ಮಂಜೇಶ್ವರ: ಐಕ್ಯರಂಗ ಅಭ್ಯರ್ಥಿ ಪರ ಪಾದಯಾತ್ರೆ
ಪುತ್ತಿಗೆ ಪಂಚಾಯತ್ ಪ್ರದೇಶದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಮತ ಯಾಚನೆ
Team Udayavani, Mar 31, 2021, 11:41 AM IST
ಮಂಜೇಶ್ವರ: ಐಕ್ಯರಂಗ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರ ಚುನಾವಣಾ ಪ್ರಚಾರಾರ್ಥ ಮಂಜೇಶ್ವರ ಪಂಚಾಯತ್ ಯುಡಿಎಫ್ ಸಮಿತಿ ನೇತೃತ್ವದಲ್ಲಿ ಕುಂಜತ್ತೂರು ತೂಮಿನಾಡಿನಿಂದ ಹೊಸಂಗಡಿ ಪೇಟೆಗೆ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯನ್ನು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆರಿಲ್ ರೇಗೋ ಉದ್ಘಾಟಿಸಿದರು. ಹೊಸಂಗಡಿ ಪೇಟೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಮುಸ್ಲಿಂ ಯೂತ್ ಲೀಗ್ ರಾಜ್ಯಾಧ್ಯಕ್ಷ ಸೈಯ್ಯದ್ ಪಾಣಕ್ಕಾಡ್ ಮುನ್ವರಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾದ್, ಯೂತ್ ಲೀಗ್ ಮುಖಂಡರಾದ ಮುಕ್ತಾರ್ ಉದ್ಯಾವರ, ಸಿದ್ದೀಕ್ ಮಂಜೇಶ್ವರ, ಇರ್ಷಾದ್ ಮಂಜೇಶ್ವರ, ನಾಗೇಶ್ ಕೃಷ್ಣ ಅಡ್ಕಕೊಚ್ಚಿ, ಸಮೀರ್, ಮುಸ್ತಫ ಉದ್ಯಾವರ, ಯು.ಕೆ.ಸೈಫುಲ್ಲಾ ತಂಙಳ್, ಲಕ್ಷ್ಮಣ್, ಅಶ್ರಫ್ ಎಡನೀರು, ಅಜೀಜ್ ಹಾಜ, ಎಂ.ಎ.ಖಾಲಿದ್ ಉಪಸ್ಥಿತರಿದ್ದರು.