ಹಾಲು ಉತ್ಪಾದಕರು ಗುಣಮಟ್ಟ ಕಾಪಾಡಲು ಗಮನ ಹರಿಸಬೇಕು’

ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

Team Udayavani, Jun 8, 2019, 6:00 AM IST

2BDK03

ಬದಿಯಡ್ಕ: ಉತ್ತಮ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಲುತ್ಪಾದಕರು ಗುಣಮಟ್ಟ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಎಂದು ಹಾಲುತ್ಪಾದಕರ ಸಂಘದ ಅಧ್ಯಕ್ಷ ಕೆ.ಎ.ಐತ್ತಪ್ಪ ಶೆಟ್ಟಿ ಹೇಳಿದರು. ಆವರು ಬದಿಯಡ್ಕ ಗುರುಸದನದಲ್ಲಿ ಜರಗಿದ ಬದಿಯಡ್ಕ ಟೌನ್‌ ಕ್ಷೀರೋತ್ಪಾದಕ ಸಹಕಾರಿ ಸಂಘದ 2018-19ನೇ ವರ್ಷದ ವಾರ್ಷಿಕ ಮಹಾಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಿ.ನಿಖೀತ ಶಂಕರ್‌ ಪ್ರರ್ಥನೆ ಹಾಡಿದರು. ಸಂಘದ ನಿರ್ದೇಶಕರಾದ ಸದಾನಂದ ರೈ, ಪದ್ಮಲತಾ ಶೆಟ್ಟಿ, ಮಲ್ಲಿಕಾ ಆರ್‌.ರೈ ಶುಭಾಶಂಸನೆಗೈದರು. ಸಂಘದ ಕಾರ್ಯದರ್ಶಿ ಸುರೇಖ ಸ್ವಾಗತಿಸಿ, ಕೃಪ ವಂದಿಸಿದರು.

1998ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಘವು, ಕಳೆದ 21 ವರ್ಷಗಳಲ್ಲಿ ಬದಿಯಡ್ಕ ಪಂಚಾಯತಿನ 7,8,9,10,12 ಮತ್ತು 14ನೇ ವಾರ್ಡುಗಳ ಭಾಗಿಕ ಪ್ರದೇಶಗಳ ಕ್ಷೀರ ಉತ್ಪಾದನಾ ಚಟುವಟಿಕೆಗಳಲ್ಲಿ ಸಂಘದ ಸದಸ್ಯ ಹಾಲು ಉತ್ಪಾದಕ ಬಂಧುಗಳ ನೆರವಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು ಈ ಕಾಲಘಟ್ಟದಲ್ಲಿ ಆಡಳಿತೆಯ ಅನುಕೂಲಕ್ಕೆ ಬೇಕಾಗುವ ಕಂಪ್ಯೂಟರ್‌, ಎನಲೆ„ಸರ್‌ ಇನ್‌ವರ್ಟರ್‌, ತೂಕದ ಮಿಷಿನ್‌ ಒಳಗೊಂಡಂತೆ ಒಟ್ಟು ಸುಮಾರು ರೂ.4 ಲಕ್ಷಗಳಷ್ಟು ಉಪಕರಣಗಳನ್ನು ಖರೀದಿಸಿದ್ದು, ಸಂಘವು ಯಾವುದೇ ಸಾಲ ಯಾ ಇತರ ಆರ್ಥಿಕ ಬಾಧ್ಯತೆಯ ಒತ್ತಡಗಳಿಲ್ಲದೆ, ದೆ„ನಂದಿನ ವಹಿವಾಟಿಗಾಗಿ ಸುಮಾರು ರೂ 3 ಲಕ್ಷಗಳಷ್ಟನ್ನು ಪ್ರತ್ಯೇಕ ಮೀಸಲಿಡಲಾಗಿದೆ.

ಮಾತ್ರವಲ್ಲದೇ ಬ್ಯಾಂಕ್‌ ನಿಕ್ಷೇಪವಾಗಿ ಸುಮಾರು ರೂ 6 ಲಕ್ಷಗಳನ್ನು ಹೊಂದಿದೆ. ಆದರೆ ಸ್ವಂತವಾಗಿ ಒಂದು ಕಟ್ಟಡದ ಕೊರತೆಯಿದ್ದು ಸಧ್ಯದಲ್ಲಿಯೇ ಅದು ಕೂಡ ಕೈಗೂಡಬಹುದೆಂಬ ಆತ್ಮವಿಶ್ವಾಸ ಸಂಘಕ್ಕಿದೆ. ಸಂಘವು ಕ್ಷೀರ ವಿಕಸನ ಇಲಾಖೆಗೆ ಸಲ್ಲಿಸಬೇಕಾದ ನಿರ್ದಿಷ್ಟ ಲೆಕ್ಕಪತ್ರಗಳನ್ನು ಸಲ್ಲಿಸುತ್ತಿದೆ. 2018-19ನೇ ಸಾಲಿನ ಕಾಸರಗೋಡು ಬ್ಲೋಕಿನ ಕ್ಷೀರ ಸಂಗಮವನ್ನು ಸಂಘದ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಯಶಸ್ವಿಯಾಗಿ ನಡೆಸುವ ಅವಕಾಶ ಸಂಘದ ಪಾಲಿಗೆ ದೊರಕಿದೆ ಎಂದವರು ತಿಳಿಸಿದರು.

ಸಂಘದ ದೆ„ನಂದಿನ ವ್ಯವಹಾರಗಳನ್ನು ಪ್ರಾದೇಶಿಕ ಮಾರಾಟ ಇತ್ಯಾದಿಗಳನ್ನು ಪಾರದರ್ಶಕವಾಗಿಡುವ ನಿಟ್ಟಿನಲ್ಲಿ ಸೊಸೆ„ಟಿಯ ದೆ„ನಂದಿನ ಖರ್ಚು ವೆಚ್ಚಗಳ ಸಂದಾಯ ರಶೀದಿಗಳನ್ನು ಪ್ರತ್ಯೇಕ, ಪ್ರತ್ಯೇಕ ಫೆ„ಲು ರೂಪದಲ್ಲಿ ಶೇಖರಿಸಿಡುವುದು ಮತ್ತು ಬಂದ ಹಣವನ್ನು ದಿನನಿತ್ಯ ಬ್ಯಾಂಕ್‌ ಲೆಕ್ಕಕ್ಕೆ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಂಘದ 2018-19ನೇ ವರ್ಷದ ಆಯ-ವ್ಯಯಗಳನ್ನು ಮತ್ತು 2019-20ರ ಬಜೆಟನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಭೆಯ ಮುಂದೆ ಮಂಡಿಸಲಾಯಿತು. ಕಾಸರಗೋಡು ಕ್ಷೀರ ವಿಕಸನ ಇಲಾಖೆಯ ಉಪಮಹಾಪ್ರಬಂಧಕರು,ಡೈರಿ ವಿಕಸನ ಆಫೀಸರು, ಕಾಸರಗೋಡು ವಿಭಾಗ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಪೂರ್ಣ ಸಹಕಾರ, ಮಾರ್ಗದರ್ಶನಗಳನ್ನು ನಿಭಾಯಿಸುವ ಮಿಲ್ಮಾ ಸಂಸ್ಥೆಗೂ ಆಭಿನಂದನೆ ಸಮರ್ಪಿಸಲಾಯಿತು.

2018-19ರ ಆಡಳಿತ ವರದಿ, ಆಯ-ವ್ಯಯಗಳ ವರದಿ ಮಂಡಿಸಲಾಯಿತು. 2019-20ನೇ ವರ್ಷದ ಬಜೆಟ್‌ ಮಂಡನೆಯ ಬಳಿಕ ವಿವಿಧ ವಿಷಯ ಚರ್ಚಿಸಲಾಯಿತು.

ಪೂರಕ ಮಾರುಕಟ್ಟೆ ವ್ಯವಸ್ಥೆ
ಕಾಸರಗೋಡು ಜಿಲ್ಲೆ ಹಾಲುತ್ಪಾದನಾ ವಲಯದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದು ಮಾರುಕಟ್ಟೆ ವ್ಯವಸ್ಥೆಯು ಪೂರಕವಾಗಿದೆ. ಹಾಲುತ್ಪಾದಕರ ಸಹಕಾರಿ ಸಂಘಗಳ ಮೂಲಕ ಹೆ„ನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ನೀಡುವ ತಿಳಿವಳಿಕೆ, ಸರಕಾರೀ ಸೌಲಭ್ಯಗಳ ಮಾಹಿತಿಗಳು ಕ್ಷೀರೋತ್ಪಾದಕರಿಗೆ ಅನುಕೂಲಕರವಾಗಿದೆ. ಹಾಲಿಗೆ ಹೆಚ್ಚಿನ ಬೇಡಿಕೆಯೂ ಇದೆ.
– ಕೆ.ಎ. ಐತ್ತಪ್ಪ ಶೆಟ್ಟಿ
ಅಧ್ಯಕ್ಷರು ,ಹಾಲು ಉತ್ಪಾದಕರ ಸಹಕಾರಿ ಸಂಘ, ಬದಿಯಡ್ಕ

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.