವಧಿಯಲ್ಲಿ ಬೆಸ್ತರಿಗೆ ಉಚಿತವಾಗಿ ರೇಶನ್ ಸಾಮಗ್ರಿ ವಿತರಣೆ, ಆರ್ಥಿಕ ನೆರವು ಇತ್ಯಾದಿ ನೀಡಲಾಗುವುದು. ಮೀನು ಕಾರ್ಮಿಕ ಕಲ್ಯಾಣ ನಿಧಿ ಮಂಡಳಿಯಲ್ಲಿ ಸದಸ್ಯರಾಗಿರುವ ಬೆಸ್ತರಿಗೆ ಕಳೆದ ವರ್ಷ ತಲಾ 1000 ರೂ. ನಂತೆ ಆರ್ಥಿಕ ಸಹಾಯ ನೀಡಲಾಗಿತ್ತು. ಈ ಸಹಾಯವನ್ನು ಈ ವರ್ಷ ಹೆಚ್ಚಿಸುವಂತೆ ಇಲಾಖೆ ಸರಕಾರದೊಡನೆ ಆಗ್ರಹಿಸಿದೆ. ಟ್ರೋಲಿಂಗ್ ನಿಷೇಧ ಜಾರಿಗೊಂಡ ಬಳಿಕ ಕೇರಳ ರಾಜ್ಯದ ಸಮುದ್ರ ಕಿನಾರೆಯಿಂದ 12 ನೋಟಿಕಲ್ ಮೈಲ್ ತನಕದ ಪ್ರದೇಶದ ಸಮುದ್ರದಲ್ಲಿ ಯಾಂತ್ರೀಕೃತ ಇತ್ಯಾದಿ ಬೋಟ್ಗಳನ್ನು ಬಳಸಿ ಮೀನಗಾರಿಕೆ ನಡೆಸುವಂತಿಲ್ಲ. ಅದರಲ್ಲೂ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರ್ಣ ನಿಷೇಧ ಹೇರಲಾಗುತ್ತಿದೆ. ಅದರಿಂದಾಗಿ ಯಾಂತ್ರೀಕೃತ ದೋಣಿಗಳು ಜೂನ್ 9ರ ಬಳಿಕ ಸಮುದ್ರಕ್ಕಿಳಿಯದೆ ಅವುಗಳನ್ನು ಸುರಕ್ಷಿತ ತಾಣಗಳಿಗೆ ಸಾಗಿಸಿ ಅಲ್ಲಿ ಸಂರಕ್ಷಿಸಬೇಕು. ಇತರ ರಾಜ್ಯಗಳ ಮೀನುಗಾರಿಕಾ ಬೋಟುಗಳು ಜೂನ್ 10ರೊಳಗಾಗಿ ಕೇರಳದ ಸಮುದ್ರ ವ್ಯಾಪ್ತಿ ಬಿಟ್ಟು ಹೊರಹೋಗಬೇಕೆಂಬ ಆದೇಶ ನೀಡಲಾಗಿದೆ.
ಆದರೆ ಪರಂಪರಾಗತ ರೀತಿಯಲ್ಲಿ ನಾಡ ದೋಣಿ ಬಳಸಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ಇದು ಅನ್ವಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ