ಕಾಸರಗೋಡು ಯುವಕ ದಿಲ್ಲಿ ಪೊಲೀಸರ ಬಲೆಗೆ
Team Udayavani, Jan 14, 2019, 4:30 AM IST
ಕಾಸರಗೋಡು: ಸಂಘ ಪರಿವಾರದ ಮುಖಂಡರ ಹತ್ಯೆಗೆ ಸಂಚು ಪ್ರಕರಣದಲ್ಲಿ ಕಾಸರಗೋಡು ಚೆಮ್ನಾಡ್ ಸಮೀಪದ ಚೆಂಬರಿಕ ನಿವಾಸಿ ಸಿ.ಎಂ. ಮುಹತಸಿಂ ಅಲಿಯಾಸ್ ತಾಸಿಂ(41)ನನ್ನು ಹೊಸದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ಹಾಜರು ಪಡಿಸಿ ದಿಲ್ಲಿಗೆ ಕರೆದೊಯ್ದಿದ್ದಾರೆ.
ಜ. 11ರಂದು ಬಂಧನ ದಿಲ್ಲಿ ಪೊಲೀಸರ ಸೂಚನೆಯಂತೆ ಮುಹತಸಿಂನನ್ನು ಜ. 11ರಂದೇ
ಚಟ್ಟಂಚಾಲ್ನಿಂದ ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದರು. ಮರುದಿನ ದಿಲ್ಲಿ ಪೊಲೀಸರು ಕಾಸರಗೋಡಿಗೆ ಆಗಮಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳೂ ಬಂದಿದ್ದು, ವಿಚಾರಣೆ ನಡೆಸಿದ್ದರು.
ಹಲವು ಪ್ರಕರಣ ಮುಹತಸಿಂ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ 2 ನಕಲಿ ಪಾಸ್ಪೋರ್ಟ್ ಪ್ರಕರಣ, ಮನೆಗೆ ನುಗ್ಗಿ ಹಲ್ಲೆ ಮತ್ತು ಬೇಕಲದಲ್ಲಿ ಎಸ್ಐ ಯಾಗಿದ್ದ ವಿಪಿನ್ ಅವರಿಗೆ ಬೆದರಿಕೆ ಕೇಸು ಕೂಡ ದಾಖಲಾಗಿದೆ.
ಕಾಶ್ಮೀರದ ಉಗ್ರಗಾಮಿ ಸಂಘಟನೆಗಳಿಗೆ ಯುವಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿ ಇಂಟರ್ಪೋಲ್ ಮತ್ತು ಕೇಂದ್ರ ಗುಪ್ತಚರ ವಿಭಾಗ ಕೂಡ ಈತನನ್ನು ಈ ಹಿಂದೆ ಹಲವು ಬಾರಿ ವಿಚಾರಣೆ ನಡೆಸಿತ್ತು. ಊರಲ್ಲಿ ಈತ “ಡಾನ್’ ಎಂದೇ ಗುರಿಸಿಕೊಂಡಿದ್ದಾನೆ.
ನಕಲಿ ಗುರುತುಚೀಟಿ
ಭಾರತ ಸರಕಾರದ ಮೊಹರು ಲಗತ್ತಿಸಿ ತಾನೇ ತಯಾರಿಸಿದ ಗುರುತು ಕಾರ್ಡನ್ನು ಈತ ಹೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ನಕಲಿ ಕಾರ್ಡ್ನಲ್ಲಿ ಮುಹತಸಿಂ ಸಿ.ಎಂ., ತಸ್ಲಿàಮ್ ಡಾನ್ (ಆರ್.ಎ.ಡಬುÉ), ಕುಲಭೆ, ನಿಯರ್ ಗಣಪತಿ ಟೆಂಪಲ್, ಬೆಂಡೀಸ್ ಹೌಸ್, ಮುಂಬಯಿ – 40001 ಎಂಬ ವಿಳಾಸ ಇದೆ. ಕೇಂದ್ರ ಮಿಲಿಟರಿ ಗುಪ್ತಚರ ವಿಭಾಗವಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) ಅಧಿಕಾರಿಗಳಿಗೆ ನೀಡಲಾಗುವ ಗುರುತು ಪತ್ರ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ