ಇಂದು ಪದ್ಮಗಿರಿ ಕಲಾಕುಟೀರದಲ್ಲಿ ‘ರಂಗಚಿನ್ನಾರಿ’ ಪ್ರಶಸ್ತಿ ಪ್ರದಾನ


Team Udayavani, Jun 1, 2019, 6:00 AM IST

RANGA

ಕಾಸರಗೋಡು: ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಹದಿಮೂರನೇ ವಾರ್ಷಿಕೋತ್ಸವದ ‘ರಂಗಚಿನ್ನಾರಿ ಪ್ರಶಸ್ತಿ’ ಗೆ ಸನ್ನಿಧಿ ಟಿ.ರೈ, ಕೃಷ್ಣ ಕಿಶೋರ ಪೆರ್ಮುಖ, ಡಾ| ಯು.ಮಹೇಶ್ವರಿ ಮತ್ತು ಕೃಷ್ಣ ಜಿ.ಮಂಜೇಶ್ವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಜೂ. 1ರಂದು ಶನಿವಾರ ಸಂಜೆ 5.15ಕ್ಕೆ ಕರಂದಕ್ಕಾಡ್‌ನ‌ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.

ಸನ್ನಿಧಿ ಟಿ.ರೈ ಪೆರ್ಲ
ಯಕ್ಷಗಾನ, ಭರತನಾಟ್ಯ, ಪೆನ್ಸಿಲ್ ಡ್ರಾಯಿಂಗ್‌, ಯೋಗ, ಕೀ ಬೋರ್ಡ್‌ ಮತ್ತು ವಯಲಿನ್‌ ವಾದನ, ಶಾಸ್ತ್ರೀಯ ಸಂಗೀತ ಹಾಗು ಜನಪದ ಸಂಗೀತ, ಕರಾಟೆ, ಸಮಾಜ ಸೇವೆ.. ಹೀಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಸನ್ನಿಧಿ ಟಿ.ರೈ ಪೆರ್ಲ ಉತ್ತಮ ಕವಯಿತ್ರಿ, ಲೇಖಕಿ. ಕನ್ನಡ, ಇಂಗ್ಲಿಷ್‌, ಹಿಂದಿ, ತುಳು ಹೀಗೆ ವಿವಿಧ ಭಾಷೆಗಳಲ್ಲಿ ಕವಿತೆಗಳನ್ನು ರಚಿಸಿರುವ ಸನ್ನಿಧಿ ವಿವಿಧ ಸಮ್ಮೇಳನಗಳಲ್ಲಿ ವಿದ್ಯಾರ್ಥಿಗೋಷ್ಠಿಗಳಲ್ಲಿ ಅಧ್ಯಕ್ಷೆಯಾಗಿಯೂ, ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ. ಉತ್ತಮ ಭಾಷಣಗಾರ್ತಿಯಾಗಿರುವ ಸನ್ನಿಧಿ ಅವರನ್ನು ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರ ಅರಸಿಕೊಂಡು ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಮತ್ತು ಹೆಣ್ಮಕ್ಕಳಿಗೆ ಸ್ವರಕ್ಷಣೆಯ ಕುರಿತಾಗಿ ತರಗತಿಯನ್ನು ನಡೆಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಪತ್ರಿಕೆಯೊಂದರಲ್ಲಿ ನಿರಂತರವಾಗಿ ಅಂಕಣ ಬರೆಯುತ್ತಿರುವ ಈ ಯುವ ಪ್ರತಿಭೆ ತ್ಯಾಜ್ಯ ಸಂಸ್ಕರಣೆಯ ಬಗ್ಗೆ ನೂತನ ವಿಧಾನವನ್ನು ಪ್ರತಿಪಾದಿಸಿದಲ್ಲದೆ, ಯೋಜನೆಯನ್ನು ಡಾ|ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ದರು. ರಂಗ ಭೂಮಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.

ಕೃಷ್ಣ ಕಿಶೋರ ಪೆರ್ಮುಖ
ದೃಷ್ಟಿಯಿಲ್ಲದಿದ್ದರೂ ಸಂಗೀತ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯಿಂದ ಕೃಷ್ಣ ಕಿಶೋರ ಪೆರ್ಮುಖ ಅವರು ಕೀ ಬೋರ್ಡ್‌ ಸ್ವತಃ ಕಲಿತು ಅಚ್ಚರಿ ಮೂಡಿಸಿದ ಕಲಾವಿದ. 7ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಆರಂಭಿಸಿದ ಕೃಷ್ಣ ಕಿಶೋರ್‌ ಎರಡು ವರ್ಷಗಳ ಕಾಲ ಕುದುಮಾರು ವೆಂಕಟ್ರಾಮನ್‌ ಅವರಿಂದ ಸಂಗೀತಾಭ್ಯಾಸ ಮಾಡಿದ್ದು, ಆ ಬಳಿಕ ವಿದುಷಿ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ ಅವರಲ್ಲಿ ಅಭ್ಯಾಸ ಮಾಡಿ ಜೂನಿಯರ್‌ ಪರೀಕ್ಷೆ ತೇರ್ಗಡೆಯಾಗಿದ್ದಾರೆ.

ವೆಳ್ಳಿಕೋತ್‌ ವಿಷ್ಣು ಭಟ್ ಅವರಲ್ಲಿ 10 ವರ್ಷ ಕಾಲ ಉಚಿತ ಶಿಕ್ಷಣವನ್ನು ಪಡೆದಿದ್ದು, ಇದೀಗ ವಿದುಷಿ ಗೀತಾ ಸಾರಡ್ಕ ಅವರಿಂದ ಸಂಗೀತಾಭ್ಯಾಸ ಮಾಡುತ್ತಿದ್ದು, ಇವರ ಮಾರ್ಗದರ್ಶನಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 8 ನೇ ವಯಸ್ಸಿನಿಂದಲೇ ಸಂಗೀತ, ಕೀಬೋರ್ಡ್‌ ವಾದನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಡಾ|ಯು.ಮಹೇಶ್ವರಿ
ಕನ್ನಡದ ಪ್ರಸಿದ್ಧ ಲೇಖಕಿಯರಲ್ಲಿ ಒಬ್ಬರಾಗಿರುವ ಡಾ|ಯು.ಮಹೇಶ್ವರಿ ಅವರು ಮಹತ್ವದ ಸಂಶೋಧಕಿಯೂ, ವಿಮರ್ಶಕಿಯೂ ಆಗಿದ್ದಾರೆ. ಉಡುಪಿಯ ಎಂ.ಜಿ.ಎಂ. ಕಾಲೇಜು ಹಾಗು ಕಾಸರಗೋಡಿನ ಸರಕಾರಿ ಕಾಲೇಜುಗಳಲ್ಲಿ ಸುದೀರ್ಘ‌ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಅವರು ಕೆಲಕಾಲ ಕಣ್ಣೂರು ವಿ.ವಿ. ಪ್ರಾದೇಶಿಕ ಭಾಷಾ ಅಧ್ಯಯನಾಂಗದ ನಿರ್ದೇಶ ಕಿಯಾಗಿದ್ದರು. ನಾಡಿನಾದ್ಯಂತ ನೂರಾರು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಣ್ಣೂರು ವಿಶ್ವವಿದ್ಯಾಲಯದ ಸಂಶೋಧನ ಮಾರ್ಗದರ್ಶಕಿಯಾಗಿದ್ದಾರೆ. ‘ಮುಗಿಲ ಹಕ್ಕಿ’, ‘ಇದು ಮಾನುಷಿಯ ಹಾಡು’, ‘ಅಟ್ಟುಂಬೊಳದ ಪಟ್ಟಾಂಗ’ ಮುಂತಾದ ಇವರ ಪ್ರಕಟಿತ ಕೃತಿಗಳು. ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಮಹೇಶ್ವರಿ ಯು. ಸದಾ ಓದು ಬರಹಗಳಿಗೆ ತನ್ನನ್ನು ತಾನು ಮುಡಿಪಾಗಿರಿಸಿಕೊಂಡ ಸಾಹಿತ್ಯ ಪ್ರೇಮಿ. ಕನ್ನಡ ಹೋರಾಟದಲ್ಲೂ ಸಕ್ರಿಯರು.

ಕೃಷ್ಣ ಜಿ.ಮಂಜೇಶ್ವರ
ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ಸಕ್ರಿಯವಾಗಿರುವ ಕೃಷ್ಣ ಜಿ.ಮಂಜೇಶ್ವರ ಅವರು ರಂಗಭೂಮಿ ಕ್ಷೇತ್ರದಲ್ಲಿ ಗಮನ ಸೆಳೆದವರು. 8ನೇ ತರಗತಿಯಿಂದ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಅವರು ಅಭಿನಯ, ನಾಟಕ ರಚನೆಯಿಂದ ಖ್ಯಾತರು. ‘ಬಲಿಪಶು’ ನಾಟಕದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸಿದ ಬಳಿಕ ಹಿಂದೆ ನೋಡಿಲ್ಲ. ಗಂಗೆಗೌರಿ, ಈ ಕಲ್ಲ್ ಸಾಕ್ಷಿ, ಮೆಗ್ಗೆ-ಪಲಯೆ, ದೊಂಬರಾಟ, ಮಾಮಿಂಗಾವಂತಿ ಮರ್ಮಾಲ್, ಬಾಳ್ವೆದಾಂತಿ ಪ್ರೀತಿ, ದಾಯೆ ಪಂಡಿಜರ್‌, ಅಕ್ಕ ಬತ್ತಿ ಬೊಕ್ಕ, ಬಂಗಾರ್‌ ಕಂಡನಿ ಇಂತಹ ನೂರಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಾಳ್ವೆದಾಂತಿ ಪ್ರೀತಿ, ದಾಯೆಪಂಡಿಜರ್‌, ಕತೆಯಾನ್‌ ಪನ್ಪೆ, ಬರುವೆರಾ, ಏರ್ಲಾ ಸರಿಇಜ್ಜೆರ್‌, ಮುಗಿನಂತಿ ಕತೆ, ಗುಟ್ಟು ಬುಡೊಚಿರ, ಅಕ್ಕ ಬತ್ತಿ ಬೊಕ್ಕ, ಒಟ್ಟಿಗೆ ಪೋಯಿ, ಎಲ್ಲ ಗೊತ್ತಾವು, ತಿರ್ಗ್‌ದ್‌ ತೂಲೆ, ಎಡ್ಡೆಡುಪ್ಪುಗ, ಸಾದಿ ತಪ್ಪೊಡ್ಚಿ, ಎಡ್ಡೆ ಆತ್‌ಂಡ್‌, ಆರ್‌ ಪನ್ಲಕ, ಸುದ್ದಿ ತಿಕ್ಕ್ಂಡ್‌, ಅಂಚಗೆ-ಇಂಚಗೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. 1995 ನ.5 ರಂದು ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ತಂಡವನ್ನು ಸ್ಥಾಪಿಸಿದ ಅವರನ್ನು ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಅರಸಿಕೊಂಡು ಬಂದಿವೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.