ಇಂದು ಕೇರಳೀಯರ ರಾಷ್ಟ್ರೀಯ ಹಬ್ಬ ಓಣಂ
Team Udayavani, Sep 4, 2017, 7:45 AM IST
ಕಾಸರಗೋಡು: ಕೇರಳೀಯರ ರಾಷ್ಟ್ರೀಯ ಹಬ್ಬ ಓಣಂ ಇಂದು (ಸೆ. 4) ಕೇರಳ ರಾಜ್ಯಾದ್ಯಂತ ಪಾರಂಪರಿಕ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಕಳೆದ ಹತ್ತು ದಿನಗಳಿಂದ ಆಚರಿಸಿಕೊಂಡು ಬಂದಿರುವ ಕೇರಳೀಯರು ಸೋಮವಾರ ತಿರುವೋಣಂ ಆಗಿ ಆಚರಿಸಲಿದ್ದಾರೆ.
ಕೃಷಿಕರ ಹಬ್ಬವೆಂದೂ ಗುರುತಿಸಿಕೊಂಡಿರುವ ಓಣಂ ಅಂಗವಾಗಿ ಚಕ್ರವರ್ತಿ ಮಹಾಬಲಿಯನ್ನು ಸ್ವಾಗತಿಸಲು ಮನೆ ಮನೆಗಳಲ್ಲಿ ಹೂಗಳಿಂದ ರಂಗೋಲಿ (ಪೂಕಳಂ) ರಚಿಸುತ್ತಾರೆ. ಕೇರಳದ ನಾಡ ಹಬ್ಬವಾಗಿರುವ ಓಣಂ ವಿಶಿಷ್ಟ ಉತ್ತರಾಡಂ ಅಥವಾ ಉತ್ರಾಡಂ ರವಿವಾರ ಆಚರಿಸಲಾಯಿತು. ಉತ್ರಾಡಂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ. ಮಹಿಳೆಯರ ಹಬ್ಬವೆಂತಲೂ ಕರೆಯುತ್ತಾರೆ. ಚಕ್ರವರ್ತಿ ಮಹಾಬಲಿ ದೇಶವನ್ನು ಸಂದರ್ಶಿಸಿ ಜನತೆಗೆ ಹಾರೈಸುತ್ತಾನೆ ಎಂಬ ನಂಬಿಕೆಯಲ್ಲಿ ಓಣಂ ಆಚರಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ