ಪ್ರಗತಿಪರ ಚಿಂತಕರಿಂದ ರಾಜ್ಯದ ಸ್ವರೂಪ ಬದಲು: ಸಚಿವ ಬಾಲನ್‌


Team Udayavani, Dec 24, 2018, 12:04 PM IST

24-december-6.gif

ಕಾಸರಗೋಡು:  ಪ್ರಗತಿಪರ ಚಿಂತಕರು ನಾಯಕತ್ವ ವಹಿಸಿಕೊಂಡಾಗ ರಾಜ್ಯದ ಸ್ವರೂಪ ಬದಲಾಯಿತು ಎಂದು ರಾಜ್ಯ ಪರಿಶಿಷ್ಟ ಜಾತಿ – ಪಂಗಡ ಅಭಿವೃದ್ಧಿ ಖಾತೆ ಸಚಿವ ಎ.ಕೆ.ಬಾಲನ್‌ ಅಭಿಪ್ರಾಯಪಟ್ಟರು. ಪರಿಶಿಷ್ಟ ಜಾತಿ – ಪಂಗಡ ಅಭಿವೃದ್ಧಿ ಇಲಾಖೆ ಮತ್ತು ಕಿತಾರ್ಡ್ಸ್‌ ಇಲಾಖೆಗಳ ಜಂಟಿ ವತಿಯಿಂದ ಕಾಲಿಕಡವು ಪಿಲಿಕೋಡ್‌ ಗ್ರಾಮ ಪಂಚಾಯತ್‌ ಮೈದಾನದಲ್ಲಿ ಆರಂಭಗೊಂಡ 9 ದಿನಗಳ ಸಾಂಸ್ಕೃತಿಕ ಉತ್ಸವ ‘ಗದ್ದಿಕ – 2018’ ಉದ್ಘಾಟಿಸಿ ಅವರು ಮಾತನಾಡಿದರು.

1957ರ ಇ.ಎಂ.ಎಸ್‌. ನೇತೃತ್ವದ ರಾಜ್ಯ ಸರಕಾರ ಸಮಾಜದಲ್ಲಿ ಅಂಟಿಕೊಂಡಿದ್ದ ಪಿಡುಗುಗಳನ್ನು ತೊಲಗಿಸುವಲ್ಲಿ ದೊಡ್ಡ ಕೊಡುಗೆ ನೀಡಿತು. ಇದನ್ನು ಸಹಿಸದೇ ಇರುವ ಕೆಲವರು ಹುನ್ನಾರ ನಡೆಸುತ್ತಲೇ ಬಂದರು. ಈ ಬಾರಿಯ ಸರಕಾರದ ಯತ್ನಗಳಿಂದ ಇಂತಹ ಹುನ್ನಾರಗಳು ನಡೆಯದೇ ಹೋದುವು ಎಂದರು.

ದಮನಿಸುವ ಯತ್ನ ನಡೆದಿತ್ತು
ಚಾರಿತ್ರಿಕ ಕಾರಣಗಳು ಪರಿಶಿಷ್ಟ ಜಾತಿ-ಪಂಗಡದ ಮಂದಿಯನ್ನು ಸಮಾಜದ ಪ್ರಧಾನ ವಾಹಿನಿಯಿಂದ ದೂರ ಇರಿಸಿತು. ಪ್ರಪಂಚದಲ್ಲಿ ಎಲ್ಲೂ ಇಲ್ಲದ ಜಾತಿ ವ್ಯವಸ್ಥೆ ಇದಕ್ಕೆ ಪ್ರಧಾನ ಕಾರಣವಾಯಿತು. ಸ್ವಂತ ಜಾಗ ಇಲ್ಲದ ಕಾರಣ ಈ ಜನಾಂಗ ಸಮಾಜದಲ್ಲಿ ಮಾನ್ಯತೆ ಕಳೆದುಕೊಂಡಿತು. ಈ ಮೂಲಕ ಆದಾಯವನ್ನೂ ಕಳೆದುಕೊಳ್ಳಬೇಕಾದ ಅವಸ್ಥೆಗಳು ಸೃಷ್ಟಿಯಾದುವು. ಅವರಿಗೆ ಶಿಕ್ಷಣ, ನೌಕರಿ ಎಲ್ಲವೂ ನಿಷೇಧಿಸಲ್ಪಟ್ಟುವು. ಅಂಧವಿಶ್ವಾಸ, ಅನಾಚಾರಗಳ ಮೂಲಕ ಅವರನ್ನು ದಮನಿಸಲಾಗಿತ್ತು ಎಂದವರು ದೂರಿದರು.

ಆರೋಗ್ಯ ವಲಯದಲ್ಲಿ ಶೀಘ್ರ ಪರಿಹಾರ
ಈ ಬಾರಿಯ ಎಡರಂಗ ಸರಕಾರ ಹಿಂದುಳಿದ ಜನಾಂಗದವರ ಸಮಗ್ರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಅವರು ಬೆಳೆದ ಉತ್ಪನ್ನಗಳನ್ನು ಅವರೇ ಮಾರಾಟ ಮಾಡುವಂಥಾ ವ್ಯವಸ್ಥೆಯನ್ನು ಕೃಷಿ ಇಲಾಖೆ ಒದಗಿಸಿದೆ. ಪೊಲೀಸ್‌, ಅಬಕಾರಿ ದಳಗಳಲ್ಲಿ ನೇಮಕಾತಿ ಇತ್ಯಾದಿ ಕ್ರಮಗಳಿಂದ ನಿರುದ್ಯೋಗ ಪರಿಹಾರ, ಸಾವಿರಾರು ಮಂದಿಯನ್ನು ನೌಕರಿಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ. ಆಹಾರದ ಕೊರತೆಯಿಂದ ಉಪವಾಸ ಮರಣ ಪ್ರಕರಣಗಳು ಕಡಿಮೆಯಾಗಿವೆ. ಶಿಕ್ಷಣ ವಲಯದಲ್ಲೂ ಅವರಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಲಾಗಿದೆ. ಆರೋಗ್ಯ ವಲಯದಲ್ಲಿ ಸಮಸ್ಯೆಗಳಿದ್ದರೂ ಶೀಘ್ರದಲ್ಲಿ ಪರಿಹಾರವಾಗಲಿವೆ ಎಂದರು.

ಮಾಜಿ ಶಾಸಕ ಕುಂಞಿರಾಮನ್‌, ಕಿತಾರ್ಡ್ಸ್‌ ನಿರ್ದೇಶಕ ಡಾ| ಪುಗಳೇಂದಿ, ಪಿಲಿಕೋಡ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ಟಿ.ವಿ. ಶ್ರೀಧರನ್‌ ಮಾಸ್ಟರ್‌, ಜಿಲ್ಲಾ ಪಂಚಾಯತ್‌ ಸದಸ್ಯೆ ಪಿ.ವಿ. ಜಾನಕಿ, ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌., ಪರಿಶಿಷ್ಟ ಪಂಗಡ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯ ಕ್ಲೋವ್‌ ಕೃಷ್ಣನ್‌, ಕೋಡೋಂ-ಬೇಳೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಸಿ. ಕುಂಞಿಕಣ್ಣನ್‌ ಉಪಸ್ಥಿತರಿದ್ದರು.

ಶಾಸಕ ಒ. ರಾಜಗೋಪಾಲನ್‌ ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ವರದಿ ವಾಚಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶಕ ಪಿ.ಎಂ. ಆಲಿ ಆಸ್ಕರ್‌ ಪಾಷಾ ವಂದಿಸಿದರು.

4 ಜಿಲ್ಲೆಗಳಲ್ಲಿ ಯಶಸ್ವಿ 
ಈ ಎಲ್ಲ ಶ್ರಮಗಳ ಪ್ರತೀಕವಾಗಿ ಗದ್ದಿಕ ಸಾಂಸ್ಕೃತಿಕ ಉತ್ಸವ ರಾಜ್ಯದಲ್ಲಿ ನಡೆಯುತ್ತಿದೆ. ಈಗಾಗಲೇ 4 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಈ ಸಮಾರಂಭ ನಡೆಸಿ 5ನೇ ಉತ್ಸವ ಕಾಸರಗೋಡಿನಲ್ಲಿ ನಡೆಯುತ್ತಿದೆ. ಮುಂದಿನ ಮೇಳ ತಿರುವನಂತಪುರದ ಆಟಿಂಗರದಲ್ಲಿ ನಡೆಯಲಿದೆ ಎಂದು ಸಚಿವ ಎ.ಕೆ. ಬಾಲನ್‌ ವಿವರಿಸಿದರು.

‘ಅನುಭವ ಜನ್ಯವಾಗಿಸುವ ಪ್ರಯತ್ನ ನಡೆಸಿ’
ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಇ.ಚಂದ್ರಶೇಖರನ್‌ ಮಾತನಾಡಿ ಪರಿಶಿಷ್ಟ ಜಾತಿ-ಪಂಗಡದವರ ಅಭಿವೃದ್ಧಿಗೆ ನಡೆಸುವ ಯತ್ನಗಳು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಿದಂತೆ ಎಂದು ಹೇಳಿದರು. ಇವರು ನೀಡಿದ ಬಳುವಳಿಗಳಲ್ಲಿ ಪರಂಪರಾಗತ ಚಿಕಿತ್ಸೆಗಳು ಅತ್ಯಮೂಲ್ಯವಾದುವು. ಕಾಡಿನಲ್ಲಿ ಅಲೆದು ಅವರು ತರುವ ನಾರು-ಬೇರುಗಳಿಂದ ತಯಾರಿಸಿದ ಔಷಧಗಳು ಬೇಡಿಕೆ ಹೊಂದಿದ್ದರೂ, ಮೂಲ ಕಾರಣರಿಗೆ ಸೂಕ್ತ ಬೆಲೆ ಲಭಿಸದೇ ಹೋಗಿರುವುದು ದುರಂತ. ಅವರ ಶ್ರಮವನ್ನು ನಾಡಿನ ಜನತೆಗೆ ಅನುಭವಜನ್ಯವಾಗಿಸುವ ಪ್ರಯತ್ನ ನಡೆಯಬೇಕಾಗಿದೆ. ಇದಕ್ಕೆ ಗದ್ದಿಕ ಉತ್ಸವ ಪೂರಕ ಎಂದರು.

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.