ಖಾಸಗಿ ಬಸ್ಸುಗಳ ಬಣ್ಣ ಬದಲಾವಣೆಯಿಂದ ಪ್ರಯಾಣಿಕರಲ್ಲಿ ಗೊಂದಲ!


Team Udayavani, May 6, 2018, 6:05 AM IST

3-kbl-1.jpg

ಕುಂಬಳೆ: ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್‌ ಇದ್ದಂತೆ ಇದೀಗ ಖಾಸಗಿ ಬಸ್ಸುಗಳಿಗೆ ಕಲರ್‌ಕೋಡ್‌ ಕಾಯಿದೆ ಜಾರಿಗೊಳಿಸಲಾಗಿದೆ.ಕೇರಳದ 14 ಜಿಲ್ಲೆಗಳ ಖಾಸಗಿ ಬಸ್ಸುಗಳಿಗೆ ಒಂದೊಂದು ಬಣ್ಣಗಳನ್ನು ನಿರ್ಧರಿಸಲಾಗಿದೆ.ಬಸ್ಸುಗಳ ವಾರ್ಷಿಕ ತಪಾಸಣೆಯ ಸಂದರ್ಭದಲ್ಲಿ ಖಾಸಗಿ ಬಸ್ಸುಗಳ ಬಣ್ಣವನ್ನು ಕಡ್ಡಾಯವಾಗಿ ಬದಲಾಯಿಸಬೇಕಾಗಿದೆ.

ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ಸುಗಳಿಗೆ ನೀಲಿ ಬಣ್ಣವನ್ನು ನಿರ್ಧರಿಸಲಾಗಿದೆ.ಪೂರ್ತಿ ನೀಲಿ ಬಣ್ಣದೊಂದಿಗೆ ಬಸ್ಸಿನ ಕೆಳಭಾಗಕ್ಕೆ ಮೂರು ಲೈನ್‌ ಬಿಳಿ ಬಣ್ಣವನ್ನು ಬಳಿಯಲಾಗುವುದು.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅನೇಕ ಬಸ್ಸುಗಳು ತಮ್ಮ ಬಣ್ಣ ಬದಲಾಯಿಸುತ್ತಿವೆ.

ರಾಜ್ಯದಲ್ಲಿ ಸಾಮರಸ್ಯ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆಯಂತೆ.ಯಾವುದಾದರೂ ಅಹಿತಕರ ಘಟನೆ ನಡೆದಲ್ಲಿ , ಹರತಾಳದಂದು ಬಸ್ಸುಗಳ ಬಣ್ಣ ನೋಡಿ ಕಲ್ಲೆಸೆದು ಹಾನಿಗೊಳಿಸುವುದನ್ನು ತಪ್ಪಿಸಲು ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಗಿದೆಯಂತೆ.ಅದೇ ರೀತಿ ರಸ್ತೆ ಪಕ್ಕದ ತಂಗುದಾಣಗಳಿಗೂ ನೀಲಿ ಬಿಳಿಯ ಬಣ್ಣವನ್ನು ಬಳಿಯಲಾಗುವುದು.

ಟೈಮ್‌ ಕೀಪರ್‌ರವರ ಸಮಯ ಪಾಲನೆಯ ಮಧ್ಯೆ ಲಗುಬಗನೆ ಬಸ್ಸುಗಳಲ್ಲಿ ಪ್ರಯಾಣಿ ಕರು ಊರಿನ ನಾಮಫಲಕವನ್ನು ನೋಡಿ ಏರಬೇಕಾಗಿದೆ. ಹಿಂದೆ ತಮ್ಮ ಊರಿಗೆ ತೆರಳುವ ಬಸ್ಸಿನ ಬಣ್ಣವನ್ನು ಗುರುತಿಸಿ ಬಸ್ಸನ್ನೇರಲು ಸುಲಭವಾಗುತ್ತಿತ್ತು. ಇದೀಗ ಬಸ್ಸುಗಳ ಬಣ್ಣ ಬದಲಾವಣೆಯಿಂದ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಅನಕ್ಷರಸ್ಥ ಮಹಿಳೆ ಬಸ್ಸಿನ ಬಣ್ಣ ಬದಲಾವಣೆಯಿಂದ ಸಂಕಷ್ಟ ಅನುಭವಿಸಿದ ವೀಡಿಯೊ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಖಾಸಗಿ ಬಸ್ಸುಗಳ ಇನ್‌ಸ್ಪೆಕ್ಷನ್‌ ಸಂದರ್ಭದಲ್ಲಿ ಸಣ್ಣಪುಟ್ಟ ಬದಲಾವಣೆಯೊಂದಿಗೆ ಆಗುತ್ತಿದ್ದ ಖರ್ಚುವೆಚ್ಚ ಇದೀಗ ಬಣ್ಣ ಬದಲಾವಣೆಯಿಂದ ದುಪ್ಪಟ್ಟಾಗುವುದಾಗಿ ಬಸ್‌ ಮಾಲಕರ ಆರೋಪ. ದಿನದಿಂದ ದಿನಕ್ಕೆ ಏರುತ್ತಿರುವ ಇಂದನ ಬೆಲೆ, ಟಯರ್‌, ಬಿಡಿಭಾಗಗಳ ಬೆಲೆ ಏರಿಕೆ, ವಾರ್ಷಿಕ ತೆರಿಗೆ, ವಿಮಾ ಮೊತ್ತ ಹೆಚ್ಚಳದಿಂದ ನಷ್ಟ ಅನುಭವಿಸಬೇಕಾಗಿದೆ. ಮತ್ತು ಹೆದ್ದಾರಿಯ ಅಲ್ಲಲ್ಲಿ ಸರಕಾರಿ ಸಾರಿಗೆ ಬಸ್ಸುಗಳಿಗೆ ನಿಲುಗಡೆಗೆ ಅವಕಾಶ ಮಾಡಿರುವುದರಿಂದ ಖಾಸಗಿ ಬಸ್ಸುಗಳಿಗೆ ಪ್ರಯಾ ಣಿಕರ ಕೊರತೆ ಕಾಡುತ್ತಿದೆ. ಇದರಿಂದ ಖಾಸಗಿ ಬಸ್‌ ಉದ್ಯಮ ನಷ್ಟದ ಹಾದಿಯಲ್ಲಿ ಸಾಗುತ್ತಿದೆ.

ಕೇರಳ ರಾಜ್ಯ ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿ ಗಳಿಗೆ ರಿಯಾಯತಿ ದರ ನೀಡದೆ ಮಕ್ಕಳು ಖಾಸಗಿ ಬಸ್ಸಲ್ಲಿ ತುಂಬಿ ತುಳುಕುವುದರಿಂದ ಇತರ ಪ್ರಯಾಣಿಕರು ಈ ಬಸ್ಸನ್ನೇರಲು ಹಿಂಜರಿಯುತ್ತಿ ರುವುದಾಗಿ ಖಾಸಗಿ ಬಸ್‌ ಮಾಲಕರ ಆರೋಪವಾಗಿದೆ. ಈಗಾಗಲೇ ನಷ್ಟದಿಂದ ಅನೇಕ ಖಾಸಗಿ ಬಸ್‌ಗಳು ಬಂದ್‌ ಆಗಿವೆ. ಕೆಲವು ಬಸ್ಸುಗಳು ಪ್ರಯಾಣಿಕರ ಕೊರತೆಯಿಂದ ಕೆಲವು ಟ್ರಿಪ್‌ಗ್ಳನ್ನು ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.ಖಾಸಗಿ ಬಸ್‌ಗಳು ವಿವಿಧ ಬೇಡಿಕೆಗಳನ್ನು ಮುಂದಿ ರಿಸಿ ಇತೀ¤ಚೆಗೆ ಸಂಪು ಹೂಡಿದರೂ ಇದಕ್ಕೆ ಸರಕಾರ ಬೆಲೆ ನೀಡದೆ ದರ್ಪ ತೋರಿರುವುದಾಗಿ ಬಸ್‌ ಮಾಲಕರು ಆರೋಪಿಸುತ್ತಿದ್ದಾರೆ. ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂಬುದಾಗಿ ಸಿಎಂ ಹೇಳಿದರೂ ಕೊನೆಗೆ ಮಾತುಕತೆಗೆ ಸಿದ್ಧವಾಗಿಲ್ಲವಂತೆ.ಇದರಿಂದ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರಕ್ಕೆ ಖಾಸಗಿ ಬಸ್ಸುಗಳ ಕೋಟಿಗಟ್ಟಲೆ ವಾರ್ಷಿಕ ತೆರಿಗೆ ಪಾವತಿಯಾಗುತ್ತಿದ್ದರೂ ಸಮಸ್ಯೆಯ ಪರಿಹಾರಕ್ಕೆ ಸರಕಾರ ಮುಂದಾಗುವುದಿಲ್ಲವೆಂಬ ಚಿಂತೆ ಇವರದು.
 
ಬಹಳ ಹಿಂದಿನಿಂದಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಖಾಸಗಿ ಬಸ್‌ಗಳನ್ನು ಉಳಿಸಬೇಕೆಂಬ ನಿಲುವು ಹೆಚ್ಚಿನ ಪ್ರಯಾಣಿಕರದು. ಖಾಸಗಿ ಬಸ್ಸುಗಳ ಬಣ್ಣ ಬದಲಾಯಿಸುವುದು ವಿಮಾ ಕಂತು ಮತ್ತು ತೆರಿಗೆ ವೃದ್ಧಿಸುವುದರೊಂದಿಗೆ ಸಮಸ್ಯೆಯನ್ನೂ ಪರಿಹರಿಸಲು ಸರಕಾರ ಮುಂದಾಗಬೇಕಾಗಿದೆ.

ಒಂದೇ ಬಣ, ನಮ್ಮ ಬಸ್‌ ಯಾವುದಣ್ಣಾ
ಬಸ್ಸುಗಳ ಈ ಬಣ್ಣ ಬದಲಾವಣೆಯಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಊರಿಗೆ ಪ್ರಯಾಣ ಬೆಳೆಸುವ ಬಸ್ಸಿನ ಬಣ್ಣವನ್ನು ದೂರದಿಂದಲೇ ಗುರುತಿಸಿ ಬಸ್ಸುಗಳನ್ನೇರುತ್ತಾರೆ. ಆದರೆ ಇದೀಗ ಎಲ್ಲ ಬಸ್ಸುಗಳು ಒಂದೇ ಬಣ್ಣದವುಗಳಾಗಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಅದರಲ್ಲೂ ನಿರಕ್ಷರಿಗಳು ಮತ್ತು ಮಹಿಳೆಯರು ಪರದಾಡಬೇಕಾಗಿದೆ. ಬಸ್‌ ನಿಲ್ದಾಣಗಳಿಗೆ ಸಾಲಾಗಿ ಬರುವ ನೀಲಿ ಬಣ್ಣದ ಬಸ್ಸುಗಳಲ್ಲಿ ತಮ್ಮ ಊರಿಗೆ ತೆರಳುವ ಬಸ್‌ಗಳನ್ನು ಹುಡುಕುವ ತವಕದಲ್ಲಿ ಬಸ್ಸುಗಳು ತೆರಳಿಯಾಗಿರುತ್ತವೆ. ಕೆಲವು ಬಾರಿ ನಿಲ್ದಾಣದಲ್ಲಿ ಇಳಿದ ಚಾಲಕರು ಮತ್ತು  ನಿರ್ವಾಹಕರು ತಮ್ಮ ಬಸ್‌ ತಪ್ಪಿ ಬೇರೆ ಬಸ್ಸನ್ನೇರಿದ ಘಟನೆಯೂ ನಡೆದಿದೆ.
ಕರ್ನಾಟಕದಿಂದ ಹೊಸದಾಗಿ ಆರಂಭಿಸಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳೂ ನೀಲಿ ಬಣ್ಣವನ್ನು ಹೊಂದಿದೆ. ಇದು ಖಾಸಗಿ ಬಸ್ಸುಗಳ ಮಧ್ಯೆ ನಿಂತಾಗ ಕೆಲವು ಪ್ರಯಾಣಿಕರು ಇದನ್ನು ಖಾಸಗಿ ಬಸ್ಸೆಂದು ನಂಬಿ ಏರುವುದೂ ಇದೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.