ಕಳಪೆ ಕಾಮಗಾರಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡ ಸೃಷ್ಟಿ
Team Udayavani, Jul 19, 2017, 5:00 AM IST
ಕುಂಬಳೆ: ತಲಪ್ಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಲ್ಲಲ್ಲಿ ಹೊಂಡ ಸೃಷ್ಟಿಯಾಗುತ್ತಿದೆ. ಕೋಟಿಗಟ್ಟಲೆ ನಿಧಿ ವ್ಯಯಿಸಿದ ಮೆಕ್ಡಾಂ ಡಾಮರೀಕರಣ ಕಳಪೆ ಕಾಮಗಾರಿಯಿಂದಲಾಗಿ ರಸ್ತೆ ಬಿರುಕು ಬಿಡುತ್ತಿದೆ. ರಸ್ತೆಯ ಮೇಲ್ಪದರ ಎದ್ದು ರಸ್ತೆ ಕೆಡುತ್ತಿದೆ. ಕೆಲದಿನಗಳಿಂದ ವಿಪರೀತ ಮಳೆ ಸುರಿದ ಕಾರಣ ರಸ್ತೆಯಲ್ಲಿ ಹೊಂಡವಾಗಿದೆ ಎಂಬುದಾಗಿ ಇಲಾಖೆಯವರು ಮತ್ತು ಗುತ್ತಿಗೆದಾರರು ಇದೀಗ ಸಬೂಬು ನೀಡುತ್ತಿದ್ದರೂ ಕಳಪೆ ಕಾಮಗಾರಿಯಿಂದ ರಸ್ತೆ ಕೆಡುತ್ತಿದೆ ಎಂಬುದು ಸತ್ಯವಾಗಿದೆ.
ಸಾಕಷ್ಟು ಡಾಮರು ಮಿಶ್ರಣದ ಕೊರತೆ, ಸಕಾಲದಲ್ಲಿ ಕಾಮಗಾರಿ ಪೂರೈಸದೆ ಮಳೆ ಸುರಿಯುತ್ತಿರುವಾಗಲೇ ಕಾಮಗಾರಿ ನಡೆಸಿದ ಫಲದಿಂದ ರಸ್ತೆ ಬೇಗನೆ ಕೆಡಲು ಕಾರಣವಾಗಿದೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ಹೊಂಡಗಳ ಸಂಖ್ಯೆ ಅಧಿಕವಾಗಿ ಸಂಚಾರಕ್ಕೆ ತೊಡಕಾಗಲಿದೆ. ಇನ್ನು ಈ ರಸ್ತೆಯ ಹೊಂಡ ಮುಚ್ಚಲು ಲಕ್ಷಗಟ್ಟಲೆ ನಿಧಿಯಲ್ಲಿ ಪೀಸ್ ವರ್ಕಿನ ಮೂಲಕ ಪ್ಯಾಚ್ ವರ್ಕ್ ಯೋಜನೆ ತಯಾರಿಸಿ ಮತ್ತೆ ಈ ರಸ್ತೆಯ ಹೊಂಡ ಮುಚ್ಚಲಿದೆ.
ಆದರೆ ಸರಕಾರದಿಂದ ಕೋಟಿಗಟ್ಟಲೆ ನಿಧಿ ಬಳಸಿದ ಆರಂಭದ ಕಾಮಗಾರಿಯ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲು ಜನರಿಂದ ಮತ ಪಡೆದು ಚುನಾಯಿತರಾದ ಪ್ರತಿನಿಧಿಗಳಿಗೆ ಸಮಯ ಸಿಗುವುದಿಲ್ಲ. ಗುತ್ತಿಗೆದಾರರ ಕಾಂಚಾಣಕ್ಕೆ ಕೈ ಒಡ್ಡಿದ ಅಥವಾ ತಮ್ಮ ಪಕ್ಷಕ್ಕೆ ನಿಧಿ ಸಂಗ್ರಹಿದ ದಾಕ್ಷಿಣ್ಯದಲ್ಲಿ ಕರಾರುದಾರರ ಕಳಪೆ ಕಾಮಗಾರಿಗೆ ತಲೆಬಾಗಲೇ ಬೇಕಾಗುವುದು ಕೆಲ ಚುನಾಯಿತರಿಗೆ ಅನಿವಾರ್ಯವಾಗುವುದು. ಸಾರ್ವಜನಿಕರು ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗಾಗಲಿ ವಿಜಿಲೆನ್ಸ್ ಇಲಾಖೆಗೆ ದೂರು ಸಲ್ಲಿಸಿದರೂ ಅಧಿಕಾರಿಗಳು ಕಳ್ಳರಿಗೆ ಬೆಳಕು ನೀಡುವ ಸಂಪ್ರದಾಯವೇ ಹೆಚ್ಚಾಗಿ ಇಲ್ಲಿ ನಡೆಯುವುದು.
ಗುತ್ತಿಗೆದಾರರ ಪರವಾದ ತೀರ್ಪಿನಿಂದ ಕಳಪೆ ಕಾಮಗಾರಿ ಸದಾ ಮುಂದುವರಿಯುವುದು. ಆದುದರಿಂದ ಇದೀಗ ಸಾರ್ವಜನಿಕರಿಂದ ದೂರು ವಿರಳವಾಗುತ್ತಿದೆ. ಇದರಿಂದಲಾಗಿ ವರ್ಷಂಪ್ರತಿ ಸರಕಾರದ ಅದೆಷ್ಟೋ ಕೋಟಿಗಟ್ಲೆ ರಾಷ್ಟ್ರೀಯ ನಿಧಿ ಪೋಲಾಗುವುದು. ಇದನ್ನು ಯಾವ ಸರಕಾರ ಅಧಿಕಾರಕ್ಕೇರಿದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಜನರು ಇನ್ನಷ್ಟು ಜಾಗೃತರಾಗದಷ್ಟು ಕಾಲ ಕಳಪೆ ಕಾಮಗಾರಿಗೆ ಶಾಶ್ವತ ಪರಿಹಾರವೆಂಬುದಿಲ್ಲ.
ಚಿತ್ರ:ವಿದ್ಯಾ ಸ್ಟುಡಿಯೊ ಪೈವಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ