ಕ್ಯಾನ್ಸರ್‌ ಪೀಡಿತೆಗೆ ಸಂಘಟನೆಗಳಿಂದ ಧನಸಹಾಯ


Team Udayavani, Nov 5, 2018, 3:55 AM IST

medical-help-4-11.jpg

ಮಂಜೇಶ್ವರ: ಮೀಟಿಂಗ್‌ ಪಾಯಿಂಟ್‌ ಚಾರಿಟಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಮತ್ತು  ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಕೊಡ್ಲಮೊಗರು ಇವುಗಳ ಜಂಟಿ ಆಶ್ರಯದಲ್ಲಿ  ಸಮಾನ ಮನಸ್ಕರ ಯುವಕರ ತಂಡವು ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೌಡುಗೋಳಿ ಬಳಿಯ ತೋಕೆ ನಿವಾಸಿ ಕ್ಯಾನ್ಸರ್‌ ರೋಗದಿಂದ ತೀವ್ರವಾಗಿ ಬಳಲುತ್ತಿರುವ ಗೀತಾ ಅವರಿಗೆ ಚಿಕಿತ್ಸಾ ಸಹಾಯ ಧನವನ್ನು ಒದಗಿಸಿತು.

ಕೂಲಿ ಕಾರ್ಮಿಕರಾದ ಹರಿಶ್ಚಂದ್ರ (09164092820) ಅವರ ಪತ್ನಿಯಾಗಿರುವ ಗೀತಾ ಅವರು ಕಳೆದ ಕೆಲವು ಸಮಯಗಳಿಂದ ಮಾರಕ ಕ್ಯಾನ್ಸರ್‌ ರೋಗದೊಂದಿಗೆ ಹೋರಾಡುತ್ತಿದ್ದು, ಅವರ ಚಿಕಿತ್ಸೆಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ವ್ಯಯಿಸಿ ಕೊನೆಗೆ ಕುಟುಂಬವು ಸಾಲದ ಸುಳಿಗೆ ಸಿಲುಕಿತು. ಪುತ್ರನ ವಿದ್ಯಾಭ್ಯಾಸವು ಇದೇ ಕಾರಣದಿಂದ ಮೊಟಕುಗೊಂಡಿತು.

ಗೀತಾ ಅವರಿಗೆ ಸೂಕ್ತ  ಚಿಕಿತ್ಸೆ ಒದಗಿಸಿದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವರೆಂಬ ವೈದ್ಯರ ಭರವಸೆಯ ಹಿನ್ನೆಲೆಯಲ್ಲಿ ಸಮಾಜ ಸೇವಕರಾದ ಹಮೀದ್‌ ಬೋರ್ಕಳ (09447761654) ಅವರ ಮುಂದಾಳುತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಾಟ್ಸ್‌ ಆ್ಯಪ್‌ ಗ್ರೂಪ್‌ನ ಮುಖಾಂತರ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ ಚಿಕಿತ್ಸಾ ಧನ ಸಂಗ್ರಹಕ್ಕೆ ನಾಂದಿ ಹಾಡಲಾಯಿತು. ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಅಲ್ಪ ಕಾಲಾವಧಿಯಲ್ಲಿ  63,000 ರೂ. ಗಳ ಮೊತ್ತ ಸಂಗ್ರಹವಾಗಿದೆ.

ಗೀತಾ ಅವರ ಚಿಕಿತ್ಸೆಗಾಗಿ ಪ್ರತೀ ತಿಂಗಳು ಸುಮಾರು 25,000 ರೂ. ಗಳು ಬೇಕಾಗಿದ್ದು, ಸದ್ಯ ಯಾವುದೇ ವರಮಾನವಿಲ್ಲದೆ ದೈನಂದಿನ ವೆಚ್ಚಗಳಿಗೂ ಪರದಾಡುತ್ತಿರುವ ಕುಟುಂಬಕ್ಕೆ ಉದಾರ ಮನಸ್ಕರ ಸಹಾಯ ಅತ್ಯಗತ್ಯವಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಸಂದೇಶಕ್ಕೆ ಸ್ಪಂದಿಸಿದ ದೇಶ ವಿದೇಶಗಳಲ್ಲಿರುವ ಸಹೃದಯಿಗಳು ನೀಡಿದ ಮೊತ್ತವನ್ನು ಗೀತಾ ಅವರಿಗೆ ಹಮೀದ್‌ ಬೋರ್ಕಳ, ಉಮ್ಮರ್‌ ಬೋರ್ಕಳ, ಮನೋಜ್‌ ಶೆಟ್ಟಿ  ಕೊಡ್ಲಮೊಗರು, ಟಿ.ಎಂ. ಮೂಸ ಅವರು ಹಸ್ತಾಂತರಿಸಿದರು.

ಧನ ಸಹಾಯ ನೀಡಲು ಮನವಿ: ಕ್ಯಾನ್ಸರ್‌ ಪೀಡಿತೆ ಗೀತಾ ಅವರಿಗೆ ಹೆಚ್ಚಿನ ಚಿಕಿತ್ಸೆ ತುರ್ತು ಅಗತ್ಯವಿದ್ದು, ಸಹೃದಯರ ಉದಾರ ಧನ ಸಹಾಯ ಅನಿವಾರ್ಯವಾಗಿದೆ. ನಮ್ಮ ಸಹಾಯದಿಂದ ಒಂದು ಕುಟುಂಬದಲ್ಲಿ ಸಂತೋಷ ಮತ್ತು  ನೆಮ್ಮದಿ ತರಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ  ಪುಣ್ಯ ಕಾರ್ಯ ಬೇರೆ ಇರಲಾರದು. ಸಹೃದಯರು ಈ ಕೆಳಗಿನ ಅಕೌಂಟ್‌ ನಂಬರ್‌ಗೆ ತಮ್ಮ  ಕೈಲಾದ ಮೊತ್ತವನ್ನು  ನೀಡಬೇಕೆಂದು ವಿನಂತಿಸಲಾಗಿದೆ. 

ಗೀತಾ ಅವರ ಖಾತೆ ನಂಬರ್‌ ವಿವರ: ಸಿಂಡಿಕೇಟ್‌ ಬ್ಯಾಂಕ್‌, ವರ್ಕಾಡಿ ಶಾಖೆ, ಅಕೌಂಟ್‌ ನಂಬರ್‌ – 42282200148894, ಐಎಫ್‌ಎಸ್‌ಸಿ ಕೋಡ್‌ – SYNB 0004228 ಈ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬಹುದಾಗಿದೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.