ಆದರ್ಶ ಮೆರೆದ ಮುಸ್ಲಿಂ ದಂಪತಿ

ಹಿಂದೂ ಸಂಪ್ರದಾಯದಂತೆ ಸಾಕುಪುತ್ರಿಗೆ ವಿವಾಹ

Team Udayavani, Feb 18, 2020, 7:00 AM IST

madve

ಅಬ್ದುಲ್ಲ - ಖದೀಜಾ ದಂಪತಿ ಅವರು ಹಿಂದೂ ಸಂಪ್ರದಾಯದಂತೆ ಸಾಕುಪುತ್ರಿಯ ವಿವಾಹ ನೆರವೇರಿಸಿದರು.

ಕಾಸರಗೋಡು: ಸುಮಾರು 10ರ ಹರೆಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥೆಯಾದ ಹಿಂದೂ ಧರ್ಮದ ಬಾಲಕಿಯೊಬ್ಬಳನ್ನು ಸಲಹಿದ ಅಬ್ದುಲ್ಲ ಮತ್ತು ಖದೀಜಾ ದಂಪತಿ ಆಕೆಗೆ 22 ವರ್ಷ ಪೂರ್ತಿಯಾದಾಗ ಹಿಂದೂ ಧರ್ಮದ ಸಂಪ್ರದಾಯದಂತೆ ಹಿಂದೂ ಯುವಕನೊಂದಿಗೆ ವಿವಾಹ ಮಾಡಿಕೊಟ್ಟು ಆದರ್ಶ ಮೆರೆದಿದ್ದಾರೆ.

ಶ್ರೀ ಭಗವತಿಯ ನಡೆಯಲ್ಲಿ ಕಾಂಞಂಗಾಡ್‌ನ‌ ಪುದಿಯ ಕೋಟೆ (ಹೊಸದುರ್ಗ)ಯ ಬಾಲಚಂದ್ರನ್‌-ಜಯಂತಿಯ ಪುತ್ರ ವಿಷ್ಣು ಪ್ರಸಾದ್‌ ಮೇಲ್ಪರಂಬದ ಶಮೀಂ ಮಂಜಿಲ್‌ನ ರಾಜೇಶ್ವರಿಯ ಕುತ್ತಿಗೆಗೆ ತಾಳಿ ಕಟ್ಟಿದಾಗ ಅಬ್ದುಲ್ಲ-ಖದೀಜಾ ದಂಪತಿ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಸಂದರ್ಭ ವಧುವಿನ ಇತರ ಮುಸ್ಲಿಂ ಸಹೋದರರೂ ಉಪಸ್ಥಿತರಿದ್ದರು.

ತಂಜಾವೂರಿನ ಬಾಲಕಿ
ಅಬ್ದುಲ್ಲ-ಖದೀಜಾ ದಂಪತಿಯ ಸಾಕು ಪುತ್ರಿ ತಂಜಾವೂರು ನಿವಾಸಿ ಯಾದ ರಾಜೇಶ್ವರಿ 7-8 ವರ್ಷ ಪ್ರಾಯವಿದ್ದಾಗ ಇಲ್ಲಿಗೆ ಬಂದಿದ್ದಳು. ಆಕೆಗೆ 10 ವರ್ಷವಾದಾಗ ತಂದೆ- ತಾಯಿ ನಿಧನ ಹೊಂದಿದ್ದರು. ತಂದೆ ಶರವಣನ್‌ ಕಾಸರಗೋಡಿನಲ್ಲೂ, ಮೇಲ್ಪರಂಬದಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದ್ದರು. ಹಲವು ವರ್ಷ ಅಬ್ದುಲ್ಲ ಅವರ ಕಾಂಞಂಗಾಡ್‌ನ‌ ಕುನ್ನರಿಯದಲ್ಲಿರುವ ಕೃಷಿ ಭೂಮಿ ಯಲ್ಲಿ ಕೆಲಸ ಮಾಡಿದ್ದರು. ಹೀಗೆ ಅಬ್ದುಲ್ಲ ಅವರ ಮನೆಯನ್ನು ಸೇರಿ ಕೊಂಡ ರಾಜೇಶ್ವರಿ ಅಬ್ದುಲ್ಲ ಅವರ ಮಕ್ಕಳಾದ ಶಮೀಮ್‌, ನಜೀಬ್‌, ಶರೀಫ್‌ ಅವರ ಸಹೋದರಿಯಾಗಿ ಬೆಳೆದಳು.

ಇತ್ತೀಚೆಗೆ ಅದೇ ಊರಿನ ವಿಷ್ಣು ಪ್ರಸಾದ್‌ ಅವರ ಹೆತ್ತವರು ತಮ್ಮ ಪುತ್ರನಿಗೆ ರಾಜೇಶ್ವರಿಯನ್ನು ವಿವಾಹ ಮಾಡಿ ಕೊಡುವಂತೆ ಪ್ರಸ್ತಾವ ಮಾಡಿದ್ದರು.  ವಿವಾಹವನ್ನು ಹಿಂದೂ ಕ್ಷೇತ್ರದಲ್ಲಿ ನೆರವೇರಿಸಿ ಕೊಡಬೇಕೆಂದು ಕೇಳಿ ಕೊಂಡಿದ್ದರಿಂದ ಎಲ್ಲ ಧರ್ಮದವರೂ ಪ್ರವೇಶಿಸಬಹುದಾದ ಕಾಂಞಂಗಾಡ್‌ಮನ್ಯೋಟ್ಟು ಕ್ಷೇತ್ರ ದಲ್ಲಿ ವಿವಾಹ ಮಾಡಲು ತೀರ್ಮಾನಿಸಲಾಯಿತು.

ರವಿವಾರ ಬೆಳಗ್ಗೆ ನಡೆದ ವಿವಾಹ ಸಮಾರಂಭದಲ್ಲಿ ಅಬ್ದುಲ್ಲ ಅವರ ತಾಯಿ 84ರ ಹರೆಯದ ಸಫೀಯುಮ್ಮ ಸಹಿತ ಬಂಧು ಮಿತ್ರರು ಭಾಗವಹಿಸಿದ್ದರು. ಕಾಂಞಂಗಾಡ್‌ ನಗರಸಭಾ ಕೌನ್ಸಿಲರ್‌ ಎಚ್‌.ಆರ್‌. ಶ್ರೀಧರನ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್‌ ಮೊದಲಾದವರು ಉಪಸ್ಥಿತರಿದ್ದರು.

ವಿವಾಹ ಸಮಾರಂಭ ನಡೆಯು ತ್ತಿದ್ದಾಗ ದೂರ ಉಳಿದಿದ್ದ ಅಬ್ದುಲ್ಲ, ಸಹೋದರ ಮುತ್ತಲಿಬ್‌, ಪತ್ನಿಯ ಸಹೋದರ ಬಶೀರ್‌ ಕುನ್ನರಿಯತ್‌ ಅವರನ್ನು ವರನ ಮನೆಯವರು ಕೈಹಿಡಿದು ಮಂಟಪದ ಕಡೆ ಕರೆತಂದರು.

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.