ಲೋಕಸಭಾ ಚುನಾವಣೆ ಮತ ಎಣಿಕೆ ಅಧಿಕಾರಿಗಳಿಗೆ ಪ್ರಾಯೋಗಿಕ ತರಬೇತಿ ಶಿಬಿರ
Team Udayavani, May 19, 2019, 6:10 AM IST
ಕಾಸರಗೋಡು: ಲೋಕಸಭಾ ಚುನಾವಣೆ ಸಂಬಂಧ ಮತ ಎಣಿಕೆ ಅಧಿಕಾರಿಗಳಿಗೆ ಪ್ರಾಯೋಗಿಕ ತರಬೇತಿ ಶಿಬಿರ ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ತೃಕ್ಕರಿಪುರದ ತಾಲೂಕು ಅಧಿಕಾರಿ, ಡೆಪ್ಯೂಟಿ ಕಲೆಕ್ಟರ್ ವಿ.ಆರ್.ರಾಧಿಕಾ ಅಧ್ಯಕ್ಷತೆ ವಹಿಸಿದ್ದರು.
ಇಲೆಕ್ಟೊÅàನಿಕ್ ಮತ ಯಂತ್ರ, ವಿವಿ ಪ್ಯಾಟ್ಗಳನ್ನು ಕಾರ್ಯಾಗಾರದಲ್ಲಿ ತರಬೇತಿಯ ಸಮಗ್ರ ಗ್ರಹಿಕೆಗಾಗಿ ವ್ಯವಸ್ಥೆಗೊಳಿಸಲಾಗಿತ್ತು. ಪ್ರಾಯೋಗಿಕ ತರಬೇತಿಯ ಬಳಿಕ ಮೌಖೀಕವಾಗಿ ಸಂಶಯಗಳ ನಿವಾರಣೆಗಳನ್ನು ಅಧಿಕೃತರು ನೀಡಿದರು. ತರಬೇತಿ ನೋಡಲ್ ಅಧಿಕಾರಿ ಕೆ.ವಿನೋದ್ ಕುಮಾರ್ ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ಮತ ಎಣಿಕಾ ಮೇಲ್ವಿಚಾರಕರು, ಸಹಾಯಕ ಮತ ಎಣಿಕಾ ಅಧಿಕಾರಿಗಳಿಗೆ ಈ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. 207 ಮಂದಿ ಭಾಗವಹಿಸಿದ್ದರು. ಮೂರನೇ ಹಂತದ ಕಾರ್ಯಾಗಾರದಲ್ಲಿ 103 ಮಂದಿ ಭಾಗವಹಿಸಿದರು. ಜೊತೆಗೆ ಮತ ಎಣಿಕೆಗೆ ಸಜ್ಜುಗೊಳಿಸಿರುವ 155 ಮಂದಿ ಮೈಕ್ರೋ ವೀಕ್ಷಕರಿಗೆ ಮೇ 21 ರಂದು ತರಬೇತಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ