ಕುಂಬಳೆ : ಗೋವಾಕ್ಕೆ ತೆರಳಿದ ಪೊಲೀಸ್ : 50 ಲ.ರೂ. ಮೌಲ್ಯದ ಡಾಲರ್ ವ್ಯವಹಾರ ಕೊಲೆಗೆ ಕಾರಣ?
Team Udayavani, Jun 29, 2022, 11:58 PM IST
ಕುಂಬಳೆ: ತಂಡವೊಂದು ಅಪಹರಿಸಿ ಕೊಲೆಗೈದ ಪುತ್ತಿಗೆಯ ಮುಗು ರೋಡಿನ ಅಬೂಬಕ್ಕರ್ ಸಿದ್ಧಿಕ್ (31) ಹತ್ಯೆಯ ಆರೋಪಿಗಳಲ್ಲಿ ಕೆಲವರು ಗೋವಾಕ್ಕೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರ ತಂಡ ಆರೋಪಿಗಳ ಪತ್ತೆಗೆ ಗೋವಾಕ್ಕೆ ತೆರಳಿದೆ.
ಮಂಜೇಶ್ವರದ ಅಜೀಜ್ ಮತ್ತು ರಹೀಂನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಗೋವಾಕ್ಕೆ ಪರಾರಿಯಾಗಲು ರಹೀಂ ಸಹಾಯ ನೀಡಿದ್ದು, ಅಬೂಬಕ್ಕರ್ ಸಿದ್ಧಿಕ್ ಅವರನ್ನು ಕಾರಿನಲ್ಲಿ ಬಂದ್ಯೋಡು ಆಸ್ಪತ್ರೆಗೆ ತಲಪಿಸಿರುವುದು ಅಜೀಜ್ ಎನ್ನಲಾಗಿದೆ.
ದುಬಾೖನಲ್ಲಿ ವ್ಯವಹಾರ?
ಕೊಲೆಗೆ ಕಾರಣ ಡಾಲರ್ ಸಾಗಾಟಕ್ಕೆ ಸಂಬಂಧಿಸಿದೆ. ಅಬೂಬಕ್ಕರ್ ಸಿದ್ಧಿಕ್ ವಿದೇಶಕ್ಕೆ ತೆರಳುವಾಗ ಉಪ್ಪಳದ ತಂಡವೊಂದು 50 ಲಕ್ಷ ರೂ. ಮೌಲ್ಯದ ಡಾಲರ್ ನೀಡಿದ್ದು, ಬಳಿಕ ಅದು ನಾಪತ್ತೆಯಾಗಿತ್ತು. ಇದೇ ಕೊಲೆಗೆ ಕಾರಣವಾಗಿರುವುದಾಗಿ ಸ್ಪಷ್ಟವಾಗಿದೆ. ಗುಪ್ತವಾಗಿ ಡಾಲರ್ ಬಚ್ಚಿಟ್ಟ ಬ್ಯಾಗ್ ದುಬಾಯಿಯಲ್ಲಿರುವ ಓರ್ವರಿಗೆ ಹಸ್ತಾಂತರಿಸಿರುವುದಾಗಿ ಅಬೂಬಕ್ಕರ್ ಸಿದ್ಧಿಕ್ ತಿಳಿಸಿದ್ದರೂ, ಅದು ಸಂಬಂಧಪಟ್ಟವರಿಗೆ ದೊರಕಿರಲಿಲ್ಲ.
ಮನೆಯಲ್ಲೂ ತಪಾಸಣೆ
ಸಿದ್ಧಿಕ್ ಸಹೋದರ ಅನ್ವರ್ ಮತ್ತು ಮಿತ್ರ ಅನ್ಸಾರಿ ಅವರನ್ನು ಕಳೆದ ಶುಕ್ರವಾರ ಅಪಹರಿಸಿ ಪೈವಳಿಕೆಯ ನಿರ್ಜನ ಸ್ಥಳದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ ಬಳಿಕ ವಿದೇಶದಿಂದ ಸಿದ್ಧಿಖ್ ಅವರನ್ನು ರವಿವಾರ ಮನೆಗೆ ಕರೆಯಿಸಿ ಪೈವಳಿಕೆಯ ನಿರ್ಜನ ಸ್ಥಳದ ಮನೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು. ಮೃತದೇಹವನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಂಡ ಪರಾರಿಯಾಗಿತ್ತು. ತಂಡ ಬಳಸಿದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಡದಿಂದ ಹಲ್ಲೆ ನಡೆಸಿದ ಪೈವಳಿಕೆಯ ಮನೆಯಲ್ಲಿ ತನಿಖಾ ತಂಡ ತಪಾಸಣೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ