ಲಾಕ್ಡೌನ್: ವೀಡಿಯೋ ಕಾಲ್ ಮೂಲಕ ನಡೆಯಿತು ವೈಕುಂಠ ಸಮಾರಾಧನೆ!
Team Udayavani, Mar 29, 2020, 9:56 AM IST
ಕಾಸರಗೋಡು: ಕೋವಿಡ್ 19 ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿರುವ ಕಾರಣ ವ್ಯಕ್ತಿಯೊಬ್ಬರ ವೈಕುಂಠ ಸಮಾರಾಧನೆಯನ್ನು ವೀಡಿಯೋ ಕಾಲ್ ಮೂಲಕ ಮಾಡಿರುವ ಘಟನೆ ನಡೆದಿದೆ.
ನೆಟ್ಟಣಿಗೆಯ ಕೈಪಂಗಳದ ಉದಯ ಶಂಕರ ಭಟ್ (64) ಅವರ ವೈಕುಂಠ ಸಮಾರಾಧನೆ ಮಾ. 27ರಂದು ಸ್ವಗೃಹದಲ್ಲಿ ನಡೆಯಿತು. ಲಾಕ್ಡೌನ್ ಕಾರಣ ವೈದಿಕ ವಿಧಿಗಳನ್ನು ಪೂರೈಸಲು ಈ ಹಿಂದೆ ಒಪ್ಪಿದವರಿಗೆ ಬರಲು ಸಾಧ್ಯವಾಗಲಿಲ್ಲ. ಉತ್ತರಕ್ರಿಯೆ ಅನಿವಾರ್ಯ ವಿಧಿಯಾಗಿರುವ ಕಾರಣ ಪುತ್ತೂರು ಕುಂಬ್ರದ ಪಟ್ಲಮೂಲೆ ಮನೆಯ ವೇ|ಮೂ| ಕೆ. ಕೃಷ್ಣ ಕುಮಾರ್ ಉಪಾಧ್ಯಾಯ ಅವರು ವೀಡಿಯೋ ಕಾಲ್ ಮೂಲಕ ಕ್ರಮಗಳ ಮಾಹಿತಿ ನೀಡಿದರು. ಉದಯ ಶಂಕರ ಭಟ್ಟರ ಪುತ್ರ ನಟರಾಜ ಭಟ್ ಅವರು ಸದ್ಗತಿ ಕ್ರಿಯೆಗಳನ್ನು ಪೂರೈಸಿದರು. ಕಾರ್ಯಕ್ರಮದಲ್ಲಿ ಮನೆಯವರು ಮಾತ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ