ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಜಾತ್ರೆ: ಇಂದು ಸಂಪನ್ನ
Team Udayavani, Jan 18, 2020, 5:04 AM IST
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಚತುರ್ಥ ದಿನವಾದ ಜ. 17ರಂದು ಬೆಳಗ್ಗೆ ಉತ್ಸವ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಮಡ್ವ ಚಂದ್ರಹಾಸ ಭಂಡಾರಿ ಮನೆಯವರಿಂದ ಅನ್ನದಾನ ನಡೆಯಿತು.
ಸಂಜೆ ನಡೆ ತೆರೆದ ಬಳಿಕ ಶಿರಿಯ ಶ್ರೀ ಸತ್ಯಸಾಯಿ ಬಳಗದಿಂದ ಭಜನೆ, ನಾಟ್ಯನಿಲಯಂ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ಭರತ ನಾಟ್ಯ ರಂಜಿಸಿತು.
ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ ಶ್ರೀಬಲಿ ಉತ್ಸವ, ಬೆಡಿ ಪ್ರದರ್ಶನ ನಡೆಯಿತು. ಮುಂಜಾನೆ ಶಯನ, ಕವಾಟ ಬಂಧನ ನಡೆಯಿತು.
ಇಂದಿನ ಕಾರ್ಯಕ್ರಮ
ಜ. 18ರಂದು ಬೆಳಗ್ಗೆ 6ಗಂಟೆಗೆ ಕವಾಟೋದ್ಘಾಟನೆ, 10.30ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಸಂಜೆ 4.30ರಿಂದ ನಡೆ ತೆರೆಯುವುದು, 6.30ಕ್ಕೆ ದೀಪಾರಾಧನೆ, 4.30ರಿಂದ ಯಕ್ಷಗಾನ ವೈಭವ, ರಾತ್ರಿ 8.30 ರಿಂದ ಉತ್ಸವ ಬಲಿ, ಘೋಷಯಾತ್ರೆ, ಅವಭೃತ ಸ್ನಾನ (ಶೇಡಿಗುಮ್ಮೆಯಲ್ಲಿ) 10 ಗಂಟೆಗೆ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ, ರಾತ್ರಿ ಗಂಟೆ 12.30ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ,ಧ್ವಜಾವರೋಹಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA