ಕಾಸರಗೋಡು ರೈಲು ನಿಲ್ದಾಣ ಪಾರ್ಕಿಂಗ್‌ ಸಮಸ್ಯೆ: ಪರಿಹಾರವೆಂದು?


Team Udayavani, Jul 11, 2018, 6:00 AM IST

c-27.jpg

ಕಾಸರಗೋಡು: ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲೊಂದಾದ ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ ಸಮಸ್ಯೆಗೆ ಇನ್ನೂ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ ಬಗ್ಗೆ ರೈಲು ಪ್ರಯಾಣಿಕರು ವಿವಿಧ ಸಮಸ್ಯೆಗಳನ್ನು ಹೇಳುತ್ತಲೇ ಬಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ವಾಹನ ಸುರಕ್ಷೆಯ ಬಗ್ಗೆ ಅತೀ ಹೆಚ್ಚಿನ ದೂರುಗಳು ಬರುತ್ತಲೇ ಇವೆ. ವಾಹನ ಪಾರ್ಕಿಂಗ್‌ ಮಾಡುವ ಸ್ಥಳಯದಲ್ಲಿ ಛಾವಣಿಯಿಲ್ಲದೆ ವಾಹನಗಳು ಮಳೆ ಬಿಸಿಲೆನ್ನದೆ ತೆರೆದ ಬಯಲಿನಲ್ಲಿ ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ವಾಹನಗಳಿಗೆ ದುಷ್ಪರಿಣಾಮ ಬೀರುತ್ತಿದೆ. 

ದುಡ್ಡು ತೆತ್ತು ವಾಹನ ಪಾರ್ಕ್‌ ಮಾಡಲಾಗುತ್ತಿದ್ದರೂ ಇಂತಹ ವಾಹನಗಳಿಗೆ ಯಾವುದೇ ಸುರಕ್ಷೆ ಇಲ್ಲ ಎಂಬುದು ಪ್ರಯಾಣಿಕರ ಕೊರಗು. ರೈಲ್ವೇ ಪಾಲಾಟ್‌ ಡಿವಿಜನ್‌ನ ಹಲವು ರೈಲು ನಿಲ್ದಾಣಗಳಲ್ಲಿ ಪಾರ್ಕ್‌ ಮಾಡಿದ ವಾಹನಗಳ ಮೇಲೆ ಮರದ ರೆಂಬೆ ಮುರಿದು ಬಿದ್ದು ಹಾನಿಗೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಕಾಸರಗೋಡು ನಿಲ್ದಾಣದಲ್ಲೂ ಇದರಿಂದ ಹೊರತಾಗಿಲ್ಲ. ಕಾಸರಗೋಡು ನಿಲ್ದಾಣದಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದೆ ವಾಹನಗಳನ್ನು ರೈಲು ನಿಲ್ದಾಣ ಸಮೀಪದ ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಮರಗಳು ಮುರಿದು ಬಿದ್ದು ಹಲವು ಪಾರ್ಕ್‌ ಮಾಡಿದ ವಾಹನಗಳು ಹಾನಿಗೀಡಾದ ಪ್ರಸಂಗಗಳೂ ನಡೆದಿವೆ.

ಪ್ರಯಾಣಿಕರು ಪಾರ್ಕ್‌ ಮಾಡುವ ವಾಹನಗಳಿಗೆ ಸುರಕ್ಷೆ ನೀಡಬೇಕಾದುದು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ಪಾರ್ಕಿಂಗ್‌ ವಲಯದಲ್ಲಿ ಮೇಲ್ಛಾವಣಿಯನ್ನು ನಿರ್ಮಿಸಬೇಕು, ವಾಹನಗಳ ಸುರಕ್ಷೆಗಾಗಿ ಕೆಮರಾಗಳನ್ನು ಜೋಡಿಸಬೇಕು. ಹ್ಯಾಂಡ್‌ ಹೆಲ್ಡ್‌ ಟರ್ಮಿನಲ್‌ ಮೆಶಿನ್‌ ಬಳಸಿ ವಾಹನ ಪಾರ್ಕಿಂಗ್‌ ಮಾಡುವವರಿಗೆ ರಶೀದಿ ನೀಡುವ ಸೌಲಭ್ಯಗಳನ್ನು ಏರ್ಪಾಡು ಮಾಡಬೇಕೆಂದು ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆಯನ್ನು ಮುಂದಿಟ್ಟರೂ ಈ ವರೆಗೂ ಪ್ರಯಾಣಿಕರ ಯಾವುದೇ ಬೇಡಿಕೆ ಈಡೇರಿಲ್ಲ. ಆದರೆ ಈ ಬೇಡಿಕೆಗಳನ್ನು ಗುತ್ತಿಗೆದಾರರು ಈಡೇರಿಸಬೇಕೆಂಬುದು ರೈಲ್ವೇ ಅಧಿಕೃತರ ಅಂಬೋಣವಾಗಿದೆ.

ಈಗಾಗಲೇ ಕಾಸರಗೋಡು, ಕುಟ್ಟಿಪ್ಪುರಂ, ಒಟ್ಟಪ್ಪಾಲಂ ರೈಲು ನಿಲ್ದಾಣಗಳಲ್ಲಿ    ಪಾರ್ಕಿಂಗ್‌ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌, ಕಾಂಞಂಗಾಡ್‌, ಪಯ್ಯನ್ನೂರು, ಕಣ್ಣೂರು, ಬಡಗರ, ಕೊಯಿಲಾಂಡಿ, ಫಾರೂಕ್‌ ಮೊದಲಾದ ರೈಲು ನಿಲ್ದಾಣಗಳಲ್ಲಿ ಪಾರ್ಕಿಂಗ್‌ ನಿರ್ವಹಿಸಲು ಶೀಘ್ರವೇ ಅರ್ಜಿ ಆಹ್ವಾನಿಸಲಿದೆ. ಕಾಸರಗೋಡು ರೈಲು ನಿಲ್ದಾಣದಲ್ಲಿ 2242.860 ಚದರಡಿ, ಒಟ್ಟಪ್ಪಾಲಂನಲ್ಲಿ 1462.46 ಚದರಡಿ ಮತ್ತು ಕುಟ್ಟಿಪ್ಪುರದಲ್ಲಿ 1135.15 ಚದರಡಿ ವಿಸ್ತೀರ್ಣದಲ್ಲಿ ಪಾರ್ಕಿಂಗ್‌ ಪ್ರದೇಶವಿದೆ. ಕಾಸರಗೋಡು ನಿಲ್ದಾಣದಲ್ಲಿ 71 ಲಕ್ಷ ರೂ., ಕುಟ್ಟಿಪ್ಪುರದಲ್ಲಿ 30 ಲಕ್ಷ ರೂ., ಒಟ್ಟಪ್ಪಾಲಂನಲ್ಲಿ 12 ಲಕ್ಷ ರೂ. ಮೂರು ವರ್ಷಕ್ಕೆ ಕನಿಷ್ಠ ಗುತ್ತಿಗೆ ಮೊತ್ತ. ವಿಸ್ತೀರ್ಣಕ್ಕೆ ಅನುಗುಣವಾಗಿ ಗುತ್ತಿಗೆ ಮೊತ್ತವನ್ನು ನಿರ್ಧರಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸುವವರು ಕಾಸರಗೋಡು ರೈಲು ನಿಲ್ದಾಣದ ಪಾರ್ಕಿಂಗ್‌ ನಿರ್ವಹಣೆಯ ಜವಾಬ್ದಾರಿ ವಹಿಸಲು ಆಗ್ರಹಿಸುವವರು 1,42,000 ರೂ., ಕುಟ್ಟಿಪ್ಪುರದಲ್ಲಿ 60,000 ರೂ., ಒಟ್ಟಪ್ಪಾಲಂನಲ್ಲಿ 24,000 ರೂ. ಪಾವತಿಸಬೇಕು.

ಪ್ರಮುಖ ರೈಲು ನಿಲ್ದಾಣಗಳಲ್ಲಿ ವಾಹನ ಪಾರ್ಕಿಂಗ್‌ ನಿರ್ವಹಿಸಲು ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ. ಆದರೆ ವಾಹನ ಪಾರ್ಕಿಂಗ್‌ ಬಗೆಗಿನ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸುವ ಬಗ್ಗೆ ರೈಲ್ವೇಯಿಂದ ಯಾವುದೇ ಸೂಚನೆ ಈ ವರೆಗೂ ಇಲ್ಲ.

ವಾಹನಗಳ ಕಳವು ಸಾಮಾನ್ಯ
ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಪಾರ್ಕ್‌ ಮಾಡಿದ  ಹಲವು ದ್ವಿಚಕ್ರ ವಾಹನಗಳು ಕಳವಾಗಿವೆ. ರೈಲು ನಿಲ್ದಾಣದಲ್ಲಿ ವ್ಯವಸ್ಥಿತವಾದ ಸುರಕ್ಷೆ ಸಂವಿಧಾನವಿಲ್ಲ ದಿರುವುದರಿಂದಾಗಿ ಪಾರ್ಕ್‌ ಮಾಡಿದ ವಾಹನಗಳು ಕಳವಾಗುತ್ತಿರುವುದು ಸಾಮಾನ್ಯ ವಾಗಿದೆ. ಇಲ್ಲಿ ಪೊಲೀಸ್‌ ಏಯ್ಡ ಪೋಸ್ಟ್‌ ಇದ್ದರೂ ಹಲವು ಸಂದರ್ಭಗಳಲ್ಲಿ ಪೊಲೀಸರೇ ಇರುವುದಿಲ್ಲ. ಈ ಕಾರಣದಿಂದಾಗಿ ರೈಲು ನಿಲ್ದಾಣದಲ್ಲಿ ಪಾರ್ಕ್‌ ಮಾಡಿದ ವಾಹನಗಳು ಕಳವಾಗುತ್ತಿವೆ. ಈಗಾಗಲೇ ಹಲವು ವಾಹನಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೂ ವಾಹನ ಸುರಕ್ಷೆಗೆ ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರಯಾಣಿಕರು ಹೇಳುತ್ತಲೇ ಬಂದಿದ್ದಾರೆ.

ಟಾಪ್ ನ್ಯೂಸ್

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.