ತೃಕ್ಕರಿಪುರ ವಿ. ಕ್ಷೇತ್ರ: ಎಡರಂಗದ ಭದ್ರ ಕೋಟೆ; ಬದಲಾವಣೆಯ ಗಾಳಿ ಬೀಸೀತೇ?


Team Udayavani, Apr 21, 2019, 6:30 AM IST

badrakote

ಕಾಸರಗೋಡು: ಹೇಳಿ ಕೇಳಿ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ಎಡರಂಗದ ಭದ್ರಕೋಟೆ. ಈ ವರೆಗೂ ಈ ಕ್ಷೇತ್ರದಲ್ಲಿ ಎಡರಂಗ ಯಾವ ರಾಜಕೀಯ ಪಕ್ಷದಿಂದಲೂ ನಿಕಟ ಸ್ಪರ್ಧೆಯನ್ನು ಎದುರಿಸಿಲ್ಲ. ಅಷ್ಟು ಭದ್ರವಾಗಿರುವ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಎಡರಂಗದ ಅಭ್ಯರ್ಥಿಗಳಿಗೆ ಹೊರತಾಗಿ ಇನ್ನೊಂದು ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ ಎಂಬ ವಿಶೇಷತೆಯೂ ಈ ಕ್ಷೇತ್ರಕ್ಕಿದೆ. ಇಲ್ಲಿನ ಮತದಾರರು ಜಿದ್ದಾಜಿದ್ದಿನ ಹೋರಾಟವನ್ನು ಕಂಡಿಲ್ಲ. ಇಲ್ಲಿ ಎಡರಂಗದ್ದು ಏಕಪಕ್ಷೀಯ ಗೆಲುವು ಆಗಿತ್ತು.

ಮಾಜಿ ಮುಖ್ಯಮಂತ್ರಿ ಇ.ಕೆ. ನಾಯನಾರ್‌ ಎರಡು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಾಧನೆ ಮಾಡಿದ್ದಾರೆ. 1939ರಲ್ಲಿ ಕೊಡಕ್ಕಾಡ್‌ನ‌ಲ್ಲಿ ಆಯೋಜಿಸಿದ ಕೃಷಿಕರ ಮಹಾ ಅಧಿವೇಶನ, ಪಂಕ್ತಿ ಭೋಜನ, ಭೂಸಮರ ಮೊದಲಾದ ಹೋರಾಟಗಳಿಗೆ ಸಾಕ್ಷಿಯಾದ ಪ್ರದೇಶವಾಗಿದೆ. ಇದು ಎಡರಂಗವನ್ನು ಭದ್ರಗೊಳಿಸಲು ಪ್ರಮುಖ ಕಾರಣವಾಯಿತು.

ತೃಕ್ಕರಿಪುರ, ಪಡನ್ನ, ವಲಿಯಪರಂಬ, ಪಿಲಿಕ್ಕೋಡು, ಚೆರ್ವತ್ತೂರು, ವೆಸ್ಟ್‌ ಎಳೇರಿ, ಈಸ್ಟ್‌ ಎಳೇರಿ, ಚೀಮೇನಿ ಗ್ರಾಮ ಪಂಚಾಯತ್‌ಗಳು ಮತ್ತು ನೀಲೇಶ್ವರ ನಗರಸಭೆ ಒಳಗೊಂಡಿರುವ ಕ್ಷೇತ್ರವಾಗಿದೆ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ. ನೀಲೇಶ್ವರ ನಗರಸಭೆ, ಕಯ್ಯೂರು-ಚೀಮೇನಿ, ಚೆರ್ವತ್ತೂರು, ಪಿಲಿಕ್ಕೋಡು, ವೆಸ್ಟ್‌ ಎಳೇರಿ ಪಂಚಾಯತ್‌ಗಳಲ್ಲಿ ಎಡರಂಗ ಆಡಳಿತವಿದೆ. ತೃಕ್ಕರಿಪುರ, ವಲಿಯಪರಂಬ, ಪಡನ್ನ ಪಂಚಾಯತ್‌ಗಳಲ್ಲಿ ಯುಡಿಎಫ್‌ ಅಡಳಿತವಿದೆ. ಈಸ್ಟ್‌ ಎಳೇರಿ ಗ್ರಾಮ ಪಂಚಾಯತ್‌ ಯುಡಿಎಫ್‌ ಭಿನ್ನಮತೀಯ ಡಿ.ಡಿ.ಎಫ್‌. ಆಡಳಿತದಲ್ಲಿದೆ.

1977, 1980ರಲ್ಲಿ ಪಿ. ಕರುಣಾರನ್‌, 1982 ರಲ್ಲಿ ಒ.ಭರತನ್‌, 1987ರಲ್ಲಿ ಮತ್ತು 91ರಲ್ಲಿ ಇ.ಕೆ. ನಾಯನಾರ್‌, 1996 ಮತ್ತು 2001ರಲ್ಲಿ ಕೆ.ಪಿ. ಸತೀಶ್ಚಂದ್ರನ್‌, 2006 ಮತ್ತು 2011ರಲ್ಲಿ ಕೆ. ಕುಂಞಿರಾಮನ್‌ ಗೆಲುವು ಸಾಧಿಸಿದ್ದರು. 2016 ರಿಂದ ಎಂ.ರಾಜಗೋಪಾಲನ್‌ ಶಾಸಕರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎಲ್‌ಡಿಎಫ್‌ 3,516 ಮತಗಳ ಮುನ್ನಡೆಗಳಿಸಿತ್ತು. 2016ರ ವಿಧಾನಸಭಾ ಚುನಾವಣೆಯಲ್ಲಿ ಅದು 16,959ಕ್ಕೇರಿತು. ಒಟ್ಟು ಮತದಾನದ ಪೈಕಿ ಶೇ. 51ರಷ್ಟು ಮತವನ್ನು ಎಲ್‌ಡಿಎಫ್‌ ಪಡೆದಿತ್ತು.

ವಲಿಯಪರಂಬ, ಪಡನ್ನ, ವೆಸ್ಟ್‌ ಎಳೇರಿ ಪಂಚಾಯತ್‌ಗಳಲ್ಲಿ ಯುಡಿಎಫ್‌ಗೆ ಕನಿಷ್ಠ ಮುನ್ನಡೆಯನ್ನು ತಂದು ಕೊಟ್ಟಿದ್ದರೆ, ಕಯ್ಯೂರು-ಚೀಮೇನಿ, ಚೆರ್ವತ್ತೂರು ಗ್ರಾಮ ಪಂಚಾಯತ್‌ ಮತ್ತು ನೀಲೇಶ್ವರ ನಗರಸಭೆಯಲ್ಲಿ ಎಲ್‌ಡಿಎಫ್‌ ಭಾರೀ ಅಂತರದ ಮುನ್ನಡೆಯನ್ನು ಸಾಧಿಸಿತ್ತು. ಈಸ್ಟ್‌ ಎಳೇರಿ, ತೃಕ್ಕರಿಪುರ ಪಂಚಾಯತ್‌ಗಳಲ್ಲಿ ಯುಡಿಎಫ್‌ ಮೇಲುಗೈ ಸಾಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 1,78,329 ಮಂದಿ ಮತದಾರರಿದ್ದರು. ಸಿಪಿಎಂನ ಪಿ.ಕರುಣಾಕರನ್‌ 65,452 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಟಿ.ಸಿದ್ದಿಕ್‌ 62,001 ಮತಗಳನ್ನು ಪಡೆದಿದ್ದರು. ಬಿಜೆಪಿಯ ಕೆ.ಸುರೇಂದ್ರನ್‌ 12,990 ಮತಗಳನ್ನು ಪಡೆದಿದ್ದರು.

2016ರ ವಿಧಾನಸಭಾ ಚುನಾವಣೆಯಲ್ಲಿ 1,90,119 ಮತದಾರರಿದ್ದರು. ಎಲ್‌ಡಿಎಫ್‌ನ ಎಂ. ರಾಜಗೋಪಾಲನ್‌ 79,286 ಮತಗಳನ್ನು ಪಡೆದಿ ದ್ದರೆ, ಯುಡಿಎಫ್‌ನ ಕೆ.ಪಿ.ಕುಂಞಿಕಣ್ಣನ್‌ 62,327 ಮತಗಳನ್ನು ಪಡೆದಿದ್ದರು. ಎನ್‌ಡಿಎ ಅಭ್ಯರ್ಥಿ ಎಂ.ಭಾಸ್ಕರನ್‌ 10,767 ಮತಗಳನ್ನು ಪಡೆದಿದ್ದರು. ಈ ಬಾರಿ ಮತದಾರರ ಸಂಖ್ಯೆ 1,93,143ಕ್ಕೇರಿದೆ. ಎಲ್‌ಡಿಎಫ್‌ನ ಭದ್ರ ಕೋಟೆಯಾಗಿರುವ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ದಲ್ಲಿ ಬದಲಾವಣೆಯ ಗಾಳಿ ಬೀಸಿತೇ ಎಂಬುದು ಡಾಲರ್‌ ಪ್ರಶ್ನೆಯಾಗಿದೆ. ಈ ಕ್ಷೇತ್ರದಿಂದ ಮುನ್ನಡೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಎಲ್‌ಡಿಎಫ್‌ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ ಹೇಳುತ್ತಿದ್ದರೆ, ಯುಡಿಎಫ್‌ ಮುನ್ನಡೆ ಸಾಧಿಸಲಿದೆ ಎಂದು ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ಮ ಈ ಕ್ಷೇತ್ರದಲ್ಲಿ ಅಚ್ಚರಿಯ ಮುನ್ನಡೆಯನ್ನು ಸಾಧಿಸಲಿದೆ ಎಂದು ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ತುಂಬು ಭರವಸೆಯಲ್ಲಿದ್ದಾರೆ.

ಪಂಚಾಯತ್‌ಗಳ ವಾರ್ಡ್‌ಗಳ ಅಂಕಿಅಂಶ
ವಲಿಯಪರಂಬ : ಯುಡಿಎಫ್‌-1, ಎಲ್‌ಡಿಎಫ್‌-6
ತೃಕ್ಕರಿಪುರ : ಯುಡಿಎಫ್‌-16, ಎಲ್‌ಡಿಎಫ್‌-5, ಎಲ್‌ಜೆಡಿ-1
ಪಿಲಿಕ್ಕೋಡು : ಎಲ್‌ಡಿಎಫ್‌-15,  ಯುಡಿಎಫ್‌-1
ಪಡನ್ನ : ಯುಡಿಎಫ್‌-9, ಎಲ್‌ಡಿಎಫ್‌-6
ಚೆರ್ವತ್ತೂರು : ಎಲ್‌ಡಿಎಫ್‌-12, ಯುಡಿಎಫ್‌-4, ಸ್ವತಂತ್ರ-1
ಕಯ್ನಾರು-ಚೀಮೇನಿ : ಎಲ್‌ಡಿಎಫ್‌-15, ಯುಡಿಎಫ್‌-1
ನೀಲೇಶ್ವರ : ಎಲ್‌ಡಿಎಫ್‌-19, ಯುಡಿಎಫ್‌-13
ಈಸ್ಟ್‌ ಎಳೇರಿ : ಡಿ.ಡಿ.ಎಫ್‌-10, ಕೇರಳ ಕಾಂಗ್ರೆಸ್‌-1, ಎಲ್‌ಡಿಎಫ್‌-4
ವೆಸ್ಟ್‌ ಎಳೇರಿ : ಎಲ್‌ಡಿಎಫ್‌-11, ಯುಡಿಎಫ್‌-7

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.