ಮೊಕದ್ದಮೆ ಬುಡಮೇಲು: ಕಾಂಗ್ರೆಸ್ನಿಂದ ಪ್ರತಿಭಟನ ಸಂಗಮ
Team Udayavani, Nov 8, 2019, 5:46 AM IST
ಕಾಸರಗೋಡು: ವಾಳಯೂರ್ ಘಟನೆಗೆ ಸಂಬಂಧಿಸಿ ಮೊಕದ್ದಮೆಯನ್ನು ಬುಡಮೇಲುಗೊಳಿಸಿದ ಸರಕಾರದ ನಿಲುವು ವಿರುದ್ಧ, ಕೇಂದ್ರ – ರಾಜ್ಯ ಸರಕಾರಗಳ ಜನ ವಿರೋಧಿ ಧೋರಣೆಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಪ್ರತಿಭಟನ ಸಂಗಮ ನಡೆಯಿತು.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಪ್ರತಿಭಟನ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಂಞಿಕಣ್ಣನ್, ಕಾರ್ಯದರ್ಶಿಗಳಾದ ಕೆ.ನೀಲಕಂಠನ್, ಜಿ.ರತಿ ಕುಮಾರ್, ಐಕ್ಯರಂಗದ ಸಂಚಾಲಕ ಎ.ಗೋವಿಂದನ್ ನಾಯರ್ ಮಾತನಾಡಿದರು.