ಗ್ರಾಮ ಕಚೇರಿಗಳಲ್ಲಿ ಕೆಟ್ಟುಹೋಗಿರುವ ಧ್ವನಿವರ್ಧಕಗಳು !
Team Udayavani, Sep 22, 2018, 6:35 AM IST
ಕುಂಬಳೆ: ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶದ ಕಂದಾಯ ಗ್ರಾಮ ಕಚೇರಿಗಳ ಮುಂದೆ ಮೈಕ್ ಅಳವಡಿಸಿರುವುದನ್ನು ಕಾಣಬಹುದು. ಯಾವುದೇ ಸಭೆ ಸಮಾರಂಭಕ್ಕಾಗಿ ಇದನ್ನು ಅಳವಡಿಸಲಾಗಿಲ್ಲ. 2004 ಡಿಸೆಂಬರ್ 26ರಂದು ಕೇರಳ,ತಮಿಳ್ನಾಡು,ಆಂದ್ರ ಪ್ರದೇಶಗಳಿಗೆ ಅಪ್ಪಳಿಸಿದ ಸುನಾಮಿಯ ಭೀಕರ ದುರಂತದ ಬಳಿಕ ರಾಜ್ಯದ ಕರಾವಳಿಯಲ್ಲಿರುವ ವಿಲೇಜ್ ಆಫೀಸ್ಗಳ ಮುಂದೆ ಸರಕಾರದ ವತಿಯಿಂದ ಮೈಕ್ಗಳನ್ನು ಅಳವಡಿಸಲಾಗಿದೆ. ಸುನಾಮಿಯ ಸಂಭಾವ್ಯ ದುರಂತದ ಮುಂಜಾಗ್ರತಾ ಸಂದೇಶವನ್ನು 2 ಕಿ.ಮೀ.ಸುತ್ತಳತೆಯ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ತಿಳಿಸುವ ಯೋಜನೆಯಲ್ಲಿ ಈ ಮೈಕ್ಗಳನ್ನು ಅಳವಡಿಸದಾಗಿದೆ.
ಸರಕಾರದ ಅರ್ಲಿ ವಾರ್ನಿಂಗ್ ಸಿಸ್ಟಮ್ ಯೋಜನೆಯಡಿ ಮಂಜೇಶ್ವರ ತಾಲೂಕು ಕಚೇರಿಯ ಅಧೀನದ ಕುಂಜತ್ತೂರು,ಹೊಸಬೆಟ್ಟು,ಉಪ್ಪಳ,ಇಚ್ಲಂಗೋಡು,ಬಂಬ್ರಾಣ,ಕೊಯಿಪ್ಪಾಡಿ ಗ್ರೂಪ್ನ ಆರು ಗ್ರಾಮ ಕಚೇರಿಗಳಲ್ಲಿ ಮೈಕ್ಗಳನ್ನು ಅಳವಡಿಸಲಾಗಿದೆ.ಅದೇ ರೀತಿ ರಾಜ್ಯದ ಕರಾವಳಿ ಪ್ರದೇಶದ ಗ್ರಾಮ ಕಚೇರಿಗಳಲ್ಲಿ ಮೈಕ್ ಅಳವಡಿಸಲಾಗಿದೆ.ಆದರೆ ದೇವರ ದಯದಿಂದ ಮೈಕ್ ಅಳವಡಿಸಿದ ಬಳಿಕ ಸುನಾಮಿ ಅಪ್ಪಳಿಸಿಲ್ಲ.ಆದರೆ ಈ ಬೆಲೆ ಬಾಳುವ ಮೈಕ್ ಸೆಟ್ಗಳನ್ನು ಕೇಳುವವರಿಲ್ಲದೆ ಅನಾಥವಾಗಿದೆ. ಕೆಲವು ಕಚೇರಿಯ ಮೈಕ್ಗಳು ಕಾಣದಂತೆ ಮಾಯವಾಗಿದೆ.ಉಳಿದ ಧ್ವನಿವರ್ಧಕಗಳು ತುಕ್ಕು ಹಿಡಿದು ಉಪಯೋಗ ಶೂನ್ಯವಾಗಿದೆ.ಸ್ಥಾಪಿಸಿದ ಬಳಿಕ ಮೈಕ್ ಸೆಟ್ಟಿನ ಸರ್ವೀಸ್ ನಡೆಸಲಾಗಲಿ ಅಳಿದಿದೆಯೋ ಉಳಿದಿದೆಯೋ ಎಂಬುದಾಗಿ ಈ ತನಕ ಯಾರೂ ವಿಚಾರಿಸಿಲ್ಲ ವೆನ್ನುತ್ತಾರೆ ಗ್ರಾಮ ಕಚೇರಿಯ ನೌಕಕರು.
ಇದರಿಂದ ಗ್ರಾಮ ಕಚೇರಿಯ 2.ಕಿ.ಮೀ.ದೂರಕ್ಕೆ ದುರಂತದ ಸಂದೇಶ ಶಬ್ದ ಕೇಳಲು ಸಾಧ್ಯವೇ ? ತಾಂತ್ರಿಕರಿಲ್ಲದೆ ಇದರ ನಿರ್ವಹಣೆ ಹೇಗೆ ಸಾಧ್ಯ?ನೆ ಎಂಬ ಅಭಿಪ್ರಾಯ ಕೆಲವು ಕಂದಾಯ ಉದೋÂಗಿಗಳದ್ದು.
ಮಾಹಿತಿ ಇಲ್ಲ
ಗ್ರಾಮ ಕಚೇರಿಗಳಲ್ಲಿ ಮೈಕ್ ಅಳವಡಿಸಿದ ಬಳಿಕ ಇದರ ಕುರಿತು ಯಾರೂ ವಿಚಾರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಕಡತಗಳು ಇರುವುದರಿಂದ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಇಲ್ಲ ಎಂದು ಮಂಜೇಶ್ವರ ತಾಲೂಕು ಕಚೇರಿಯ ಪೃಕೃತಿ ವಿಕೋಪ ನಿಗ್ರಹ ವಿಭಾಗದ ಉದೋÂಗಿ ಅನಸ್ ಹೇಳಿದರು.
ನಿರ್ವಹಣೆ ತರಗತಿಗೆ ವಿಘ್ನ
2010ರ ಮೇ 22 ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಕಚೇರಿಗಳ ಕೆಲವು ನೌಕರರನ್ನು ಮೈಕ್ಗಳ ತಾಂತ್ರಿಕ ನಿರ್ವಹಣೆಯ ತರಗತಿಗಾಗಿ ಕರೆದಿದ್ದರಂತೆ.ಆ ದಿನ ಮಂಗಳೂರು ಕೆಂಜಾರಿನಲ್ಲಿ ವಿಮಾನ ದುರಂತ ನಡೆದು ಪರಿಹಾರಕ್ಕೆ ತತ್ಕ್ಷಣ ತೆರಳುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದರಂತೆ.ತರಗತಿಗೆ ಆಗಮಿಸಿದ ಹೆಚ್ಚಿನವರೆಲ್ಲರೂ ಮಂಗಳೂರಿಗೆ ಅನಿವಾರ್ಯವಾಗಿ ತೆರಳಬೇಕಾಯಿತು. ಬಳಿಕ ಈ ತನಕ ತರಗತಿ ನಡೆದಿಲ್ಲ
– ದೇವದಾಸ
ಸಹಾಯಕ ತಹಶಿಲ್ದಾರ್ ,ಮಂಜೇಶ್ವರ ತಾಲೂಕು ಹೆಡ್ಕಾÌರ್ಟರ್