ಮೀನಾಕ್ಷಿಗೆ ಸಿಗಬೇಕಿದೆ ಉದ್ಯೋಗದ ಮನ್ನಣೆ

ಈಕೆ ಕೊರಗ ಸಮುದಾಯದ ಮೊದಲ ಎಂ.ಫಿಲ್‌. ಪದವೀಧರೆ; ಬೀಡಿ ಕಟ್ಟುವ ಕಾಯಕ

Team Udayavani, Jul 17, 2019, 5:45 AM IST

meenakshi

ಕಾಸರಗೋಡು: ಈಕೆ ಮೀನಾಕ್ಷಿ ಬೊಡ್ಡೋಡಿ; ಕಾಸರಗೋಡು ಜಿಲ್ಲೆಯ ಕೊರಗ ಸಮುದಾಯದ ಮೊದಲ ಎಂಫಿಲ್‌ ಪದವೀಧರೆ. ಮೀನಾಕ್ಷಿ ಅವರ ಪದವಿ ಕೇವಲ ಹೆಸರಿಗಷ್ಟೇ ಸೀಮಿತವಾದಾಗ ಬದುಕಿನ ಬಂಡಿ ಸಾಗಿಸಲು ಅನಿವಾರ್ಯವಾಗಿ ನೆಚ್ಚಿಕೊಂಡಿರುವುದು ಬೀಡಿ ಕಟ್ಟುವ ಕಾಯಕ!

ವಿದ್ಯಾಭ್ಯಾಸದಿಂದ ದೂರವಾಗಿಯೇ ಉಳಿದಿರುವ ಕೊರಗ ಸಮುದಾಯದಲ್ಲಿ ಒಂದಿಬ್ಬರೂ ತಮ್ಮದೇ ಸಾಧನೆಯಿಂದ ಮೇಲೆ ಬಂದಾಗಲೂ ಅದನ್ನು ಗುರುತಿಸದಿದ್ದರೆ ಅಳಿಸಿ ಹೋಗುವುದು ಕೇವಲ ಆಕೆಯೊಬ್ಬಳ ಕನಸಲ್ಲ. ಒಂದಿಡೀ ಸಮುದಾಯದ ನಿರೀಕ್ಷೆ.

ವರ್ಕಾಡಿ ಪಂಚಾಯತ್‌ ಬೊಡ್ಡೋಡಿ ಮೀನಾಕ್ಷಿ ಅವರ ಹುಟ್ಟೂರು. ಪತಿಯ ಸಹಕಾರದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪ್ರಸ್ತುತ ಮೀಯಪದವಿನ ಕುಳೂರಿನಲ್ಲಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿದ್ದು ಕಾಸರಗೋಡು ಸರಕಾರಿ ಕಾಲೇಜಿನಲ್ಲಾದರೆ ಎಂ.ಫಿಲ್‌. ಪೂರೈಸಿದ್ದು ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗ ಸಂಸ್ಥೆಯಲ್ಲಿ.

“ಇಷ್ಟು ಕಲಿತ ನಿನಗೇ ಕೆಲಸ ಇಲ್ಲದೆ ಬೀಡಿ ಕಟ್ಟುತ್ತಿರುವೆ; ಹಾಗಿರುವಾಗ ನಾವು ಕಲಿತು ಮಾಡುವುದೇನು? ನೇರವಾಗಿ ಕೂಲಿ ಕೆಲಸಕ್ಕೆ ಹೋಗಬಾರದೇ? ಎಂದು ಸಮುದಾಯದ ಯುವಜನರು ಪ್ರಶ್ನಿಸುತ್ತಾರೆ ಎಂದು
ದುಃಖೀಸುತ್ತಾರೆ ಮೀನಾಕ್ಷಿ.

ಸಮ್ಮಾನಿಸಿದವರು ಮರೆತರು!
ಕೆಲವು ವರುಷಗಳ ಮೊದಲು ಮೀನಾಕ್ಷಿ ಎಂಎ ಪೂರೈಸಿದಾಗ ಸಂಘ-ಸಂಸ್ಥೆಗಳು ಗುರುತಿಸಿ ಶಾಸಕರ ಮೂಲಕ ಅಭಿನಂದಿಸಿದ್ದವು. ಮಾಧ್ಯಮಗಳ ಮೂಲಕ ಆಕೆಯ ಸಾಧನೆ ಪ್ರಚುರವಾದಾಗ ಆದಿವಾಸಿ ಇಲಾಖೆಯವರು ಆರು ತಿಂಗಳ ತಾತ್ಕಾಲಿಕ ಉದ್ಯೋಗವನ್ನೂ ನೀಡಿದರು.

ಮೀನಾಕ್ಷಿಗೆ “ಆದಿವಾಸಿ ಅತಿಥಿ’ಯಾಗಿ ದಿಲ್ಲಿಯ ರಾಷ್ಟ್ರಪತಿ ಭವನಕ್ಕೆ ಹೋಗುವ ಅವಕಾಶ ಲಭಿಸಿತ್ತು. ಬಳಿಕ ಎಲ್ಲರೂ ಆಕೆಯನ್ನು ಮರೆತುಬಿಟ್ಟಿದ್ದಾರೆ.

ಮೀನಾಕ್ಷಿಯ ಎಂಫಿಲ್‌ ಪದವಿ ಹಿಂದೆ ಅದೆಷ್ಟೋ ನಿರೀಕ್ಷೆಗಳಿವೆ. ಅದು ಅವರ ವೈಯಕ್ತಿಕ ಹಿತಾಸಕ್ತಿಗಿಂತಲೂ ಸಮಾಜದ ಅಭ್ಯುದಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ಸರಕಾರ ಆಕೆಗೆ ಉದ್ಯೋಗ ನೀಡುವ ಮೂಲಕ ತಳಮಟ್ಟದಲ್ಲಿರುವ ಜನಸಮೂಹವನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು.
– ಡಾ| ರತ್ನಾಕರ ಮಲ್ಲಮೂಲೆ, ಪ್ರಾಧ್ಯಾಪಕ, ಸರಕಾರಿ ಕಾಲೇಜು ಕಾಸರಗೋಡು

ಮೀನಾಕ್ಷಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದು ಇಂದಿನ ಅಗತ್ಯ. ಇದು ಅವರ ಸಮುದಾಯದ ಇತರರೂ ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೇರಣೆಯಾಗಲಿದೆ.
– ಡಾ| ರಾಜೇಶ್‌ ಬೆಜ್ಜಂಗಳೆ, ನಿರ್ದೇಶಕರು, ಕನ್ನಡ ವಿಭಾಗ ಭಾರತೀಯ ಭಾಷಾ ಅಧ್ಯಯನಾಂಗ ಸಂಸ್ಥೆ ಕಣ್ಣೂರು ವಿ.ವಿ

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.