ಮಹಾಮಳೆಗೆ ಕೊಡಗಿನಲ್ಲಿ ಮೊದಲ ಸಾವು
Team Udayavani, Jul 16, 2022, 2:24 PM IST
ಮಡಿಕೇರಿ: ಮಳೆಯಿಂದ ಮನೆಯ ಸ್ನಾನದ ಗೋಡೆ ಬಿದ್ದು ಗಂಭೀರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಿಸದೆ ಶನಿವಾರ ಮೃತ ಪಟ್ಟಿದ್ದಾರೆ.
ವಸಂತಮ್ಮ(70) ಹಾಸನ ಆಸ್ಪತ್ರೆಯಲ್ಲಿ ಮೃತ ವೃದ್ಧೆ.
ಜುಲೈ 5ರ ಮಂಗಳವಾರ ಶನಿವಾರಸಂತೆ ಸಮಿಪದ ದುಂಡಳ್ಳಿ ಗ್ರಾ.ಪಂಗೆ ಒಳಪಡುವ ಸುಳುಗಳಲೆಯಲ್ಲಿ ಮನೆಯ ಸ್ನಾನದ ಗೋಡೆ ಬಿದ್ದು ವಸಂತಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರಿಂದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ: ಆರಗ ಜ್ಞಾನೇಂದ್ರ