ಕಾಸರಗೋಡು ಜಿಲ್ಲೆ ಭಾರೀ ಮಳೆ ; ಅಪಾರ ಹಾನಿ, ದೇವಸ್ಥಾನಕ್ಕೆ ನುಗ್ಗಿದ ನೀರು
Team Udayavani, Jul 11, 2022, 1:10 AM IST
ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ನಿರಂತರ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು ವ್ಯಾಪಕ ಹಾನಿ ಸಂಭವಿಸಿದೆ.
ಹೊಳೆಗಳು ಉಕ್ಕಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಗಾಳಿಯಿಂದಾಗಿ ಮಡಿಕೈಯಲ್ಲಿ ಫಸಲು ಭರಿತನೇಂದ್ರ ಬಾಳೆಯ ತೋಟ ನೆಲಕಚ್ಚಿದೆ.
ಮಧೂರು ಶ್ರೀ ಸಿದ್ಧಿ ವಿನಾಯಕ ಕ್ಷೇತ್ರದ ಅಂಗಣಕ್ಕೆ ಮಧುವಾಹಿನಿ ಹೊಳೆಯ ನೀರು ನುಗ್ಗಿದೆ. ಬಸ್ನಿಲ್ದಾಣ ಕೂಡ ಜಲಾವೃತವಾಗಿದೆ.