ಗ್ರಾಮ ಕಚೇರಿಗಳಲ್ಲಿ ಕೆಟ್ಟುಹೋಗಿರುವ  ಧ್ವನಿವರ್ಧಕಗಳು !


Team Udayavani, Sep 22, 2018, 6:35 AM IST

21-kbl-1.jpg

ಕುಂಬಳೆ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಕಂದಾಯ ಗ್ರಾಮ ಕಚೇರಿಗಳ ಮುಂದೆ ಮೈಕ್‌ ಅಳವಡಿಸಿರುವುದನ್ನು ಕಾಣಬಹುದು. ಯಾವುದೇ ಸಭೆ ಸಮಾರಂಭಕ್ಕಾಗಿ ಇದನ್ನು ಅಳವಡಿಸಲಾಗಿಲ್ಲ. 2004 ಡಿಸೆಂಬರ್‌ 26ರಂದು ಕೇರಳ,ತಮಿಳ್ನಾಡು,ಆಂದ್ರ ಪ್ರದೇಶಗಳಿಗೆ ಅಪ್ಪಳಿಸಿದ ಸುನಾಮಿಯ ಭೀಕರ ದುರಂತದ ಬಳಿಕ ರಾಜ್ಯದ ಕರಾವಳಿಯಲ್ಲಿರುವ ವಿಲೇಜ್‌ ಆಫೀಸ್‌ಗಳ ಮುಂದೆ ಸರಕಾರದ ವತಿಯಿಂದ ಮೈಕ್‌ಗಳನ್ನು ಅಳವಡಿಸಲಾಗಿದೆ. ಸುನಾಮಿಯ ಸಂಭಾವ್ಯ ದುರಂತದ ಮುಂಜಾಗ್ರತಾ ಸಂದೇಶವನ್ನು 2 ಕಿ.ಮೀ.ಸುತ್ತಳತೆಯ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ತಿಳಿಸುವ ಯೋಜನೆಯಲ್ಲಿ ಈ ಮೈಕ್‌ಗಳನ್ನು ಅಳವಡಿಸದಾಗಿದೆ.

ಸರಕಾರದ ಅರ್ಲಿ ವಾರ್ನಿಂಗ್‌ ಸಿಸ್ಟಮ್‌ ಯೋಜನೆಯಡಿ ಮಂಜೇಶ್ವರ ತಾಲೂಕು ಕಚೇರಿಯ ಅಧೀನದ ಕುಂಜತ್ತೂರು,ಹೊಸಬೆಟ್ಟು,ಉಪ್ಪಳ,ಇಚ್ಲಂಗೋಡು,ಬಂಬ್ರಾಣ,ಕೊಯಿಪ್ಪಾಡಿ ಗ್ರೂಪ್‌ನ ಆರು ಗ್ರಾಮ ಕಚೇರಿಗಳಲ್ಲಿ ಮೈಕ್‌ಗಳನ್ನು ಅಳವಡಿಸಲಾಗಿದೆ.ಅದೇ ರೀತಿ ರಾಜ್ಯದ ಕರಾವಳಿ ಪ್ರದೇಶದ ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಲಾಗಿದೆ.ಆದರೆ ದೇವರ ದಯದಿಂದ ಮೈಕ್‌ ಅಳವಡಿಸಿದ ಬಳಿಕ ಸುನಾಮಿ ಅಪ್ಪಳಿಸಿಲ್ಲ.ಆದರೆ ಈ ಬೆಲೆ ಬಾಳುವ ಮೈಕ್‌ ಸೆಟ್‌ಗಳನ್ನು ಕೇಳುವವರಿಲ್ಲದೆ ಅನಾಥವಾಗಿದೆ. ಕೆಲವು ಕಚೇರಿಯ ಮೈಕ್‌ಗಳು ಕಾಣದಂತೆ ಮಾಯವಾಗಿದೆ.ಉಳಿದ ಧ್ವನಿವರ್ಧಕಗಳು ತುಕ್ಕು ಹಿಡಿದು ಉಪಯೋಗ ಶೂನ್ಯವಾಗಿದೆ.ಸ್ಥಾಪಿಸಿದ ಬಳಿಕ ಮೈಕ್‌ ಸೆಟ್ಟಿನ ಸರ್ವೀಸ್‌ ನಡೆಸಲಾಗಲಿ ಅಳಿದಿದೆಯೋ ಉಳಿದಿದೆಯೋ ಎಂಬುದಾಗಿ ಈ ತನಕ ಯಾರೂ ವಿಚಾರಿಸಿಲ್ಲ ವೆನ್ನುತ್ತಾರೆ ಗ್ರಾಮ ಕಚೇರಿಯ ನೌಕಕರು.

ಇದರಿಂದ ಗ್ರಾಮ ಕಚೇರಿಯ 2.ಕಿ.ಮೀ.ದೂರಕ್ಕೆ ದುರಂತದ ಸಂದೇಶ ಶಬ್ದ ಕೇಳಲು ಸಾಧ್ಯವೇ ? ತಾಂತ್ರಿಕರಿಲ್ಲದೆ ಇದರ ನಿರ್ವಹಣೆ ಹೇಗೆ ಸಾಧ್ಯ?ನೆ ಎಂಬ ಅಭಿಪ್ರಾಯ ಕೆಲವು ಕಂದಾಯ ಉದೋÂಗಿಗಳದ್ದು.     

ಮಾಹಿತಿ ಇಲ್ಲ
ಗ್ರಾಮ ಕಚೇರಿಗಳಲ್ಲಿ ಮೈಕ್‌ ಅಳವಡಿಸಿದ ಬಳಿಕ ಇದರ ಕುರಿತು ಯಾರೂ ವಿಚಾರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಕಡತಗಳು ಇರುವುದರಿಂದ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಇಲ್ಲ ಎಂದು ಮಂಜೇಶ್ವರ ತಾಲೂಕು ಕಚೇರಿಯ ಪೃಕೃತಿ ವಿಕೋಪ ನಿಗ್ರಹ ವಿಭಾಗದ ಉದೋÂಗಿ ಅನಸ್‌ ಹೇಳಿದರು.

ನಿರ್ವಹಣೆ ತರಗತಿಗೆ ವಿಘ್ನ
2010ರ  ಮೇ 22 ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಕಚೇರಿಗಳ ಕೆಲವು ನೌಕರರನ್ನು ಮೈಕ್‌ಗಳ ತಾಂತ್ರಿಕ ನಿರ್ವಹಣೆಯ ತರಗತಿಗಾಗಿ ಕರೆದಿದ್ದರಂತೆ.ಆ ದಿನ ಮಂಗಳೂರು ಕೆಂಜಾರಿನಲ್ಲಿ ವಿಮಾನ ದುರಂತ ನಡೆದು ಪರಿಹಾರಕ್ಕೆ ತತ್‌ಕ್ಷಣ ತೆರಳುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದರಂತೆ.ತರಗತಿಗೆ ಆಗಮಿಸಿದ ಹೆಚ್ಚಿನವರೆಲ್ಲರೂ ಮಂಗಳೂರಿಗೆ ಅನಿವಾರ್ಯವಾಗಿ ತೆರಳಬೇಕಾಯಿತು. ಬಳಿಕ ಈ ತನಕ ತರಗತಿ ನಡೆದಿಲ್ಲ  
– ದೇವದಾಸ
ಸಹಾಯಕ ತಹಶಿಲ್ದಾರ್‌ ,ಮಂಜೇಶ್ವರ ತಾಲೂಕು ಹೆಡ್‌ಕಾÌರ್ಟರ್

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.