ಕಾಸರಗೋಡು: ಸೆಪ್ಟಿಕ್ ಟ್ಯಾಂಕ್ ಫುಲ್; ಶೌಚಾಲಯ ಬಂದ್
Team Udayavani, Jan 14, 2019, 7:04 AM IST
ಕಾಸರಗೋಡು : ಸಾವಿರಾರು ಪ್ರಯಾಣಿಕರು ತಲುಪುವ ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಶೌಚಾಲಯ ಮುಚ್ಚಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸೆಪ್ಟಿಕ್ ಟ್ಯಾಂಕ್ ತುಂಬಿರುವುದರಿಂದ ಶೌಚಾಲಯ ಒಂದು ವಾರದಿದ ಮುಚ್ಚಿದ್ದು, ಇದರಿಂದ ಬಸ್ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರು ಸಮಸ್ಯೆಗೆ ತುತ್ತಾಗಿದ್ದು, ಶೌಚಾಲಯವಿಲ್ಲದೆ ಬೇರೆ ದಾರಿ ಹುಡುಕ ಬೇಕಾದ ದುಸ್ಥಿತಿಗೆ ತಲುಪಿದ್ದಾರೆ.
ಟ್ಯಾಕ್ಸಿ ಸ್ಟೇಂಡ್ ಸಮೀಪದಲ್ಲಿರುವ ಸೆಪ್ಟಿಕ್ ಟ್ಯಾಂಕ್ ತುಂಬಿರುವುದರಿಂದ ಶೌಚಾಲಯ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದ್ದು, ಬದಲಿ ವ್ಯವಸ್ಥೆ ಮಾಡದೆ ಶೌಚಾಲಯ ಮುಚ್ಚಿರುವುದರಿಂದ ಬಸ್ ನಿಲ್ದಾಣದಲ್ಲಿರುವ ವರ್ತಕರು, ಪ್ರಯಾಣಿಕರು ವಿವಿಧ ಸಮಸ್ಯೆ ಅನು ಭವಿಸುವಂತಾಗಿದೆ. ಬಳಸುತ್ತಿರು ವಾಗ ಮಲಿನ ನೀರು ಮೇಲೇರುತ್ತಿರು ವುದರಿಂದ ಶೌಚಾಲಯ ಮುಚ್ಚಲಾಗಿದೆ ಎಂಬುದು ಸಂಬಂಧಪಟ್ಟವರ ಹೇಳಿಕೆ. 25 ವರ್ಷಗಳಿಗೂ ಹಳೆಯದಾ ಗಿದೆ ಸೆಪ್ಟಿಕ್ ಟ್ಯಾಂಕ್. ಆರಂಭದ ಹಂತದಲ್ಲಿ ಕಿರುಗಾತ್ರದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿತ್ತು. ಆ ಬಳಿಕ ದೊಡ್ಡ ಗಾತ್ರದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದರೂ, ಈ ವರೆಗೆ ಒಂದು ಬಾರಿ ಮಾತ್ರವೇ ಟ್ಯಾಂಕ್ನಿಂದ ಮಲಿನವನ್ನು ತೆರವುಗೊಳಿಸಲಾಗಿತ್ತು.
ಶೌಚಾಲಯದಿಂದ ಸೆಪ್ಟಿಕ್ ಟ್ಯಾಂಕ್ಗಿರುವ ಪೈಪುಗಳನ್ನು ಪರಿಶೀಲಿಸಿದರೂ ಅದರಲ್ಲಿ ತೊಂದರೆ ಕಂಡು ಬರಲಿಲ್ಲ. ಟ್ಯಾಂಕ್ಗಳನ್ನು ಶುಚಿಗೊಳಿಸುವ ಕಾರ್ಮಿಕರು ಬಂದು ಪರಿಶೀಲಿಸಿದಾಗ ಟ್ಯಾಂಕ್ ತುಂಬಾ ಮಲಿನ ತುಂಬಿರುವುದು ಕಂಡು ಬಂತು. ಸೆಪ್ಟಿಕ್ ಟ್ಯಾಂಕ್ನಲ್ಲಿ ತುಂಬಿರುವ ಮಲಿನವನ್ನು ಒಂದು ಲಾರಿಯಲ್ಲಿ ತುಂಬಿ ಸಾಗಿಸಬೇಕಾದರೆ 25 ಸಾವಿರ ರೂಪಾಯಿ ನೀಡಬೇಕೆಂದು ಬೇಡಿಕ ್ನ ಮುಂದಿಟ್ಟಿದ್ದರು. ಇದರಲ್ಲಿ ಎರಡು ಲಾರಿಯಲ್ಲಿ ತುಂಬಿಸುವಷ್ಟು ಮಲಿನ ಇರಬಹುದಾಗಿದ್ದು, ಎರಡು ಲಾರಿಯಲ್ಲಿ ಮಲಿನ ಸಾಗಿಸಿಬೇಕಾದರೆ ಶೌಚಾಲಯ ಗುತ್ತಿಗೆದಾರ 50 ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಆದರೆ ಶೌಚಾಲಯ ನಿರ್ವಹಿಸುವ ವ್ಯಕ್ತಿಗೆ ಇಷ್ಟು ಹಣ ನೀಡಲು ಸಾಧ್ಯ ವಾಗದಿರುವುದರಿಂದ ನಗರಸಭೆಯನ್ನು ಸಂಪರ್ಕಿಸಲಾಗಿದೆ.
ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಿಳಂಬವಾಗುವುದರಿಂದ ಶೌಚಾಲಯ ತೆರೆಯುವ ಕುರಿತು ಇನ್ನೂ ಅನಿಶ್ಚಿತತೆ ಎದುರಾಗಿದೆ. ಶೌಚಾಲಯ ಮುಚ್ಚು ಗಡೆಯಿಂದಾಗಿ ದೀರ್ಘ ದೂರ ಪ್ರಯಾಣಿಕರಾದ ಮಹಿಳೆಯರೂ, ಮಕ್ಕಳು ಸಹಿತ ತೀವ್ರ ಸಮಸ್ಯೆಯನ್ನು ಎದುರಿಸು ವಂತಾಗಿದೆ. ಇದೀಗ ಮುಚ್ಚುಗಡೆ ಗೊಂಡಿರುವ ಶೌಚಾಲಯವಲ್ಲದೆ ಬಸ್ ನಿಲ್ದಾಣದಲ್ಲಿ ಬೇರೆ ಶೌಚಾಲಯವಿಲ್ಲ.
ಶೀಘ್ರ ಪರಿಹಾರ
ಹೊಸ ಬಸ್ ನಿಲ್ದಾಣದ ಎರಡೂ ಶೌಚಾಲಯಗಳನ್ನು ಮುಚ್ಚಿರುವ ಬಗ್ಗೆ ಗಮನಕ್ಕೆ ಬಂದಿದೆ. ಆರೋಗ್ಯ ವಿಭಾಗ ಇದನ್ನು ದುರಸ್ತಿಗೊಳಿಸಬೇಕು. ಸೆಪ್ಟಿಕ್ ಟ್ಯಾಂಕ್ನಲ್ಲಿ ಮಲಿನವನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶ ನೀಡಲಾಗುವುದು. ಹೊಸ ಬಸ್ ನಿಲ್ದಾಣದಲ್ಲಿರುವ ಇ-ಟಾಯ್ಲೆಟ್ ಕೂಡಾ ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಬಸ್ ನಿಲ್ದಾಣಕ್ಕೆ ಬರುವ ಮಹಿಳೆಯರು, ಮಕ್ಕಳು ಸಹಿತ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.
-ಬಿ. ಫಾತಿಮಾ ಇಬ್ರಾಹಿಂ,
ಅಧ್ಯಕ್ಷರು, ಕಾಸರಗೋಡು ನಗರಸಭೆ
ಇ-ಟಾಯ್ಲೆಟ್
ಈ ಹಿಂದೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು. ಆದರೆ ಇ-ಟಾಯ್ಲೆಟ್ ಕೆಲವೇ ದಿನಗಳಲ್ಲಿ ಕೆಟ್ಟು ಹೋದುದರಿಂದ ಕೆಲವು ತಿಂಗಳ ಬಳಿಕ ದುರಸ್ತಿ ಗೊಳಿಸಲಾಗಿತ್ತು. ಕೆಲವು ದಿನಗಳ ತನಕ ಕಾರ್ಯಾಚರಿಸಿದ ಇ-ಟಾಯ್ಲೆಟ್ ಮತ್ತೆ ಕೆಟ್ಟು ಹೋದುದರಿಂದ ದುರಸ್ತಿ ಕಾಣದೆ ಇದೀಗ ಸಿನೆಮಾ ಪೋಸ್ಟರ್ಗಳ ಸಹಿತ ಪ್ರದರ್ಶಿಸುವ ಕೇಂದ್ರವಾಗಿ ಬದಲಾಗಿದೆ. ಇದೀಗ ಬಸ್ ನಿಲ್ದಾಣದಲ್ಲಿ ಮಹಿಳೆಯರ ಮತ್ತು ಗಂಡಸರ ಶೌಚಾಲಯ ಮುಚ್ಚಿದ್ದು, ಇ-ಟಾಯ್ಲೆಟ್ ಕೂಡಾ ಮುಚ್ಚಿರುವುದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ