ಕಾಸರಗೋಡು: ವಿಶ್ವ ಅಂಗವಿಕಲ ದಿನಾಚರಣೆ
Team Udayavani, Dec 7, 2020, 10:32 PM IST
ಕಾಸರಗೋಡು: ಕೋಟೂರಿನ ಅಕ್ಕರ ಫೌಂಡೇಶನ್ ಸೆಂಟರ್ ಫಾರ್ ಚೈಲ್ಡ್ ಡೆವಲಪ್ಮೆಂಟ್ನ ನೇತೃತ್ವದಲ್ಲಿ ಆಯೋಜಿಸಿದ ವಿಶ್ವ ಅಂಗವಿಕಲ ದಿನಾಚರಣೆಯನ್ನು ಜಿಲ್ಲಾ ಜಡ್ಜ್ ಎಸ್.ಎಚ್. ಪಂಜಾಪಕೇಶನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪರಿಯಾರಂ ಸಿ.ಎಚ್.ಎಂ.ಎಂ. ಮಲ್ಟಿ ಸ್ಪೆಶ್ಯಾಲಿಟಿ ರೀಹ್ಯಾಲಿಟೇಶನ್ ಇನ್ಸ್ಟಿಟ್ಯೂಟ್ ಪ್ರೊಜೆಕ್ಟ್ ಮ್ಯಾನೇಜರ್ ಆದಂ ಸದಾ, ಪರಿವಾರ್ ಕೇರಳಂ ರಾಜ್ಯ ಅಧ್ಯಕ್ಷ ಕರುಣಾಕರನ್ ಎಂ.ಪಿ., ಅಕ್ಕರ ಫೌಂಡೇಶನ್ ರೀಹ್ಯಾಬಿಲಿಟೇಶನ್ ಸೈಕೋಲಜಿಸ್ಟ್ ರೀಮಾ ಬಿ.ಎಸ್. ವಿವಿಧ ವಿಷಯಗಳ ಕುರಿತು ತರಗತಿ ನಡೆಸಿದರು.
ಅಕ್ಕರ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ಫಿನ್ಸರ್ ಅಕ್ಕರ ಅಧ್ಯಕ್ಷತೆ ವಹಿಸಿದರು. ಮ್ಯಾನೇಜರ್ ಮುಹಮ್ಮದ್ ಯಾಸಿರ್ ಸ್ವಾಗತಿಸಿದರು. ಜಿಲ್ಲಾ ಲೀಗಲ್ ಸರ್ವೀಸ್ ಅಥೋರಿಟಿ ಸೆಕ್ಟನ್ ಆಫೀಸರ್ ದಿನೇಶ್, ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಅಶೋಕ, ಸಮಾಜ ಸೇವಕಿ ಸುಲೈಖಾ ಮಾಹಿನ್, ಜಿಲ್ಲಾ ಚೈಲ್ಡ್ ಪ್ರೊಟೆಕ್ಟ್ ಟೀಂ ಸದಸ್ಯ ಸುನಿಲ್, ಆಲ್ ಕೇರಳ ವೀಲ್ ಚೆಯರ್ ರೈಟ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ರಾಕೇಶ್, ಸೆಂಟರ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಮುಖ್ಯಸ್ಥ ಜಿನಿಲ್ ರಾಜ್ ಮೊದಲಾದವರು ಶುಭಹಾರೈಸಿದರು. ಅಕ್ಕರ ಫೌಂಡೇಶನ್ ಸ್ಪೀಚ್ ಥೆರಾಫಿಸ್ಟ್ ಎಲಿಸಬೆತ್ ವಂದಿಸಿದರು.